Wednesday, December 6, 2023
spot_img
Homeತುಮಕೂರು ಲೈವ್ಅತಿಥಿ ಶಿಕ್ಷಕರ‌ ನೋವಿಗೆ ಕರಗಿದ ಜಪಾನಂದ ಶ್ರೀ: ಶಿಕ್ಷಕರಿಗೆ ಸರ್ಕಾರ ನೆರವಾಗಲಿ...

ಅತಿಥಿ ಶಿಕ್ಷಕರ‌ ನೋವಿಗೆ ಕರಗಿದ ಜಪಾನಂದ ಶ್ರೀ: ಶಿಕ್ಷಕರಿಗೆ ಸರ್ಕಾರ ನೆರವಾಗಲಿ…

Public story


ಪಾವಗಡ: ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸುವತ್ತ ಸರ್ಕಾರ ಒತ್ತು ನೀಡಬೇಕು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ ಪಡಿತರ ಕಿಟ್ ವಿತರಿಸಿ ಅವರು ಮಾತನಾಡಿದರು.
ಅತಿಥಿ ಶಿಕ್ಷಕರ ಸೇವೆ “ಹೈರ್ ಅಂಡ್ ಫೈರ್” ಎಂಬಂತಾಗಿದೆ. ಅಗತ್ಯವಿರುವಾಗ ಅವರ ಸೇವೆ ಬಳಸಿಕೊಂಡು ನಂತರ ಕೈಬಿಟ್ಟರೆ ಜೀವನ ನಡೆಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಎಲ್ಲ ಶಿಕ್ಷಕರಿಗೂ ಸೂಕ್ತ ಸ್ಥಾನಮಾನ ದೊರಕಬೇಕು. ಶೀಘ್ರದಲ್ಲಿಯೇ ಸೇವಾ ಭದ್ರತೆ ನೀಡಬೇಕು. ಈ ನಿಟ್ಟಿನಲ್ಲಿ ಸಚಿವರು,, ಅಧಿಕಾರಿಗಳಲ್ಲಿ ವಿಚಾರ ವಿಮರ್ಶೆ ಮಾಡಲಾಗುವುದು ಎಂದರು.

ಪುರಸಭೆ ಸದಸ್ಯ ಜಿ.ಎಸ್. ಸುದೇಶ್ ಬಾಬು, ಶಿಕ್ಷಕರು ಖಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಮೂರನೆ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ತಿಳಿಸುತ್ತಿದ್ದಾರೆ. ಹೀಗಾಗಿ ಪೋಷಕರು, ಶಿಕ್ಷಕರು ಲಸಿಕೆ ಪಡೆದಲ್ಲಿ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ನಾವುಗಳೆ ಮಕ್ಕಳ ಜೀವಕ್ಕ ಅಪಾಯವಾಗಬೇಕಾಗುತ್ತದೆ ಎಂದರು.

ಅನುದಾನ ರಹಿತ ಶಾಲೆಗಳ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸನ್ನ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಪವನ್ ಕುಮಾರ್ ರೆಡ್ಡಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು, ಶಿವಕುಮಾರ್, ಸಾದಿಕ್, ವಿವೇಕ ಬ್ರಿಗೇಡಿನ ಲೋಕೇಶ್ ದೇವರಾಜ್, ವೇಣುಗೋಪಾಲರೆಡ್ಡಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು