Wednesday, December 6, 2023
spot_img
HomeUncategorizedಗೌಡರ ಹೆಸರಲ್ಲಿ ಪೂಜೆ; ಪ್ರಚಾರ ಆರಂಭಿಸಿದ ಗ್ರಾಮಸ್ಥರು

ಗೌಡರ ಹೆಸರಲ್ಲಿ ಪೂಜೆ; ಪ್ರಚಾರ ಆರಂಭಿಸಿದ ಗ್ರಾಮಸ್ಥರು

ತುಮಕೂರು: ರಾಮನವಮಿಯ ಕಾರಣ ಮಾಜಿ ಶಾಸಕ ಬಿ.ಸುರೇಶಗೌಡರ ಗೆಲುವಿಗೆ ವಿಶೇಷ ಪೂಜೆ ನೆರವೇರಿಸಿದ ಹೆಬ್ಬೂರು ಸಮೀಪದ ಕಂಬಾಳಪುರ ಗ್ರಾಮಸ್ಥರು ಚುನಾವಣಾ ಪ್ರಚಾರ ಆರಂಭಿಸಿದರು.

ಇಂದಿನಿಂದಲೇ ಊರಿನಲ್ಲಿ ಮನೆ ಮನೆ ಪ್ರಚಾರ ಆರಂಭಿಸಿದ್ದೇವೆ. ಸುರೇಶಗೌಡರ ಗೆಲುವಿಗೆ ಗ್ರಾಮದ ದೇವರಲ್ಲಿ ಬೇಡಿಕೊಂಡು ಪ್ರಚಾರ ಆರಂಭಿಸಿದ್ದೇವೆ ಎಂದು ಗ್ರಾಮದ ಮುಖಂಡ‌ ಶಿವಕುಮಾರ್ ತಿಳಿಸಿದರು.

ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ, ಕೆಲಸ ಸಿಗಬೇಕು. ಈ ಸಲ ಸುರೇಶಗೌಡರು ಗೆದ್ದರೆ ರಪ್ತೋಧ್ಯಮ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದಾರೆ. ನಮ್ಮೂರಷ್ಟೇ ಅಲ್ಲ ನಮ್ಮೂರಿನ ಜನರು ನಮ್ಮ ಹೋಬಳಿಯ ಎಲ್ಲ ಕಡೆ ಸ್ವಯಂ ಪ್ರೇರಿತರಾಗಿ ತೆರಳಿ ಪ್ರಚಾರ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದರು.

ಪೂಜಾ ಕಾರ್ಯಕ್ರಮದಲ್ಲಿ ಬ್ಯಾಟರಾಮಯ್ಯ, ರಂಗರಾಜು, ಶಿವಕುಮಾರ್, ವೆಂಕಟರಂಗಯ್ಯ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು