Thursday, April 25, 2024
Google search engine
Homeಪುಸ್ತಕ ಬಿಡುಗಡೆಚೌಕಟ್ಟು ಮೀರಿದರೆ ನಿಜ ಕವಿತೆ ಹುಟ್ಟುತ್ತದೆ: ರಂಗಮ್ಮ ಹೊದೇಕಲ್ಲು

ಚೌಕಟ್ಟು ಮೀರಿದರೆ ನಿಜ ಕವಿತೆ ಹುಟ್ಟುತ್ತದೆ: ರಂಗಮ್ಮ ಹೊದೇಕಲ್ಲು

Publicstory/prajayoga

ಈ ವೇಳೆ ಯುವ ಕವಿ ಯೋಗೇಶ್ ಮಲ್ಲೂರು ಅವರಿಗೆ ಸನ್ಮಾನ ಮಾಡಲಾಯಿತು

ತುಮಕೂರು: ಹೊಟ್ಟೆಗೆ ಹಸಿದವರಿಗಿಂತ ಪ್ರೀತಿಗೆ ಹಸಿದವರ ಸಂಖ್ಯೆ ಜಾಸ್ತಿ. ಯಾವುದೇ ಪರಂಪರೆಯನ್ನು ಮೀರಿ ಕಟ್ಟಿದರೆ ಅದು ನಿಜವಾದ ಕವಿತೆ ಎನಿಸಿಕೊಳ್ಳುತ್ತದೆ ಎಂದು ಕವಯಿತ್ರಿ ರಂಗಮ್ಮ ಹೊದೇಕಲ್ಲು ಅಭಿಪ್ರಾಯಪಟ್ಟರು.

ನಗರದ ನಿವೃತ್ತ ನೌಕರರ ಮಹಾಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಕಹಾನಿ  ಪುಸ್ತಕ ಕುರಿತ ಮಾತು ಹಾಗೂ ಯುವ ಬರಹಗಾರರು : ಓದು ಮತ್ತು ಬರಹ ವಿಶೇಷ ಉಪನ್ಯಾಸ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು‌ ಮಾತಡಿದರು.

ಕವಿತೆಗೆ ಸಿದ್ಧ ಮಾದರಿಗಳಿಲ್ಲ. ಅನಿಸಿದ್ದನ್ನು ದಾಖಲಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಗೆಲ್ಲುವ ಕವಿತೆಗಾಗಿ ನಿರಂತರವಾಗಿ ನೋಯಬೇಕು. ಸಂಘರ್ಷಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ಪ್ರೀತಿಯಿದ್ದರೆ ಎಲ್ಲವೂ ಜೊತೆ ಬರುತ್ತದೆ ಮತ್ತು ಇದರ ಮೂಲಕ ಯಾವುದೂ ಅಸಾಧ್ಯವಲ್ಲ ಎಂದು ತಿಳಿಸಿದರು.

ಕೆಲವರು ಮಾತ್ರ ಮೆದುಳಿನ ಜೊತೆಗೆ ಹೃದಯವನ್ನು ಜೋಡಿಸಿಕೊಂಡಿರುತ್ತಾರೆ ಅದರಲ್ಲಿ ಯೋಗೇಶ್ ಮಲ್ಲೂರು ಅವರು ಕೂಡ. ಪ್ರೀತಿಯೆಂದರೆ ಸಂಕುಚಿತವಲ್ಲ, ಅದೊಂದು ಹದಿಹರೆಯದ ಹಕ್ಕಿ. ಈ ಕಾಲಘಟ್ಟದಲ್ಲಿ ಪ್ರೀತಿ ನಾನಾ ಅರ್ಥಗಳನ್ನು ಕಟ್ಟಿಕೊಂಡು, ಎಮೋಜಿಗಳಲ್ಲಿ ಮೆರೆಯುತ್ತಿದೆ. ಇಂಥಾ ಸಂದರ್ಭದಲ್ಲೂ ಪತ್ರ ನೀಡಿ ಪ್ರೇಮಿಸಿದ್ದಾರೆ.  ಪುಸ್ತಕದ ಬರಹಗಳೂ ಪತ್ರರೂಪದಲ್ಲಿಯೇ  ಇವೆ ಎಂದು ತಿಳಿಸಿದರು.

ಕವಿತೆಗಳು ತಮ್ಮನ್ನೋ ಅಥವಾ ಗೆತಿಯನ್ನೋ ಸಮಾಧಾನ‌ಮಾಡುವಂತಿದೆ. ಒಲವಿನ ಮಹಾಪೂರ ಹರಿದಿದೆ‌. ಬಹಶಃ ಅದನ್ನು ದಕ್ಕಿಸಿಕೊಂಡವರು ಪುಣ್ಯವಂತರು. ಪ್ರೇಮ ಅನ್ನೋದು ಬರಿ ಹುಡುಗ ಹುಡುಗಿಯ ಮಧ್ಯೆ ಉದಯಿಸುವುದಲ್ಲ. ಅದರಾಚೆಗಿನ ಅಂತಃಕರಣ. ನಾವೇನು ಇತಿಹಾಸ ಸೃಷ್ಟಿಸಸಬೇಕಿಲ್ಲ. ಸಾಮಾನ್ಯವಾಗಿ ಸಂಕಟ, ನೋವು, ವಿಷಾದಗಳಲ್ಲೇ ಪ್ರೀತಿ ಹುಟ್ಟುವುದು. ಪ್ರತಿಭೆ ಮತ್ತು ವಿಶೇಷತೆ ಅನ್ನುವುದು ಅನುಸರಣೆಯಿಂದ ಬರುವುದು. ಅಧ್ಯಯನವಿಲ್ಲದೆ ಏನನ್ನೂ ಬರೆಯಲು ಸಾಧ್ಯವಿಲ್ಲ.  ಸಂವೇದನಾ ಶೀಲ ಕವಿ ಹೂವನ್ನು ಪ್ರೀತಿಗೆ ಹೋಲೈಸಬಲ್ಲ. ಬರಹಗಾರರಿಗೆ ಸೂಕ್ಷ್ಮ ಪ್ರಜ್ಞೆ ಇರುತ್ತದೆ. ಮನಸ್ಸು ಬುದ್ಧಿ ಪೂರ್ವಕವಾಗಿ ಮತ್ತು ಭಾವಪೂರ್ವಕವಾಗಿ ವ್ಯವಹರಿಸುತ್ತದೆ. ಭಾವಪೂರ್ವಕವಾಗಿ ನೋಡುವುದು ಕವಿತ್ವ. ಇದು ಒಬ್ಬ ಬರಹಗಾರನಿಗಿರಬೇಕಾದ ವೈಶಿಷ್ಟ್ಯ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಬಾ.ಹ.ರಮಾಕುಮಾರಿ ಮಾತನಾಡಿ, ಇಂದಿನ ಆಧುನಿಕ ಸಮಾಜಕ್ಕೆ ಅಂತಃಸ್ಪರ್ಶಿಯಾಗಿದೆ ಕ್ಯಾಂಪಸ್ ಕಹಾನಿ. ಶಿಕ್ಷಕರು ಮನಸ್ಸು ಮಾಡಿದರೆ ಸಮಾಜವನ್ನು ಬದಲಾವಣೆ ಮಾಡಬಹುದು. ಪ್ರಾಥಮಿಕ ಶಾಲೆಯಿಂದಲೇ ಮಕ್ಕಳನ್ನು ಪ್ರೊತ್ಸಾಹಿಸಿದರೆ ಕವಿ ಹೃದಯ ಹುಟ್ಟಲು ಸಾಧ್ಯ. ಪುಸ್ತಕ ಬಿಡುಗಡೆಯು ನಾಮಕರಣ ಮಹೋತ್ಸವ ಇದ್ದಹಾಗೆ. ಅದು ಲೇಖಕರಿಗೆ ಆತ್ಮವಿಶ್ವಾಸವನ್ನೂ ತಂದುಕೊಡುತ್ತದೆ ಎಂದು ಹೇಳಿದರು.

ಪುಸ್ತಕದ ಸಂದೇಶವನ್ನು ಗ್ರಹಿಸಿ ಓದಬೇಕಾಗುತ್ತದೆ. ಅದರಿಂದ ಇಂದಿನ ಯುವಜನರ ಮನಸ್ಸು ಹಾಗೂ ಬರಹಗಾರನ ಸೂಕ್ಷ್ಮತೆಗಳು ತಿಳಿಯುತ್ತದೆ‌. ಪ್ರೀತಿ ಪ್ರೇಮ ಯಶಸ್ಸು ಕಾಣುವುದು ಕ್ಯಾಂಪಸ್ ಅವಧಿಯ ನಂತರ. ಬದುಕು ಸ್ವಾವಲಂಬನೆಯಾದ ಪ್ರೀತಿ ಪ್ರೇಮಗಳಿಗೆ ಪುಷ್ಠಿಸಿಗುತ್ತದೆ ಎಂದರು.

ವಿಶ್ವವಿದ್ಯಾಲಯಗಳಲ್ಲಿ ಜಾತಿಗೊಂದೊಂದು ಅಧ್ಯಯನ ಪೀಠ ರಚನೆಯಾಗುತ್ತಿವೆ. ಈಗ ತುಮಕೂರು ವಿವಿಯಲ್ಲಿ ಸಾರ್ವರ್ಕರ್ ಅಧ್ಯಯನ ಪೀಠಕ್ಕೆ ಸಿಂಡಿಕೇಟ್ ಸಭೆ ಒಪ್ಪಿಗೆ ಸೂಚಿಸಿದೆ. ಇಂತಹ ಅಧ್ಯಯನ ಪೀಠಗಳಿಂದ ಯಾವುದೇ ಪ್ರಯೋಜನವಿಲ್ಲ. ನಾವೆಲ್ಲರೂ ಜಾಗರೂಕರಗಬೇಕಿದೆ. ಯುವಪೀಳಿಗೆ ಸೇರಿಕೊಂಡು ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳಬೇಕಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಐದು ವರ್ಷಕ್ಕೊಮ್ಮೆ ಹಾಳಾಗುವ ರಸ್ತೆಗಳನ್ನು ನಿರ್ಮಿಸುತ್ತಾರೆ. ಆದರೆ, ಶಾಶ್ವತವಾಗಿ ಉಳಿಯುವ ಶೈಕ್ಷಣಿಕ ಕೆಲಸಗಳನ್ನು ಮಾಡುವ ಅಗತ್ಯವಿದೆ ಹಾಗೂ ಪ್ರಸ್ತುತ ಮಹಿಳಾ ಕಾಲೇಜುಗಳನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ  ಉಪನ್ಯಾಸಕ ಗಿರೀಶ್ ಸಿಂಗ್ರಿಹಳ್ಳಿ, ಮೈತ್ರಿ ಬಳಗದ ಚಿಕ್ಕರಂಗಯ್ಯ, ಗೋಮಿನಿ ಪ್ರಕಾಶಕ ಗುಬ್ಬಚ್ಚಿ ಸತೀಶ್, ಯುವ ಕವಿ ದಾದಾಪೀರ್, ತಿಲಕ್, ಆಶಾ, ಮಹೇಶ್ ಲಕ್ಷ್ಮೀ ಎಸ್.ಆರ್ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?