Tuesday, July 23, 2024
Google search engine
Homeತುಮಕೂರು ಲೈವ್ಬದಲಾವಣೆ ಏಕೆ ಸಾಧ್ಯವಿಲ್ಲ ಎಂದ ಪ್ರೊ.ಪರಶುರಾಮ್

ಬದಲಾವಣೆ ಏಕೆ ಸಾಧ್ಯವಿಲ್ಲ ಎಂದ ಪ್ರೊ.ಪರಶುರಾಮ್

Publicstory


ತುಮಕೂರು: ಯುವಜನತೆ ಸ್ವಯಂ ಜಾಗೃತರಾದಾಗ ಮಾತ್ರ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಡಾ. ಕೆ.ಜಿ. ಪರಶುರಾಮ್
ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಕೇಂದ್ರ ಯುವ ಕಾರ್ಯ ಹಾಗೂ ಕ್ರೀಡಾ
ಸಚಿವಾಲಯ ನೆಹರು ಯುವ ಕೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಾತ್ಮ
ಗಾಂಧಿ ಯುವ ಸಂಘ, ಪ್ರಬುದ್ಧ ಭಾರತ ಏಕತಾ ಟ್ರಸ್ಟ್, ಸ್ನಾತ್ತಕೋತ್ತರ ಸಮಾಜ
ಕಾರ್ಯ ಅಧ್ಯನ ಮತ್ತು ಸಂಶೋಧನಾ ವಿಭಾಗ ತುಮಕೂರು ವಿಶ್ವವಿದ್ಯಾನಿಲಯ
ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಯುವ
ಮುಂದಾಳತ್ವ ಸಮುದಾಯ ಅಭಿವೃದ್ಧಿ ಹಾಗೂ ಯುವ ಸಂಘಗಳ ಅಭಿವೃದ್ಧಿ
ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದರು.

ಯುವಜನತೆ ವಿದ್ಯಾರ್ಥಿ
ದಿಸೆಯಲ್ಲೇ ಅಭಿವೃದ್ಧಿಪರ ಆಲೋಚನೆಯನ್ನು ರೂಢಿಸಿಕೊಳ್ಳಬೇಕು ಎಂದರು.

ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ
ಸಂಘಟನಾತ್ಮಕವಾಗಿ ಯುವಜನತೆ ಗ್ರಾಮೀಣ ಅಭಿವೃದ್ಧಿಗೆ ಮುಂದಾಗಬೇಕು.
ಸಂಶೋಧನ್ಮಾಕ ಮತ್ತು ವಿಮರ್ಶತ್ಮಾಕ ಅಧ್ಯಯನ ಮಾಡುವ ಕಡೆ ಹೆಚ್ಚಿನ
ಒತ್ತು ನೀಡಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಯುವ ಸಂಘಗಳ ಮೂಲಕ ಸಂಘಟನಾತ್ಮಕವಾಗಿ ಜನರಿಗೆ ಶಿಕ್ಷಣ,ಆರೋಗ್ಯ, ಕಾನೂನು ಸೇರಿಂದತೆ ಹಲವು ಸರಕಾರದ ಯೋಜನೆಗಳ ಮಾಹಿತಿಯನ್ನು ತಲುಪಿಸಬಹುದಾಗಿದೆ. ಆಗಾಗಿ ಆವಕಾಶ ವಂಚಿತರಿಗೆ ಆವಕಾಶ ಸೃಷ್ಟಿಯಾಗುತ್ತದೆ. ಮಾಹಿತಿ ಕೊರತೆಯಿಂದ ಎಷ್ಟೊ ಮಂದಿ
ಆವಕಾಶವಂಚಿತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬರು ನಿಸ್ವಾರ್ಥ
ಸೇವಾಮನೋಬಾವ ರೂಢಿಸಿಕೊಳ್ಳಬೇಕು ಎಂದರು.

ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಸಹಾಯಕ ನಿರ್ದೇಶಕ ಡಾ. ಕೆ. ನಾಗಣ್ಣ
ಮಾತನಾಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅರ್ಥಿಕವಾಗಿ
ಸಬಲರಾಗುವ ಜತೆಗೆ ಗ್ರಾಮೀಣ ಅರ್ಥಿಕತೆಗೆ ಚೈತನ್ಯ ತುಂಬಬಹುದಾಗಿದೆ. ಹೈನುಗಾರಿಕೆ
ಲಾಭದಾಯಕವಾಗಿದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ನಾವು
ರೂಪಿಸಿಕೊಂಡಿರುವ ಯೋಜನೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಬಾ.ಹ ರಮಾಕುಮಾರಿ ಮಾತನಾಡಿ
ಯುವಜನತೆ ಯುವ ಸಂಘಗಳ ಮೂಲಕ ಸಾಹಿತ್ಯತ್ಮಾಕ ಚಟುವಟಿಕೆಯಲ್ಲಿ
ತೊಡಗಿಸಿಕೊಳ್ಳುವ ಜತೆಗೆ ಪ್ರಶ್ನಿಸುವ ಮನೋಬಾವ ರೂಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅಂತರಾಷ್ಟ್ರೀಯ ಕಬಡ್ಡಿ ತರಬೇತುದಾರ ಮೊಹಮ್ಮದ್ ಇಸ್ಮಾಯಿಲ್, ಜನಸಂಗ್ರಾಮ
ಪರಿಷತ್ತು ಅಧ್ಯಕ್ಷ ಎನ್.ಎಸ್. ಪಂಡಿತ್ ಜವಾಹರ್, ವಿದ್ಯೋದಯ ಕಾನೂನು ಕಾಲೇಜಿನ
ಸಹಾಯಕ ಪ್ರಾದ್ಯಾಪಕಿ ಕೆ.ಎಸ್. ಪುಷ್ಪ ವಿಶೇಷ ಉಪಾನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನೆಹರು ಯುವಕೇಂದ್ರದ ಎನ್‍ವೈವಿಗಳಾದ ವಿಜಯ್‍ಕುಮಾರ್,
ಅನಿತಾ, ರಶ್ಮಿ ಇನ್ನಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?