Publicstory/prajayoga
ತುರುವೇಕೆರೆ : ದೇಶದ ಬೆನ್ನೆಲುಬಾದ ರೈತರು ಆರ್ಥಿಕವಾಗಿ ಸದೃಡನಾಗಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಮಠದ ವತಿಯಿಂದ ಚುಂಚಾದ್ರಿ ರೈತ ಸಂತೆ ಆರಂಭಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ನಲ್ಲಿ ಚುಂಚಾದ್ರಿ ರೈತ ಸಂತೆ ಚಾಲನೆ, ಮಾಜಿ ಶಾಸಕ ಬಿ.ಭೈರಪ್ಪಾಜಿಯವರ ಪುತ್ಥಳಿ ಅನಾವರಣ ಹಾಗೂ ಆದಿಚುಂಚನಗಿರಿ ಸಮುದಾಯ ಭವನ ಶಂಕುಸ್ಥಾಪನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ರೈತ ತಾನು ಬೆಳದ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡುವ ಕಲೆಯನ್ನು ಕಲಿಯಬೇಕಿದೆ. 30 ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು, ಶಾಲೆಗಳನ್ನು ಕಟ್ಟಿ, ಸಹಕಾರಿ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣಕ್ಕೆ ವಿಶೆಷ ಕೊಡುಗೆ ನೀಡಿದ ಮಾಜಿ ಶಾಸಕ ಬಿ.ಭೈರಪ್ಪಾಜಿಯವರರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಆದಿಚುಂಚನಗಿರಿ ಮಠದ ವತಿಯಿಂದ ತಾಲೂಕಿನ ಮಾಯಸಂದ್ರದಲ್ಲಿ ಶೀಘ್ರದಲ್ಲೇ ಕೃಷಿ ಕಾಲೇಜು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಪಡಿಸುವಂತಾದಾಗ ಮಾತ್ರ ರೈತರ ಕಲ್ಯಾಣ ಸಾಧ್ಯ. ಈ ನಿಟ್ಟಿನಲ್ಲಿ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಚುಂಚಾದ್ರಿ ರೈತ ಸಂತೆಗೆ ಚಾಲನೆ ದೊರಕಿಸಿ ಶ್ರೀ ಆದಿಚುಂಚನಗಿರಿ ಮಠ ದಾಪುಗಾಲಿರಿಸಿದೆ. ನನ್ನ ತಂದೆ ಕೆ.ಎಚ್.ಪಾಟೀಲ್ ಅವರ ಆಪ್ತರಾಗಿದ್ದ ಮಾಜಿ ಶಾಸಕ ಬಿ. ಭೈರಪ್ಪಾಜಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅತ್ಯಂತ ಸಂತಸ ತಂದಿದೆ ಎಂದರು.
ಶಾಸಕ ಮಸಾಲಜಯರಾಮ್ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀ ಮಠದ ವತಿಯಿಂದ ಚುಂಚಾದ್ರಿ ರೈತ ಸಂತೆ ಹಾಗೂ ಸಮುದಾಯಭವನ ಶಂಕುಸ್ಥಾಪನೆ ನೆರವೇರಿಸಿರುವುದಕ್ಕಾಗಿ ಕ್ಷೇತ್ರದ ಜನತೆಯ ಪರವಾಗಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಆದಿ ಚುಂಚನಗಿರಿ ಸಮುದಾಯ ಭವನಕ್ಕೆ 25 ಲಕ್ಷ ರೂ ದೇಣಿಗೆ ನೀಡುವುದಾಗಿ ಘೋಷಿಸಿದರು.
ತಾಲೂಕಿನ ಮಾಯಸಂದ್ರ ಟಿ.ಬಿ. ಕ್ರಾಸ್ನಲ್ಲಿ ಮಾಜಿ ಶಾಸಕ ಬಿ. ಬೈರಪ್ಪಾಜಿಯವರ ಪುತ್ಥಳಿಯನ್ನು ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅನಾವರಣಗೊಳಿಸಿದರು.
![](https://publicstory.in/wp-content/uploads/2022/08/img-20220825-wa00995369484606309259298-1024x433.jpg)
ಪ್ರೋ. ಪುಟ್ಟರಂಗಪ್ಪ ರಚಿಸಿರುವ ರೈತಬಂದು ಬಿ. ಬೈರಪ್ಪಾಜಿ ಕೃತಿಯನ್ನು ಡಾ.ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಈ ವೇಳೆ ರಾಜ್ಯ ರೈತ ಸಂಘದ ವರಿಷ್ಟ ಕೆ.ಟಿ.ಗಂಗಾಧರ್, ಸಚಿವ ಮುನಿರತ್ನ ಹಾಗೂ ಗೋಪಾಲಯ್ಯ, ಮಠದ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶಾಸಕರಾದ ಸುರೇಶ್ಗೌಡ, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ, ಬೈರಪ್ಪಾಜಿಯವರ ಪುತ್ರ ಬೆಟ್ಟಸ್ವಾಮಿ, ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಕೊಂಡಜ್ಜಿವಿಶ್ವನಾಥ್, ತೋಟಗಾರಿಕೆ ಇಲಾಖೆಯ ಡಿ.ಡಿ. ರಘು, ತಹಶಿಲ್ದಾರ್ ರೇಣುಕುಮಾರ್ ಮತ್ತಿತರಿದ್ದರು.