Saturday, July 27, 2024
Google search engine
Homeಜಸ್ಟ್ ನ್ಯೂಸ್ತುರುವೇಕೆರೆಯಲ್ಲಿ ಕಂಡ ಕೃಷ್ಣೇಗೌಡನ ಆನೆ

ತುರುವೇಕೆರೆಯಲ್ಲಿ ಕಂಡ ಕೃಷ್ಣೇಗೌಡನ ಆನೆ

ನಾಟಕ ಕಲೆ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತದೆ; ಪ್ರಾಂಶುಪಾಲ ಎಸ್.ಎಂ.ಕಾಂತರಾಜು

ತುರುವೇಕೆರೆ: ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಬೋಳೆಶಂಕರ ಹಾಗು ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ ಮಂಗಳವಾರ ಸಂಜೆ ಜರುಗಿತು.

ನಾಟಕಕ್ಕೂ ಮುನ್ನಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಾಂಶುಪಾಲ ಎಸ್.ಎಂ.ಕಾಂತರಾಜು ಮಾತನಾಡಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ವಿಷಯದಲ್ಲಿನ ‘ಬೋಳೆಶಂಕರ ಹಾಗು ಕೃಷ್ಣೇಗೌಡನ ಆನೆ’ ಈ ನಾಟಕವನ್ನು ರತ್ನ ನಗೇಶ್ ನೇತೃತ್ವದ ನಂದನ ತಂಡದ ಕಲಾವಿದರು ಅತ್ಯಂತ ಮನಮೋಹಕವಾಗಿ ಪ್ರದರ್ಶಿಸಿದ್ದಾರೆ.

ಇಂತಹ ದೃಶ್ಯ ಕಲೆಗಳು ವಿದ್ಯಾರ್ಥಿಗಳ ಮನಸ್ಸನ್ನು ಬಹು ಬೇಗ ಆಕರ್ಷಿಸಿ ಅವರಲ್ಲಿ ಸೃಜನಶೀಲಾತ್ಮಕ ಚಿಂತನೆಯನ್ನು ಬೆಳೆಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಕ್ಕಿಂತಲೂ ದೃಶ್ಯ ಮಾದ್ಯಮದ ಈ ನಾಟಕಗಳನ್ನು ತೋರಿಸಿ ಅವರಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಉಂಟು ಮಾಡುವ ಹಾಗು ವಿಶೇಷವಾಗಿ ಮಕ್ಕಳಲ್ಲಿ ದೇಶೀಯ ಕಲೆಯಾದ ರಂಗಭೂಮಿಯ ಬಗೆಗಿನ ಹೆಚ್ಚಿನ ಆಸ್ಥೆ ಬೆಳೆಸುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡಲಾಗಿದೆ ಎಂದರು.

ಇದೇ ವೇಳೆ ಇಂತಹ ಕಾರ್ಯಕ್ರಮ ಆಯೋಜಿಸಲು ಮುಂದಾಳತ್ವ ವಹಿಸಿದ್ದ ಉಪನ್ಯಾಸಕಿ ಹಂಸದಿಲೀಪ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರುಗಳಾದ ಪ್ರಕಾಶ್, ಡಾ.ಚಂದ್ರಯ್ಯ, ಹರ್ಷಾ ಗೊಪ್ಪೇನಹಳ್ಳಿ ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?