Friday, March 29, 2024
Google search engine
Homeಜಸ್ಟ್ ನ್ಯೂಸ್ಅಂಕೆಗೆ ಸಿಗದ ಸೋಂಕು: ಕೋವಿಡ್ ಪರೀಕ್ಷೆಗೆ ಹೊಸ ರೂಲ್ಸ್

ಅಂಕೆಗೆ ಸಿಗದ ಸೋಂಕು: ಕೋವಿಡ್ ಪರೀಕ್ಷೆಗೆ ಹೊಸ ರೂಲ್ಸ್

ತುಮಕೂರು: ಅಂಕೆಗೆ ಸಿಗದಂತೆ ನಾಗಾಲೋಟದಲ್ಲಿ ಓಡುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಹೊಸ ರೂಲ್ಸ್ ಇಂದಿನಿಂದ ಜಾರಿಗೆ ಬಂದಿದೆ.

ಇಂದಿನಿಂದ ಎಲ್ಲೆಂದರಲ್ಲಿ ಸೋಂಕಿತರನ್ನು ಪತ್ತೆ ಹಚ್ಚಲು ನಡೆಸುತ್ತಿದ್ದ ರಾಂಡಮ್ ಪರೀಕ್ಷೆ ನಡೆಸಿದಿರುವಂತೆ ರಾಜ್ಯ ಸರ್ಕಾರ ಆದೇಶಿಸಿ ಸುತ್ತೋಲೆ ಹೊರಡಿಸಿದೆ.

ಸೋಂಕು ಪತ್ತೆ ಹಚ್ಚಲು ಬಸ್ ನಿಲ್ದಾಣಗಳು, ಮನೆಗಳಿಗೆ ತೆರಳಿ ಜನರು ಕೇಳಲಿ, ಬಿಡಲಿ ಅವರನ್ನು ಪರೀಕ್ಷೆಗೆ ಒಳಪಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು.

ಇದೇ ಕಾರಣದಿಂದ ಪರೀಕ್ಷೆಯ ವರದಿ ವಿಳಂಬವಾಗುತ್ತಿತ್ತು. ಇದು ರೋಗಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ರೋಗ ವಾಸಿಯಾದರೂ ಪರೀಕ್ಷಾ ವರದಿ ಬರುವುದಿಲ್ಲ ಎಂಬಂತಾಗಿತ್ತು.

ಇದರಿಂದ ಹೆಚ್ಚೆತ್ತುಕೊಂಡಿರುವ ಸರ್ಕಾರ, ತಜ್ಞರ ವರದಿಯಂತೆ ಇನ್ನು ಮುಂದೆ ರೋಗ ಲಕ್ಷಣಗಳಿರುವವರು, ಸೋಂಕಿತ ವ್ಯಕ್ತಿಗಳ ಮನೆಯ ಸದಸ್ಯರು, ಅವರ ನೇರ ಸಂಪರ್ಕಕ್ಕೆ ಬಂದವರನ್ನು ಮಾತ್ರವೇ ಪರೀಕ್ಷೆ ನಡೆಸಬೇಕೆಂದು ಸೂಚಿಸಿದೆ.

ಇದರಿಂದ ಪ್ರಯೋಗಾಲಯಗಳ ಮೇಲೆ ಒತ್ತಡ ಕಮ್ಮಿಯಾಗಲಿದ್ದು, ಒಂದೇ ದಿ‌ನದಲ್ಲಿ ವರದಿ ನೀಡಬಹುದಾಗಿದೆ. ಇದು ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?