Friday, July 26, 2024
Google search engine
Homeತುಮಕೂರು ಲೈವ್ಏಕಾಏಕಿ ಬಂದ ಜೆಸಿಬಿ ಮಾಡಿದ ಅವಾಂತರಕ್ಕೆ ಜನ ಹೈರಾಣು...

ಏಕಾಏಕಿ ಬಂದ ಜೆಸಿಬಿ ಮಾಡಿದ ಅವಾಂತರಕ್ಕೆ ಜನ ಹೈರಾಣು…

Publicstory


ತುಮಕೂರು: ನಗರದ ವಿದ್ಯಾನಗರದ ನಾಲ್ಕನೇ ಕ್ರಾಸ್ ಬಂದ ಜೆಸಿಬಿ ಮಾಡಿದ ಅವಾಂತರಕ್ಕೆ ಜನರು ಹೈರಾಣಾದರು.

ಜನರ ದೂರು ಕೇಳಿ ಸ್ಥಳಕ್ಕೆ ಬಂದ ಪಾಲಿಕೆ ಎಂಜಿನಿಯರ್ ಹಾಗೇ ಬಂದು ಹೀಗೆ ಹೋದರು. ಎಂಜಿನಿಯರ್ ಬಂದೋದ ಮೇಲೆ ಎಲ್ಲ ಮನೆಗಳಲ್ಲಿ ನಲ್ಲಿ ಸರಿಯಾಗಲಿದೆ ಎಂದ ಕಾದ ಜನರಿಗೆ ಮಾತ್ರ ನಿರಾಶೆಯಾಯಿತು.

ಕೊನೆಗೂ ಒಬ್ಬೊಬ್ಬರು ಒಂದೊಂದು ಸಾವಿರದವರೆಗೂ ಖರ್ಚು ಮಾಡಿ ಮನೆಯ ನೀರಿನ ಸಂಪರ್ಕ ಸರಿಪಡಿಸಿಕೊಂಡರು.

ಹಾಗಾದರೆ ಆಗಿದ್ದೇನು


4 ನೆ ಕ್ರಾಸ್ ವಿದ್ಯಾನಗರ ದಲ್ಲಿ ಹಳೆಯ ಮೋರಿಯನ್ನು ಕಿತ್ತು ಹಾಕಿ ಹೊಸ ಮೋರಿ ಮಾಡುವ ಕೆಲಸಕ್ಕಾಗಿ ಹೀಗೆ ಈ ಬೀದಿಯವರ ಮನೆಯವರ ನೀರು, ಯುಜಿಸಿ ಪೈಪ್ ಕಿತ್ತು ಹಾಕಲಾಯಿತು! ಜೆಸಿಬಿಯಲ್ಲಿ ಕೆಲಸ ಮಾಡಿಸಿದ ಕಾರಣ‌ ಯಂತ್ರಕ್ಕೆ ಸಿಲುಕಿದ ಪೈಪ್ ಗಳೆಲ್ಲ ಪುಡಿಪುಡಿಯಾದವು.

ಇದರಿಂದ ನಾಗರಿಕರು ಪಡ ಬಾರದ ಕಷ್ಟ ಪಟ್ಟರು.aee ಭೇಟಿ ಇತ್ತರಾದರೂ contractor ಬರಲಿಲ್ಲ.. ಅರೆ ಬರೆ ರಿಪೇರಿ ಮಾಡಿ ನಾಪತ್ತೆಯಾದರು ಎಂದು ಇಲ್ಲಿನ ಜನರು ಹಿಡಿಶಾಪ ಹಾಕಿದರು.

ನಾವೇ ರಿಪೇರಿ ಮಾಡಿಕೊಳ್ಳಬೇಕಾಯಿತು.ಇದರ ಬದಲು ಅಗೆಸಿ ಕೊಡಿ ಎಂದು ಹೇಳಿದ್ದರೆ ನಾವೇ ಕಾರ್ಮಿಕರನ್ನು ಬಳಸಿಕೊಂಡು ಅಗೆಸಿಕೊಡುತ್ತಿದ್ದವು ಎಂಬುದು ನಾಗರಿಕರ ಅಳಲಾಗಿತ್ತು.

ಕಲ್ಲು ಚಪ್ಪಡಿ ಎತ್ತಿ manual labour ಮೂಲಕ ಮಾಡ ಬೇಕಾದ ಕೆಲಸಕ್ಕೆ ಬೇಕಾ ಬಿಟ್ಟಿಯಾಗಿ ಜೆಸಿಬಿ ಎಳೆದು ಮನೆ ಮಾಲೀಕರ ಜೇಬಿಗೆ ಕತ್ತರಿ ಬಿತ್ತು..ಇದಕ್ಕೆ ಉತ್ತರಿಸುವವರು ಯಾರು?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?