Saturday, July 27, 2024
Google search engine
Homeಜಸ್ಟ್ ನ್ಯೂಸ್ಜೆಡಿಎಸ್, ಕಾಂಗ್ರೆಸ್ ನಾಟಕ: ಸುರೇಶಗೌಡ ವ್ಯಂಗ್ಯ

ಜೆಡಿಎಸ್, ಕಾಂಗ್ರೆಸ್ ನಾಟಕ: ಸುರೇಶಗೌಡ ವ್ಯಂಗ್ಯ

ತುಮಕೂರು: ಹೆಬ್ಬೂರು- ಗೂಳೂರು ಭಾಗದ ಜನರ ಕಷ್ಟಗಳನ್ನು ಜೆಡಿಎಸ್, ಕಾಂಗ್ರೆಸ್ ರಾಜಕೀಯ ನೆಲೆಗೆ ಬಳಸಿಕೊಂಡವೆ ಹೊರತು ಅಧಿಕಾರದಲ್ಲಿದ್ದಾಗ ಜನರಿಗೆ ನೀರು ಕೊಡಲಿಲ್ಲ. ನಾನು ಶಾಸಕನಾದ ಮೇಲೆ ಬಿಜೆಪಿ ನೀರು ನೀಡಿತು. ಈ ಯೋಜನೆಗೆ ಅನುಮತಿ ನೀಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಆಗ ಅವರು ನೀರಾವರಿ ಸಚಿವರಾಗಿದ್ದರು. ಅವರಿಗೆ ನಾನು, ಕ್ಷೇತ್ರದ ಜನರು ಋಣಿಯಾಗಿದ್ದೇವೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡರು ಹೇಳಿದರು.


ಬುಧವಾರ ಶಕ್ತಿ ಸೌಧ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕನಾಗಿದ್ದರೂ ಸಹ ಕ್ಷೇತ್ರದ ದೇವಸ್ಥಾನಗಳಿಗೆ ಅನುದಾನ ತಂದು ಅಭಿವೃದ್ಧಿ ಪಡಿಸಿರುವೆ ಎಂದು.

ವೃಷಭಾವತಿ ನದಿ ನೀರು ಯೊಜನೆಗೆ ತಾಲ್ಲೂಕಿನ ಕೆರೆಗಳನ್ನು ಸೇರಿಸಿದ್ದೇನೆ. ಕಾಲುವೆ ಮೂಲಕ ಹೇಮಾವತಿ ನದಿ ನೀರಿನ ಯೋಜನೆಗೆ ನನ್ನ ಕನಸಾಗಿದೆ ಎಂದರು.


ಜೆಡಿಎಸ್ ಅಧಿಕಾರಕ್ಕೆ ಬಂದರೂ ಯೋಜನೆ ಜಾರಿಗೊಳಿಸಲಿಲ್ಲ. ಯೋಜನೆ ನಾನು ಜಾರಿಗೊಳಿಸಿದೆ. ಜೆಡಿಎಸ್ ಶಾಸಕ ಕೆರೆಗಳಿಗೆ ನೀರು ತುಂಬದಂತೆ ತಡೆದರು ಎಂದು ಆರೋಪಿಸಿದರು.


20 ಸಾವಿರ ರೈತರಿಗೆ ಉಚಿತ ಟಿ.ಸಿ. ಕೊಡಿಸಿದ್ದೇನೆ. ರಸ್ತೆ, ಶಾಲೆಗಳ ಅಭಿವೃದ್ಧಿ ಗಾಗಿ ಕ್ಷೇತ್ರ ನಾಡಿನ ಗಮನ ಸೆಳೆದಿದೆ. ಮುಂದಿನ ಸಲ ನಾನು ಗೆದ್ದರೆ ಕ್ಷೇತ್ರವನ್ನು ದೇಶದ ನಂ 1 ಅಭಿವೃದ್ಧಿ ಕ್ಷೇತ್ರವಾಗಿ ಮಾರ್ಪಡಿಸುವೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ,
ಸಿದ್ದಗಂಗಾ ಮಠಾದೀಶರಾದ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ಗೋಪಾಲಯ್ಯ, ಶಾಸಕ ಜ್ಯೋತಿ ಗಣೇಶ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?