Saturday, July 27, 2024
Google search engine
Homeಪೊಲಿಟಿಕಲ್ಕೊಡಿಗೇನಹಳ್ಳಿ ದೊಡ್ಡಕೆರೆ ಅಭಿವೃದ್ಧಿಗೆ ಎಲ್.ಸಿ .ನಾಗರಾಜು ಕೊಡುಗೆ ಅಪಾರ

ಕೊಡಿಗೇನಹಳ್ಳಿ ದೊಡ್ಡಕೆರೆ ಅಭಿವೃದ್ಧಿಗೆ ಎಲ್.ಸಿ .ನಾಗರಾಜು ಕೊಡುಗೆ ಅಪಾರ

Publicstory/prajayoga

ಮಧುಗಿರಿ: ಸುಮಾರು 25 ವರ್ಷಗಳಿಂದ ಹಾಳಾಗಿದ್ದ ದೊಡ್ಡಕೆರೆ ಕಾಲುವೆಯನ್ನು ಸ್ವಚ್ಛತೆ ಮಾಡಿಸಲು ಎಲ್.ಸಿ ನಾಗರಾಜು ಮುಂದಾಗಿದ್ದು ರೈತರ ಹಾಗೂ ಕೊಡಿಗೇನಹಳ್ಳಿ ಗ್ರಾಮಸ್ಥರ ಪರವಾಗಿ ಅವರನ್ನು ಅಭಿನಂಧಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತರ ರಾಜಗೋಪಾಲ ರೆಡ್ಡಿ ತಿಳಿಸಿದರು.

ತಾಲೂಕಿನ ಚಿಕ್ಕಮಾಲೂರು ಸಿ ವೀರಾಪುರದ ಬಳಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕೊಡಿಗೇನಹಳ್ಳಿಯ ದೊಡ್ಡಕೆರೆ ಅಭಿವೃದ್ಧಿಯ ಬಗ್ಗೆ ಗ್ರಾಪಂ ಆಗಲಿ ಅಥವಾ ಸರಕಾರದ ಯಾವುದೇ ಇಲಾಖೆಯಾಗಲಿ ಅನುದಾನ ನೀಡಿಲ್ಲ. ಈ ಬಗ್ಗೆ ಜನಮುಖಿ ಸಂಸ್ಥೆಯ ಎಲ್.ಸಿ ನಾಗರಾಜು ಅವರ ಗಮನಕ್ಕೆ ತಂದಾಗ ತಕ್ಷಣ ಇಟಾಚಿ ವಾಹನ ಕಳುಹಿಸಿ ನೀರಿನ ಕಾಲುವೆ ದುರಸ್ತಿ ಹಾಗೂ ಅಚ್ಚುಕಟ್ಟು ಮಾಡಿಸುತಿದ್ದಾರೆ.

ಕೆರೆ ಅಚ್ಚುಕಟ್ಟು ಮಾಡಿಸುವಂತೆ ಗ್ರಾಪಂ ಹಾಗೂ ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಿಲಿಲ್ಲ. ಪ್ರತಿವರ್ಷ ಸೀಮೆಜಾಲಿ ಗಿಡಗಳಿಂದ ಆದಾಯ ಪಡೆಯುತಿದ್ದ ಗ್ರಾಪಂ ಕಿಂಚಿತ್ತು ಹಣವನ್ನು ಕೆರೆ ವಿಚಾರದಲ್ಲಿ ಖರ್ಚು ಮಾಡಿರಲಿಲ್ಲ. ಇನ್ನೂ ಭೋಗಸ್ ನರೇಗಾ ಬೋರ್ಡ್ಗಳು ಈ ಭಾಗದಲ್ಲಿ ನೇತಾಡತಿದ್ದವು. ಉತ್ತಮ ಮಳೆಯಾದರೂ ಕೆರೆ ತುಂಬಿರಲಿಲ್ಲ, ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಯಾವುದೆ ಪ್ರತಿಕ್ರಿಯೆ ಸಿಕ್ಕಿರಲಿಲ್ಲ, ಇಲ್ಲಿನ ಸಮಸ್ಯೆ ಬಗ್ಗೆ ಎಲ್.ಸಿ ನಾಗರಾಜು ಅವರ ಬಳಿ ಹೇಳಿದಾಗ ತಕ್ಷನ ಅದೆಷ್ಟು ಹಣ ಖರ್ಚಾದರೂ ಪರವಾಗಿಲ್ಲ ಹೋಬಳಿಯ ಜನತೆಗೆ ಅನುಕೂಲವಾಗಲಿ ಎಂದು ತಕ್ಷಣ ಜೆಸಿಬಿ ಮತ್ತು ಇಟಾಚಿ ವಾಹನ ಕಳುಹಿಸಿಕೊಟ್ಟಿದ್ದು ಇದೀಗಾ ಸಲಿಸಾಲಿ ಕೊಡಿಗೇನಹಳ್ಳಿಯ ದೊಡ್ಡಕೆರೆಗೆ ನೀರು ಶೇಖರಣೆಯಾಗುತ್ತಿದೆ.

ಎಂ ರಮೇಶ್ ಮಾತನಾಡಿ, ಜನಪರ ಹಾಗೂ ರೈತಪರ ಕೆಲಸಕ್ಕೆ ಜನಮುಖಿ ಸಂಸ್ಥೆ ಕೈಹಾಕಿದ್ದು ಕೊಡಿಗೇನಹಳ್ಳಿಯ ದೊಡ್ಡಕೆರೆ ತುಂಬಿದ ನಂತರ ಮೈದನಹಳ್ಳಿ ಕೆರೆ ತುಂಬಿಸಲಾಗುವುದು. ನಂತರ ದೊಡ್ಡಮಾಲೂರು ಕಾಲುವೆ ದುರಸ್ತಿ ಹಾಗೂ ಅಚ್ಚುಕಟ್ಟು ಮಾಡಿಸಲಾಗುವುದು ಇದರ ಸಂಪೂರ್ಣ ಖರ್ಚು ವೆಚ್ಚವನ್ನು ಎಲ್.ಸಿ ನಾಗರಾಜು ವಹಿಸಿದ್ದು ಅವರಿಗೆ ಈ ಭಾಗದ ಜನತೆ ಅಭಾರಿಯಾಗಿದ್ದೇವೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?