Saturday, July 27, 2024
Google search engine
Homeಜನಮನಅಬ್ಬಾ! ಹ್ಯಾಟ್ಸಾಪ್ ಲೇಖಕಿಯರೇ...

ಅಬ್ಬಾ! ಹ್ಯಾಟ್ಸಾಪ್ ಲೇಖಕಿಯರೇ…

Publicstory


ತುಮಕೂರು: ಲೇಖಕಿ ಮಲ್ಲಿಕಾ ಬಸವರಾಜ್ ಅವರ ಲೇಖನ ಓದುವರೆಗೂ ನನಗೇ ಗೊತ್ತೇ ಇರಲಿಲ್ಲ. ತುಮಕೂರಿನ ಲೇಖಕಿಯರು ಎಷ್ಟೆಲ್ಲ ಕೆಲಸ ಮಾಡಿದ್ದಾರೆ.

ಒಂದು ಕಸಾಪ ಮಾಡುವಷ್ಟು ಕೆಲಸ. ಆದರೂ ಯಾಕೆ ಇದು ಜನರ ನಡುವಿನ ಜಾನಪದವಾಗಲಿಲ್ಲ…

ಪ್ರಸಿದ್ಧ ಸಾಹಿತಿಗಳನೇಕರು ಬಟ್ಟೆ ಮುದುರಿಕೊಂಡು ಬಾಯಿಯೇ ಇಲ್ಲವೆಂಬಂತೆ ಬಾಯಿ ಹೊಲೆದುಕೊಂಡು ಕುಳಿತಿರುವಾಗ ನಮ್ಮ ತುಮಕೂರಿನ ಲೇಖಕಿಯರ ಸಂಘ ಸಮಾಜಕ್ಕೆ ಎಷ್ಟೆಲ್ಲ ಮುಖಾಮುಖಿಯಾಗಿದೆ ಎನ್ನುವುದೇ ಅಚ್ಚರಿ ಎನ್ನಿಸುತ್ತದೆ.

ತಮ್ಮದೇ ಜಾಲಾರ http://jaalaarablogspot.com ಮೂಲಕ ಮತ್ತೊಂದು ಮಗ್ಗಲಿಗೆ ಜಾರಿರುವ ಲೇಖಕಿಯರ ಸಂಘ ನಡೆದುಬಂದ ಬಗ್ಗೆ ಮಲ್ಲಿಕಾಬಸವರಾಜ್ ಬರೆದಿರುವ ಲೇಖನದ ಯಥಾವತ್ ಇಲ್ಲಿದೆ.


1985 ರಲ್ಲಿ ,ಕರ್ನಾಟಕ ಲೇಖಕಿಯರ ಸಂಘದ ಕೇಂದ್ರ ಶಾಖೆಯ ಅಧ್ಯಕ್ಷರಾಗಿದ್ದಂತಹ H.S.ಪಾರ್ವತಿ ರವರು ,ಸಂಘದ ಮೊದಲನೆ ಜಿಲ್ಲಾ ಶಾಖೆಯಾಗಿ ,ತುಮಕೂರು ಜಿಲ್ಲಾ ಶಾಖೆಯನ್ನು ದಿ:22-12-1985 ರಂದು ಉದ್ಘಾಟಿಸಿದರು.ಆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿ.ನಾರಾಯಣ ರವರು ವಹಿಸಿದ್ದರು.

ಹೀಗೆ ಹಿರಿಯರಿಂದ ಉದ್ಘಾಟನೆಯಾದ ರಾಜ್ಯದಲ್ಲೇ ಮೊಟ್ಟಮೊದಲ ಜಿಲ್ಲಾಶಾಖೆಯಾದ ತುಮಕೂರು ಜಿಲ್ಲಾ ಶಾಖೆ ಯ ಮೊದಲ ಅಧ್ಯಕ್ಷರು ಬಾ.ಹ .ರಮಾಕುಮಾರಿ.
ಜಿಲ್ಲೆಗೆ ಕಲೇಸಂ ತರಬೇಕೆನ್ನುವ ಅವರ ಉತ್ಸಾಹದಿಂದಾಗಿ ಮೊದಲ ಜಿಲ್ಲಾಶಾಖೆಯಾಗಿ ಕಲೇಸಂ ತುಮಕೂರು ಜಿಲ್ಲಾ ಶಾಖೆ ಪ್ರಾರಂಭವಾಯಿತು.

ಅಂದಿನಿಂದ ಹತ್ತು ವರ್ಷಗಳ ಕಾಲ ಜಿಲ್ಲಾ ಶಾಖೆಯ ಅಧ್ಯಕ್ಷ ರಾಗಿದ್ದ ಅವರು,ಸಾಹಿತ್ಯಾಸಕ್ತ ಮಹಿಳೆಯರನ್ನು ಸದಸ್ಯರನ್ನಾಗಿ ಮಾಡಿ ,ಹಲವಾರು ಕಾರ್ಯಕ್ರಮ ಗಳನ್ನು ರೂಪಿಸಿದರು .ಸಂಘವನ್ನು ಕಟ್ಟಿ ಬೆಳೆಸಿದರು.
ಇವರ ಅವಧಿಯಲ್ಲಿ ಹಲವಾರು ಸಾಹಿತ್ಯ ಶಿಬಿರಗಳು ವಿಚಾರ ಸಂಕಿರಣ ಗಳು ,ಕವಿಗೋಷ್ಠಿಗಳು ,ಉಪನ್ಯಾಸ ಗಳು ನಡೆದವು.

1989 ರಲ್ಲಿ ವಿವಾದಾಸ್ಪದ ಕೃತಿಗಳಾಗಿದ್ದ ಕೆ ಎಸ್ ಭಗವಾನ್ ರವರ ಬದಲಾವಣೆ ಮತ್ತು ಎಂ.ಎಂ.ಕಲ್ಬುರ್ಗಿ ಯವರ ಮಾರ್ಗ-೧ ಕೃತಿಗಳ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿದರು . 1991 ರಲ್ಲಿ ಪ್ರಥಮ ಬಾರಿಗೆ ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಲೇಖಕಿಯರ ಸಮ್ಮೇಳನ ನಡೆಸಿದರು. ಆನಂತರ ಗುಬ್ಬಿಯಲ್ಲಿ 2ನೇ ಜಿಲ್ಲಾ ಲೇಖಕಿಯರ ಸಮ್ಮೇಳನ ನಡೆಸಿದರು .

ಆನಂತರ ಸಂಘದ ಅಧ್ಯಕ್ಷರಾದವರು ಬಿ.ಸಿ.ಶೈಲಾ ನಾಗರಾಜ್ .ಇವರೂಸಹ 10 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮ ಗಳನ್ನು ಏರ್ಪಡಿಸಿದರು. ಅವುಗಳಲ್ಲಿ ಮುಖ್ಯ ವಾದವು
ತುಮಕೂರು ಜಿಲ್ಲಾ ಶತಮಾನದ ಸಾಹಿತ್ಯ ವಿಚಾರ ಸಂಕಿರಣ
ಗುಬ್ಬಿಯಲ್ಲಿ ಏರ್ಪಡಿಸಿದ್ದ ಲೇಖಕಿಯರಿಗಾಗಿ ಕಾವ್ಯಕಮ್ಮಟ
ಇವರ ಅವಧಿಯಲ್ಲಿ ಲೇಖಕಿಯರಿಗಾಗಿ ಹಲವಾರು ಕಾರ್ಯಾಗಾರ ಗಳನ್ನು ,ವಿಚಾರ ಸಂಕಿರಣಗಳನ್ನು ,ಕವಿಗೋಷ್ಠಿ ಗಳು ಸಮ್ಮೇಳನಗಳನ್ನು ನಡೆಸಿದರು.

ಇವರ ನಂತರ ಸಂಘದ ಅಧ್ಯಕ್ಷರಾದವರು ಅನ್ನಪೂರ್ಣ ವೆಂಕಟನಂಜಪ್ಪ ರವರು .ಇವರು ನಾಲ್ಕು ವರ್ಷಗಳವರೆಗೆ ಅಧ್ಯಕ್ಷರಾಗಿದ್ದರು .ಇವರು ಅಧ್ಯಕ್ಷರಾಗಿಆಯ್ಕೆಯಾದ ವರ್ಷ ಆದಿಕವಿ ಪಂಪನ 1200 ನೇ ವರ್ಷವಾಗಿತ್ತು ಹಾಗಾಗಿ ಪಂಪನ ಕಾವ್ಯವಲೋಕನ , ಕವಿಗೋಷ್ಠಿ ,ಕವನ ಸ್ಪರ್ಧೆ ಏರ್ಪಡಿಸಿದ್ದರು.
ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯ ರಸವಾಹಿನಿ ಎಂಬ ಸರಣಿ ಉಪನ್ಯಾಸವನ್ನು ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಂಡು 30 ಕವಿಗಳ ಪರಿಚಯವನ್ನು ಮಾಡಿಕೊಟ್ಟರು .

ಕುವೆಂಪುರವರ ಜನ್ಮಶತಾಬ್ದಿ ವರ್ಷದಲ್ಲಿ ಕುವೆಂಪುರವರ ಸಾಹಿತ್ಯ ಮತ್ತು ವಿಚಾರಗಳಿಗೆ ಸಂಬಂಧಿಸಿದ ಕುವೆಂಪು ಚಿತ್ರಯಾತ್ರೆ ಎಂಬ ಕಲಾ ಪ್ರದರ್ಶನವನ್ನು ಜಿಲ್ಲೆಯ ಸುಮಾರು 70 ಕ್ಕಿಂತ ಹೆಚ್ಚು ಶಾಲೆಗಳಲ್ಲಿ ಪ್ರದರ್ಶಿಸಿದರು .
ಈ ಯಾತ್ರೆಯನ್ನು ದೇಜಗೌ ರವರು ಉದ್ಘಾಟಿಸಿದ್ದರು .

ನೆನೆವುದೆನ್ನ ಮನಂ ಎಂಬ ಪಂಪನನ್ನೆ ಕುರಿತ ಕವನ ಸಂಕಲನವನ್ನು ಸಂಪಾದಿಸಿ ಬಿಡುಗಡೆಗೊಳಿಸಿದರು .

ಇವರ ನಂತರ ಸಂಘಕ್ಕೆ ಅಧ್ಯಕ್ಷರಾದ ವರು ಎಂ.ಸಿ.ಲಲಿತಾ ರವರು .2006 ರಿಂದ 2012 ರವರೆಗೆ ಆರು ವರ್ಷಗಳ ಕಾಲ ಇವರು ಅಧ್ಯಕ್ಷರಾಗಿದ್ದರು .ಇವರ ಅವಧಿಯಲ್ಲಿ
ಮರೆಯಲಾಗದ ಲೇಖಕಿಯರು ಸರಣಿ ಉಪನ್ಯಾಸವನ್ನು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದರು.

ಲೇಖಕಿಯರಿಗಾಗಿ ರಾಜ್ಯಮಟ್ಟದ ಪತ್ರಿಕೋದ್ಯಮ ಕಮ್ಮಟ ಏರ್ಪಡಿಸಿದ್ದರು .
ಲೇಖಕಿಯರಿಗಾಗಿ ರಾಜ್ಯಮಟ್ಟದ ಕಥಾಕಮ್ಮಟ ಏರ್ಪಡಿಸಿದ್ದರು.
ಜನವರಿ 2013 ರಿಂದ ಜೂನ್ 2019 ರವರೆಗೆ ಸಿ.ಎನ್.ಸುಗುಣಾದೇವಿ ರವರು ಅಧ್ಯಕ್ಷ ರಾಗಿದ್ದರು .

ಇವರ ಅವಧಿಯಲ್ಲಿ
ಮೌಡ್ಯಾಚಾರಗಳ ನಿಷೇಧ ಕುರಿತಂತೆ ಮತ್ತು ವೈಜ್ಞಾನಿಕ ಮನೋವೃತ್ತಿ ಮೂಡಿಸಲು 2 ದಿನಗಳ ಕಾರ್ಯಾಗಾರ ಏರ್ಪಡಿಸಿದ್ದರು.
ನಿರ್ಭಯಳ ಘಟನೆ ಹಿನ್ನೆಲೆಯಲ್ಲಿ ಮಹಿಳಾದೌರ್ಜನ್ಯದ ವಿರುದ್ಧ ಪ್ರಗತಿಪರ ಸಂಘಟನೆಗಳೊಂದಿಗೆ ದಿ: 27-7-2014ರಲ್ಲಿ ಬೃಹತ್ ಜಾಥಾ ನಡೆಸಿದ್ದರು .

ಸಾರ್ವಜನಿಕರಲ್ಲಿ ತಮ್ಮ ಆಪ್ತರ ನೆನಪಿನಲ್ಲಿ ಸಂಘದಲ್ಲಿ ದತ್ತಿ ಇಡಲು ಮತ್ತುಉಪನ್ಯಾಸಗಳನ್ನು ಹಮ್ಮಿಕೊಳ್ಳಲು ಸಹಕರಿಸುವಂತೆ ಕೋರಿದರು , ಇವರ ಮನವಿ ಮೇರೆಗೆ ಬಂದ ಕೋರಿಕೆಗಳ ಪರಿಗಣಿಸಿ ಶ್ರೀನಿವಾಸ್ ಕುಮಾರ್ ನೆನಪಿನ ಕವನ ಸ್ಪರ್ಧೆ ಮತ್ತು ಹೇಮಲತಾ ನೆನಪಿನ ಕಥಾಸ್ಪರ್ಥೆಗಳನ್ನು ಮಾಡಿ ಬಹುಮಾನಗಳನ್ನು ನೀಡಿದ್ದರು.

ಪ್ರಬಂಧ ಕಮ್ಮಟ ಮಾಡಿದ್ದರು
ಕಾವ್ಯ ಸ್ಪಂದನ ಕಾರ್ಯಕ್ರಮಗಳನ್ನು ಕವಿಗೋಷ್ಠಿಗಳನ್ನು ಮಾಡಿದ್ದರು.ಮಾಸ್ತಿ ,ಸಾವಿತ್ರಿ ಬಾಯಿ ಫುಲೆ , ಕೆ.ಎಸ್.ನರಸಿಂಹ ಸ್ವಾಮಿ ,ಎಂ.ಕೆ.ಇಂದಿರಾ.ಗೋಪಾಲಕೃಷ್ಣ ಅಡಿಗರು ,ಕಯ್ಯಾರ ಕಿಞ್ಞಣ್ಣ ರೈರವರ ನೆನಪಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು .
ಸಂಜ್ಯೋತಿರವರ ನಿರ್ದೇಶನದ ಅನಲ ಕಿರು ಚಿತ್ರ ಪ್ರದರ್ಶನ ಮತ್ತು ಸಂವಾದವನ್ನು ತುಮಕೂರು ವಿ.ವಿ.ಸಹಯೋಗದೊಂದಿಗೆ ಹಮ್ಮಿಕೊಂಡಿದ್ದರು.

3 ನೇ ಜಿಲ್ಲಾ ಲೇಖಕಿಯರ ಸಮ್ಮೇಳನವನ್ನು ಹಮ್ಮಿಕೊಂಡಿದ್ದರು .

ಸುಗುಣಾದೇವಿ ರವರ ನಂತರ , ಜೂನ್ 2019 ರಲ್ಲಿ ಸಂಘದ ಅಧ್ಯಕ್ಷ ರಾಗಿ ಬಂದಿರುವುದು ಜಿ.ಮಲ್ಲಿಕಾ ಬಸವರಾಜು ಆದ ನಾನು .
ದಿ:23-06-2019 ರಂದು ನಮ್ಮ ನೂತನ ಸಮಿತಿ ಅಸ್ತಿತ್ವಕ್ಕೆ ಬಂತು .ಅಂದಿನ ಕಾರ್ಯಕಮವನ್ನು ಕೇಂದ್ರ ಸಂಘದ ಅಧ್ಯಕ್ಷರಾದ ಉದ್ಘಾಟಿಸಿದರು.

ಲೇಖಕಿ ಆಶಾದೇವಿ ಎಂ.ಎಸ್. ರವರು “ಲೇಖಕಿಯರ ಸವಾಲುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು .ಅಂದಿನಿಂದ ಈ ವರೆವಿಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಮತ್ತುನಮ್ಮ ಕಾರ್ಯಕಾರಿ ಸಮಿತಿ ಸಹಕಾರದೊಂದಿಗೆ ಸುಮಾರು ಕಾರ್ಯಕ್ರಮಗಳನ್ನು ಮಾಡಿದ್ದು . ಕೆಲವು ಕಾರ್ಯಕ್ರಮ ಗಳನ್ನು ಇಲ್ಲಿ ನೆನಪಿಸಿಕೊಳ್ಳುವೆ .

ದಿ:07-07-2019 ರಂದು ಕಲೇಸಂ ತುಮಕೂರು
ಅಬೇತೋಸಂ ಮತ್ತು
ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಕೊರಟಗೆರೆ ತಾಲ್ಲೋಕು ಹೊಲತಾಳ್ ನಲ್ಲಿ ಮಹಿಳೆಯರಲ್ಲಿ ಓದುವ ಹವ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದಾಗ , ಮಹಿಳೆಯರಲ್ಲಿನ ಓದುವ ಹವ್ಯಾಸದ ಬಗ್ಗೆ ನಟರಾಜು ಬೂದಾಳ್ ರವರುಉಪನ್ಯಾಸ ನೀಡಿದ್ದರು . ನನ್ನ ಮೆಚ್ಚಿನ ಪುಸ್ತಕ ಕುರಿತು ಲೇಖಕಿಯರು/ ವಿದ್ಯಾರ್ಥಿನಿಯರು ಮಾತನಾಡಿದ್ದರು .

ವಸುಂಧರಾ ಭೂಪತಿ ,ಲಲಿತಾ ನಾಯಕ್ ಉಪಸ್ಥಿತರಿದ್ದರು. ಒಂದು ನೂರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು .
ದಿ:29-08-2019 ರಂದು
ತುಮಕೂರಿನ ಮಾರುತಿ ಶಾಲೆಯ ಮಕ್ಕಳಿಗಾಗಿ,ಜಿಲ್ಲೆಯ ಲೇಖಕಿಯರೊಂದಿಗೆ ಸಂವಾದ ಕಾರ್ಯಕ್ರಮ ಉಪನ್ಯಾಸ ಏರ್ಪಡಿಸಲಾಗಿತ್ತು.

ದಿ:02-10-2019 ರಂದು
ಜಿಕಸಾಪ ,ಇನ್ನರ್ ವ್ಹೀಲ್ ಸಹಯೋಗ ಪಡೆದು ಗಾಂದಿ ಜಯಂತಿ ಆಚರಣೆ ,ಉಪನ್ಯಾಸ ,ಕವಿಗೋಷ್ಠಿ ಮತ್ತು ವಾರಕ್ಕೊಮ್ಮೆ ಖಾದಿ ತೊಡುವ ಪ್ರತಿಜ್ಞೆ ಸ್ವೀಕರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನವಂಬರ್ 2019 ರಲ್ಲಿ ಕೇಳು ಮಗುವೆ ಕಥೆಯಾ ಎಂಬ ಸರಣಿ ಕಾರ್ಯಕ್ರಮ ವನ್ನು ರೂಪಿಸಿದ್ದು ,
ಪ್ರತಿ ಶನಿವಾರ ,ಆಯ್ದ ಕನ್ನಡ ಶಾಲೆಗೆ ಸಂಘದ ಪದಾಧಿಕಾರಿಗಳು , ಸದಸ್ಯರೊಂದಿಗೆ ಹೋಗಿ ಮಕ್ಕಳಿಗೆ ಕಥೆ ಹೇಳಿ ಬರುವ ಕಾರ್ಯಕ್ರಮ ಇದಾಗಿದ್ದು , ಜನವರಿ 2020 ರವರೆಗೂ ಈಗಾಗಲೇ 14 ಕಥೆಹೇಳುವ ಕಾರ್ಯಕ್ರಮ ಗಳಾಗಿದ್ದು ,ಕೊರೋನಾ ದೆಸೆಯಿಂದ ಲಾಕ್ ಡೌನ್ ಆದ ಕಾರಣ ಸಧ್ಯಕ್ಕೆ ನಿಲ್ಲಿಸಲಾಗಿದೆ .ಮತ್ತೆ ಶುರು ಮಾಡುವ ಹಾದಿಯಲ್ಲಿದ್ದೇವೆ .

ದಿ:16-03-2020 ರಂದು ,ಶಿವಮೊಗ್ಗ ಜಿಲ್ಲೆ ಉಡುತಡಿಯಲ್ಲಿ ಕೇಂದ್ರ ಸಂಘದವರು ಹಮ್ಮಿಕೊಂಡಿದ್ದ ಚಿಂಥನ ಮಂಥನ ಕಾರ್ಯಕ್ರಮಕ್ಕೆ ,ನಮ್ಮ ಜಿಲ್ಲಾ ಶಾಖೆಯಿಂದಾ ಪಾಲ್ಗೊಂಡು ಬನವಾಸಿ ಪ್ರವಾಸ ಮಾಡಿ ಬಂದೆವು.
ದಿ:29-03-2020 ರಂದು ದೇವರಾಯನ ದುರ್ಗದ ಜಾಲಾರದ ತೋಪಿನಲ್ಲಿ ,ಜಾಲಾರ ಹೂ ವೀಕ್ಷಿಸಿ ಹೂಕವಿತೆಗಳ ವಾಚನ ಮಾಡಿದೆವು
ದಿ:18-02-2020 ರಂದು ಜಿಲ್ಲಾ ಶಾಖೆ ಹಾಗೂ ಜಾಲಾರ ಪ್ರಕಾಶನದಿಂದ ಡಿ.ಎಸ್.ನಾಗಭೂಷಣ ರವರ ಗಾಂಧಿ ಕಥನ ಕೃತಿಯ ಮೂರನೇ ಅವೃತ್ತಿ ಬಿಡುಗಡೆ ಕಾರ್ಯಕ್ರಮ ಮಾಡಿದೆವು

ದಿ:30 ನವಂಬರ್ 2020 ರಲ್ಲಿ ಜೂಮ್ ನಲ್ಲಿ
ಕನ್ನಡಭಾಷೆ ಪ್ರಾಚೀನತೆ ಮತ್ತು ಇತಿಹಾಸ ಉಪನ್ಯಾಸದ ವೆಬಿನಾರ್ ಅನ್ನು ಮಾಡಲಾಯ್ತು. ಮರಿಯಮ್ ರವರು ಉಪನ್ಯಾಸ ಕೊಟ್ಟರು
ದಿ16-12-2029 ರಂದು ಜೂಮ್ ನಲ್ಲಿ
ರೈತ ಚಳುವಳಿ ಗೆ ಸಂಬಂಧಿಸಿದಂತೆ ಉಪನ್ಯಾಸ .ರೈತಪರ ಗೀತೆಗಳ ಗಾಯನ ಕವಿತಾಗಳ ವಾಚನ ದ ವೆಬಿನಾರ್ ಮಾಡಲಾಯ್ತು.

ಎನ್. ಇಂದಿರಮ್ಮ ರವರು ರೈತ ಚಳುವಳಿ ಮತ್ತುಹೊಸದಾಗಿ ಜಾರಿಗೆ ತಂದಿರುವ ರೈತ ಕಾಯ್ದೆಗಳು ಹೇಗೆ ರೈತರಿಗೆ ಮಾರಕವಾಗಿ ಎಂದು ವಿವರವಾಗಿ ತಿಳಿಸಿದರು.

ದಿ 29-12-2029 ರಂದು ,ಕಸಾಪ ,ಇನ್ನರ್ ವ್ಹೀಲ್ ಮರಳೂರು ಮತ್ತು ಕಲೇಸಂ ತುಮಕೂರು ಸಹಯೋಗದಲ್ಲಿ
ವಿಶ್ವಮಾನವ ದಿನಾಚರಣೆ ಮಾಡಲಾಯ್ತು .

ಈ ಮೊದಲೇ ಕಲೇಸಂ ತುಮಕೂರಿನಿಂದ
ಕುವೆಂಪುರವರ ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ
ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನುವಿತರಿಸಲಾಯ್ತು.

ಜನವರಿ – 2021ರಿಂದ ಪ್ರತಿ ಮಾಹೆ ಮೂರನೇ ಶನಿವಾರ ಮಧ್ಯಾಹ್ನ ಅರಿವಿನ ಪಯಣ ಎಂಬ ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದು , ಇದರ ಮೊದಲ ಹೆಜ್ಜೆಯಾಗಿ
ದಿ: 16-01-2021 ರಂದು ಎಂ.ಕೆ.ಇಂದಿರಾ ನೆನಪಿನ ಉಪನ್ಯಾಸ ವನ್ನ ಏರ್ಪಡಿಸಲಾಗಿತ್ತು

ಮೇಲ್ಕಂಡಂತೆ ಆಯಾ ಕಾಲದ

ಒತ್ತಡಗಳಿಗೆ ,ಸಂದರ್ಭಗಳಿಗೆ ,ಜೀವಪರ ಹೋರಾಟಗಳಿಗೆ ಸ್ಪಂದಿಸುತ್ತಲೇ ಸಾಹಿತ್ಯವನ್ನು ಜನರಿಗೆ
ತಲುಪಿಸಿದ ಹೆಗ್ಗಳಿಕೆ ಕಲೇಸಂ ತುಮಕೂರುಜಿಲ್ಲಾ ಶಾಖೆಯದು .ಸಂಘದ ಎಲ್ಲಾ ಕೆಲಸ ಕಾರ್ಯಗಳಿಗೆ
ನಿಮ್ಮೆಲ್ಲರ ಸಹಕಾರ ಶುಭಹಾರೈಕೆ ಕೋರುವೆ .ಲೇಖಕಿಯರ ಸಂಘ ನಿಮ್ಮದು .ಬನ್ನಿ ಕೈಜೋಡಿಸಿ .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?