Thursday, March 28, 2024
Google search engine
Homeಧಾರ್ಮಿಕಸರ್ವ ಧರ್ಮೀಯರಿಂದ ಗಣೇಶ ಚತುರ್ಥಿ ಆಚರಣೆ

ಸರ್ವ ಧರ್ಮೀಯರಿಂದ ಗಣೇಶ ಚತುರ್ಥಿ ಆಚರಣೆ

Publicstory/prajayoga

ಗೂಳೂರು: ಹೋಬಳಿಯ ಕೊಂಡಾಪುರ ಗೋಮಾಳದಲ್ಲಿ (ಕೆ.ಲಕ್ಕಪ್ಪನಗರ) ಐದನೆಯ ದಿನವಾದ ಭಾನುವಾರ ಸಂಜೆ ಗಣೇಶ ಮೂರ್ತಿಯನ್ನು ಅದ್ದೂರಿ ವಿಸರ್ಜನೆ ಮಾಡಲಾಯಿತು.

ಗ್ರಾಪಂ ಸದಸ್ಯ ವೆಂಕಟೇಶ್ ಅವರ ನೇತೃತ್ವದಲ್ಲಿ ಪೂಜೆ ವಿಧಿ ವಿಧಾನಗಳೊಂದಿಗೆ ಗಣೇಶ ಮೂರ್ತಿ ಮೆರವಣಿಗೆ ಟ್ರ್ಯಾಕ್ಟರ್ ಮೂಲಕ ಪ್ರಾರಂಭವಾಗಿ ಜಿಲ್ಲಾಡಳಿತದ ಸೂಚನೆಯೊಂದಿಗೆ ಕೊಂಡಾಪುರ ಕೆರೆಯಲ್ಲಿ ಅಂತ್ಯವಾಯಿತು.

ಗೋಮಾಳವು, ಗ್ರಾಮವಾಗಿ ಪರಿವರ್ತನೆಗೊಂಡು ಸುಮಾರು ಇಪತ್ತಕ್ಕಿಂತಲೂ ಅಧಿಕ ವರ್ಷಗಳು ಕಳೆದಿದ್ದರೂ ಇಷ್ಟು ಜನರು ಸೇರಿರಲಿಲ್ಲ.  ಮಹಿಳೆಯರು ಗಣೇಶ ಚತುರ್ಥಿ ವೇಳೆ ದೇವಸ್ಥಾನಕ್ಕಷ್ಟೇ ಬರುತ್ತಿದ್ದರು. ಈ ಸಲ ಮೆರವಣಿಗೆಯೊಂದಿಗೆ ಸಾಗಿದರು ಹಾಗೂ ಯುವ ಮಹಿಳಾ ಮಣಿಗಳು ಹಾಡಿಗೆ ಹೆಜ್ಜೆ ಹಾಕಿದ್ದು ಅಚ್ಚರಿಯನ್ನುಂಟು ಮಾಡಿತು. ನಿಜಕ್ಕೂ ಇದು ಯಶಸ್ವಿ ಆಚರಣೆ. ಗಣೇಶ ಹಬ್ಬಕ್ಕೆ ಪ್ರತೀ ಮನೆಯಿಂದಲೂ ಹಣ ಸಂಗ್ರಹ ಮಾಡಿ ಸಾಮೂಹಿಕವಾಗಿ  ಆಚರಣೆ ಮಾಡಿದ್ದೇವೆ ಎಂದು ಗ್ರಾಮಸ್ಥರೊಬ್ಬರು ಮಾಹಿತಿ‌ ನೀಡಿದರು.

___________________________________________

ಪ್ರತೀ ವರ್ಷ ಹಿಂದೂಗಳಿಗೆ ಮಾತ್ರವೇ ಸೀಮಿತವಾಗುತ್ತಿದ್ದ ಗಣೇಶ ಚತುರ್ಥಿ ಈ ಬಾರಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಧರ್ಮದವರು ಸೇರಿ ಆಚರಣೆ ಮಾಡಿ, ಗ್ರಾಮವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸಿದ್ದೇವೆ. ನಾವೆಲ್ಲರೂ ಒಮ್ಮತದಿಂದ ಸಾಗಬೇಕಿದೆ. ಅದಕ್ಕಾಗಿಯೇ ಬಾಲಗಂಗಾಧರ ತಿಲಕ್ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಣೇಶೋತ್ಸವವನ್ನು ಸಾರ್ವತ್ರೀಕರಣಗೊಳಿಸಿದರು. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಸಹಭಾಗಿತ್ವ ಅತಿ ಮುಖ್ಯ. ಅದಕ್ಕೆ ಸಾಕ್ಷಿಯಾಗಿ ಜಾತಿ ಧರ್ಮದ ಗೋಡೆಗಳನ್ನು ಮೀರಿ ಹಬ್ಬ ಆಚರಣೆ ಮಾಡಿದ್ದೇವೆ. ನಮ್ಮೂರಿನ ಸಮಸ್ತ ಜವಾಬ್ದಾರಿ ನನ್ನ ಮೇಲಿದೆ. ಜನರ ಕಷ್ಟ ಸುಖಗಳನ್ನು ಆಲಿಸುವುದೇ‌ ನನ್ನ ನಿತ್ಯದ ಕಾಯಕ. ಆದ್ದರಿಂದ ಈ ವೇಳೆ ಯಾವುದೇ ಅಡಚಣೆಯಾಗದಂತೆ ಸಕಲ ಸೌಕಭ್ಯಗಳನ್ನು ಒದಗಿಸಿ ಸಹಕರಿಸಿದ್ದೇನೆ. ಇದು ನಮ್ಮ ಕರ್ತವ್ಯವಷ್ಟೆ.

ವೆಂಕಟೇಶ್, ಕೆ.ಲಕ್ಕಪ್ಪನಗರ, ಜೆಡಿಎಸ್ ಮುಖಂಡರು ಹಾಗೂ ಗ್ರಾಪಂ ಸದಸ್ಯರು,ಹೆತ್ತೇನಹಳ್ಳಿ.

___________________________________________

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?