Publicstory
Tumkuru: ಸಂಯುಕ್ತ ಕಿಸಾನ್ ಮೋರ್ಚಾದ ಕರೆಯಂತೆ ರಾಜ್ಯದಲ್ಲೂ ಗಾಂಧೀಜಿ ಹುತಾತ್ಮರಾದ ದಿನವಾದ ಜನವರಿ 30ರಂದು ಶನಿವಾರ ಉಪವಾಸ ಸತ್ಯಾಗ್ರಹವನ್ನು ನಗರದ ಕೇಂದ್ರದ ಟೌನ್ ಹಾಲ್ ವೃತ್ತದಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ, ಉಪವಾಸ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಕನಾ೯ಟಕ ರಾಜ್ಯ ರೈತ ಸಂಘದ ಎರಡು ಬಣಗಳು, ಕೆ.ಪಿ.ಆರ್. ಎಸ್, ಆರ್.ಕೆ.ಎಸ್., ಎ.ಐ.ಕೆ.ಎಸ್., ಜೆಸಿಟಿಯು, ವಿದ್ಯಾರ್ಥಿ-ಯುವಜನ ಸಂಘಟನೆ,ದಲಿತ ಸಂಘಟನೆಗಳು, ಕೊಳಗೇರಿ ಹಿತ ರಕ್ಷಣಾ ಸಮಿತಿ, ಮಹಿಳಾ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ನೇತೃತ್ವನೀಡಲಿವೆ.
ಆದ್ದರಿಂದ ಮುಖಂಡರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆಗಳ ಪರವಾಗಿ ದೊರೈರಾಜು, ಸಿ. ಯತಿರಾಜು, ಬಿ. ಉಮೇಶ್,
ಎ. ಗೋವಿಂದರಾಜು, ಶಂಕರಪ್ಪ,
ಕೆ.ಎಸ್. ಧನಂಜಯಾರಾಧ್ಯ, ಆಜ್ಜಪ್ಪ, ಎಸ್.ಎನ್. ಸ್ವಾಮಿ, ಕಂಬೇಗೌಡ,
ಎ. ನರಸಿಂಹಮೂತಿ೯, ಡಾ. ಆರುಂಧತಿ, ಡಾ.ಬಸವರಾಜು,
ಪಿ.ಎನ್.ರಾಮಯ್ಯ, ಸೈಯದ್ ಮುಜೀಬ್, ಗಿರೀಶ, ಮಂಜುಳ,
ಈ.ಶಿವಣ್ಣ, ಜಿ. ದಶ೯ನ್, ಆಶ್ವಿನಿ ಮುಂತಾದವರು ವಿನಂತಿಸಿದ್ದಾರೆ.