Saturday, July 27, 2024
Google search engine
Homeಕ್ರೈಂಮಹಿಳೆ ಕೊಲೆ: ಯುವಕ ಬಂಧನ

ಮಹಿಳೆ ಕೊಲೆ: ಯುವಕ ಬಂಧನ

ಕೋಡಿಹಳ್ಳಿ : ಮಹಿಳೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ತುರುವೇಕೆರೆ: ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಭರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ತಾಲ್ಲೂಕಿನ ದಂಡಿನಶಿವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನು ತಾಲ್ಲೂಕಿನ ದಂಡಿನಶಿವರ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶಂಕರಯ್ಯ ಅವರ ಮಗ ದಿಲೀಪ್(30) ಎಂದು ಗುರುತಿಸಲಾಗಿದೆ.


ಘಟನೆಯ ವಿವರ: ಆ.25ರ ಸಂಜೆ 4:45ರ ಸಮಯದಲ್ಲಿ ಕೋಡಿಹಳ್ಳಿ ಗ್ರಾಮದ ಗಂಗಾಧರಯ್ಯ ಎಂಬುವರ ತೋಟದ ಬಳಿ ಮೃತ ಕಾವ್ಯ.ಎ.ಎಸ್ ಎಂಬುವರು ಹಸುವನ್ನು ಮೇಯಿಸುತ್ತಿರುವಾಗ ಇದೇ ಗ್ರಾಮದ ಆರೋಪಿ ದಿಲೀಪ್ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹಲ್ಲೆ ಮಾಡಿ ಕಲ್ಲನ್ನು ಮುಖದ ಮೇಲೆ ಎತ್ತಿ ಹಾಕಿ, ಜಜ್ಜಿ ಕೊಲೆ ಮಾಡಿ ಆರೋಪಿ ಯಾರಿಗೂ ಸಿಗದಂತೆ ತಲೆ ಮರೆಸಿಕೊಂಡಿದ್ದನು.


ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಪತ್ತೆ ಬಗ್ಗೆ ತುರುವೇಕೆರೆ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್ ಬಿ.ಎನ್ ಹಾಗು ಪಿಎಸ್ಐ ಎಚ್.ಎಚ್.ರಾಮಚಂದ್ರಯ್ಯರವರ ತಂಡ ವಿಶೇಷ ಕಾರ್ಯಚರಣೆಯ ಕೈಗೊಂಡು ಪ್ರಕರಣದಲ್ಲಿ ಕೊಲೆ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಜೊತೆಗೆ ಕೊಲೆ ಮಾಡಿದ ಆರೋಪಿಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಆರೋಪಿಯ ಚಿಕ್ಕಪ್ಪ ನಟರಾಜು(55)ನನ್ನೂ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದ್ದಾರೆ.

ಪಿಎಸ್ಐ ಚಿತ್ತರಂಜನ್, ತುರುವೇಕೆರೆ ಠಾಣಾ ಪಿ.ಎಸ್.ಐ ರಾಮಚಂದ್ರಪ್ಪ, ಎ.ಎಸ್.ಐ ರವರುಗಳಾದ ಗಂಗಣ್ಣ, ನಾರಾಯಣಪ್ಪ, ನಾಗರಾಜು, ಸಿಬ್ಬಂದಿಗಳಾದ ಮಂಜುನಾಥ್, ಗುರುಮೂರ್ತಿ, ಕುಮಾರ್, ಲಕ್ಷ್ಮಪ್ಪ, ಇಬ್ರಾಹಿಂ ಆರೋಪಿ ಪತ್ತೆ ಕಾರ್ಯ ತಂಡದಲ್ಲಿದ್ದ ಎಲ್ಲರನ್ನೂ ಜಿಲ್ಲಾ ಎಸ್ಪಿ ಅಭಿನಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?