Saturday, July 27, 2024
Google search engine
HomeUncategorizedಕನ್ನಡಿಗರಿಗೆ ಅನ್ಯಾಯ: ಬೇಸರ

ಕನ್ನಡಿಗರಿಗೆ ಅನ್ಯಾಯ: ಬೇಸರ

ತುರುವೇಕೆರೆ: ಕೇಂದ್ರ ಸರ್ಕಾರದ ಹಲವು ಉದ್ಯೋಗವಕಾಶಗಳು ಬೇರೆ ರಾಜ್ಯಗಳ ಪರೀಕ್ಷಾರ್ಥಿಗಳ ಪಾಲಾಗುತ್ತಿದ್ದು ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಇಂತಹ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೇ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ತುಮಕೂರು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಯುವಕರಿಗೆ ಕರೆ ನೀಡಿದರು.
ತಾಲ್ಲೂಕಿನ ಗುಡ್ಡೇನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುರುಳೀಧರ್ ಹಾಲಪ್ಪ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಕೌಶಲ್ಯ ಪಥ ಯುವ ಸಬಲೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ವಿದ್ಯಾರ್ಥಿಗಳು ಕೇವಲ ಕೆಳಮಟ್ಟದ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಮಾತ್ರ ಯೋಚಿಸದೇ, ದೇಶದ ಆಡಳಿತಾತ್ಮಕ ಐಎಎಸ್, ಐಪಿಎಸ್ ನಂತಹ ಉತ್ತಮ ದರ್ಜೆಯ ಕೆಲಸಕ್ಕೂ ಪ್ರಯತ್ನ ಮಾಡಬೇಕು. ಹೆಚ್ಚು ತರಬೇತಿಗಳನ್ನು ಪಡೆಯಬೇಕು, ಹೆಚ್ಚು ಪುಸ್ತಕಗಳನ್ನು ಓದಬೇಕು. ಆಗ ಸಹಜವಾಗಿ ಜ್ಞಾನಬಂಡಾರ ಹೆಚ್ಚಾಗಿ ಸ್ಪರ್ಧಾತ್ಮಕವಾಗಿ ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ
ಯುವಕರು ಕೇವಲ ಸರ್ಕಾರಿ ಕೆಲಸಕ್ಕೆ ಮಾತ್ರ ಸೀಮಿತವಾಗಬಾರದು. ಯಾವುದೇ ಸರ್ಕಾರ ಎಲ್ಲವನ್ನೂ ಕೊಡಲು ಸಾಧ್ಯವಿಲ್ಲ. ಬದಲಾಗಿ ಸ್ವಯಂ ಉದ್ಯೋಗವನ್ನು ಸೃಷ್ಠಿ ಮಾಡಿಕೊಳ್ಳಬೇಕು. ಸೀಡಾಕ್ ಎಂಬ ಸಂಸ್ಥೆ ಸ್ವಯಂ ಉದ್ಯೋಗದ ಕುರಿತು ಮಾಹಿತಿ ನೀಡಲಿದೆ. ಉದ್ಯೋಗ, ಉತ್ಪಾದನೆ, ಮಾರುಕಟ್ಟೆ ಅಗತ್ಯ ಹಣಕಾಸು ಸೌಲಭ್ಯ, ಸೂಕ್ತ ಮಾರ್ಗದರ್ಶನವನ್ನೂ ಸಹ ಆ ಸಂಸ್ಥೆ ನೀಡಲಿದೆ.
ಜನವರಿ ತಿಂಗಳಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಲ್ಯಾಪ್ ಟಾಪ್, ಮತ್ತು ಬಾಕಿ ಇರುವ ಸ್ಕಾಲರ್ ಶಿಪ್ ಗಳನ್ನೂ ಸಹ ನಮ್ಮ ಸರ್ಕಾರ ನೀಡಲಿದೆ. ಶೀಘ್ರದಲ್ಲೇ ನಾಲ್ಕು ಸಾವಿರ ಪೋಲಿಸ್ ಹುದ್ದೆಗಳ ಭರ್ತಿ, ಪಿಎಸೈ ಹುದ್ದೆಗಾಗಿ ಹೊಸದಾಗಿ ಪರೀಕ್ಷೆ ಸಹ ನಡೆಯಲಿದೆ. ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಈ ಸರ್ಕಾರ ಕಟಿಬದ್ಧವಾಗಿದೆ.
ಮುರುಳೀಧರ್ ಹಾಲಪ್ಪ ನವರೊಂದಿಗೆ ನಡೆದ ಸಂವಾದದಲ್ಲಿ ಹಲವಾರು ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಬಸ್ ಗಳ ಸಮಸ್ಯೆ ಕುರಿತು ಮಾತನಾಡಿದರು. ವಿದ್ಯಾರ್ಥಿನಿಯರಿಗೆ ಮಾತ್ರ ಉಚಿತ ಪ್ರಯಾಣ ಮಾಡಿರುವ ಸರ್ಕಾರ ವಿದ್ಯಾರ್ಥಿಗಳನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಹೇಳಿದರು. ಉನ್ನತ ವ್ಯಾಸಾಂಗ ಕುರಿತು ಕೆಲವು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ತಿಪ್ಪೇಸ್ವಾಮಿ, ಕೌಶಲ್ಯಾಭಿವೃದ್ಧಿ ಇಲಾಖೆಯ ಶಿವಕುಮಾರ್, ಸಿಡಾಕ್ ಸಂಸ್ಥೆಯ ತರಬೇತುದಾರರಾದ ಚೈತ್ರಾ, ಎಚ್.ಸಿ ಎಲ್ ನ ಮುಖ್ಯಸ್ಥರಾದ ಬಿಂದು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಎಂ.ಟಿ.ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?