Publicstory/Prajayoga
ತಮಿಳುನಾಡು: ಮಾಜಿ ಮುಖ್ಯಂಮತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪ್ರೀತಿಯಿಂದ ಬರಮಾಡಿಕೊಂಡು ಗೌರವಿಸಿದರು ಹಾಗೂ ಅವರೊಂದಿಗೆ ಒಂದಷ್ಟು ಹೊತ್ತು ಆತ್ಮೀಯ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಅವರನ್ನು ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗೆ ತಮಿಳುನಾಡು ಸರ್ಕಾರ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಚನ್ನೈಗೆ ತೆರಳಿದ್ದಾರೆ.
ಸಚಿವರಾದ ದೊರೈ ಮುರುಗನ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಳಗಿರಿ, ಸಂಸದರಾದ ತಿರುಮಾವಲವನ್ ಸೇರಿದಂತೆ ಮತ್ತಿತರ ಗಣ್ಯರು ಈ ವೇಳೆ ಹಾಜರಿದ್ದರು.
![](https://publicstory.in/wp-content/uploads/2022/07/IMG_20220730_143047-2.jpg)
ಈ ಸಂದರ್ಭದಲ್ಲಿ ವಿಡುದಲೈ ಚಿರುದೈಗಳ್ ಪಕ್ಷದ ಸಂಸದ ತಿರುಮಾವಲವನ್ ಹಾಗೂ ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಳಗಿರಿ ಹಾಗೂ ಇತರ ನಾಯಕರು ಅತ್ಮೀಯತೆಯಿಂದ ಬರ ಮಾಡಿಕೊಂಡರು.