Tuesday, December 5, 2023
spot_img
Homeಪೊಲಿಟಿಕಲ್ಡೈರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ದೇನೆ : ಕೊಂಡವಾಡಿ ಚಂದ್ರಶೇಖರ್

ಡೈರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿದ್ದೇನೆ : ಕೊಂಡವಾಡಿ ಚಂದ್ರಶೇಖರ್

ಕೊಡಿಗೇನಹಳ್ಳಿ: ಗ್ರಾಪಂ ಮುಖ್ಯ ಕೇಂದ್ರದಲ್ಲಿ ಡೈರಿ ಇಲ್ಲದೆ ನಿತ್ಯ ನಾಲ್ಕೈದು ಕಿ.ಮೀ ಸಂಚರಿಸಿ ಹಾಲು ಹಾಕುತಿದ್ದ ಬಗ್ಗೆ ಸಂಘದ ಸದಸ್ಯರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.

ಹೋಬಳಿಯ ದೊಡ್ಡಮಾಲೂರು ಗ್ರಾಮದ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ನಿತ್ಯ ಹೆಣ್ಣು ಮಕ್ಕಳು ಹಾಗೂ ವಿದ್ಯಾರ್ಥಿಗಳು ಕಾಲ್ನಿಡಿಗೆಯಲ್ಲಿ ತೆರಳಿ ಹಾಲು ಹಾಕಬೇಕಾಗಿತ್ತು. ಇದೀಗ ನೂತನ ಡೇರಿ ತೆರೆದು ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದರು.

ತುಮುಲ್ ಒಕ್ಕೂಟವನ್ನು ಇಡಿ ರಾಜ್ಯ ನೋಡುವಂತೆ ಅಭಿವೃದ್ಧಿಮಾಡಿದ್ದೇನೆ. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಪ್ರತಿ ದಿನ ಒಂದಲ್ಲಾ ಒಂದು ಪರಿಹಾರದ ಚೆಕ್ ವಿತರಣೆ ಮಾಡಲಾಗುತ್ತಿದೆ. ವಿದ್ಯಾಭ್ಯಾಸ, ಪರಿಹಾರ ಜಾನುವಾರುಗಳು ಮೃತಪಟ್ಟರೆ ಪರಿಹಾರ ವಿತರಿಸುವ ಯೋಜನೆಗಳನ್ನು ಜಾರಿಗೆ ತಂದಿರುವುದು ಈ ಬಗ್ಗೆ ನಿಮಗೆಲ್ಲ ತಿಳಿದಿದೆ. ಮನುಷ್ಯನಿಗೆ ಉಪಕಾರ ಸ್ಮರಣೆ ಅವಶ್ಯಕ. ಮುಂದಿನ ದಿನಗಳಲ್ಲಿ ನನಗೆ ಹೆಚ್ಚಿನ ಜವಾಬ್ದಾರಿ ನೀಡಿದರೆ ಇನ್ನಷ್ಟು ಕೆಲಸ ಮಾಡುತ್ತೇನೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.,

ಸಂಘದ ಕಟ್ಟಡಕ್ಕೆ ಜಾಗ ನೀಡಿದ ದಾನಿಗಳ ಕುಟುಂಬಸ್ಥರಿಗೆ ಹಾಗು ಸಂಘದ ನಿದೇರ್ಶಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಟಲೇ ಚಂದ್ರಶೇಖರ್ ಗೌಡ, ಗ್ರಾಪಂ ಸದಸ್ಯರಾದ ಹನುಮಂತರಾಯ, ಲಿಂಗೇಗೌಡ, ರಾಜಪ್ಪ,  ಸಿದ್ಧಪ್ಪ, ಲಕ್ಮö್ಮಮಮ್ಮ ಲಿಂಗಪ್ಪ, ಸಂಘದ ಉಪಾಧ್ಯಕ್ಷ ವೆಂಕಟಪ್ಪ, ನಿದೇರ್ಶಕರಾದ ಗೋಪಾಲರೆಡ್ಡಿ, ರಮೇಶ್, ಕೃಷ್ಣಯ್ಯ, ಮಹಾದೇವಪ್ಪ, ಬೋಜರಾಜ, ಗಂಗಮ್ಮ, ಮಂಜಮ್ಮ, ಸಿದ್ದಪ್ಪ, ಶ್ರೀನಿವಾಸ್, ನರಸಿಂಹಮೂರ್ತಿ, ಲಿಂಗಪ್ಪ, ಕಾರ್ಯದರ್ಶಿ ನಿರ್ಮಲ, ಹಾಲು ಪರೀವೀಕ್ಷಕ ರಾಮಕೃಷ್ಣಯ್ಯ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು