ತುಮಕೂರು : ಸ್ಮಾರ್ಟ್ ತುಮಕೂರು ಮೊದಲ ಮಳೆಗೆ ಹಲವಾರು ಅದ್ವಾನಗಳು ಆಗಿ ಜನರನ್ನು ಇಕಟ್ಟಿಗೆ ಸಿಕ್ಕಿಸಿದೆ. ಅಂಡರ್ಪಾಸ್ ಗಳು ಈಜುಕೊಳವಾಗಿವೆ.
ನಗರದ ತಗ್ಗು ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿದೆ.
ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್ನಲ್ಲಿ ಆರಡಿಗೂ ಹೆಚ್ಚು ನೀರು ನಿಂತು ಕೆರೆಯಂತಾಗಿದೆ, ಬೆಳಗಿನ ವೇಳೆಯಲ್ಲಿ ಕಾಲೇಜಿಗೆ ಹೋಗುವವರಿಗೆ, ಕಛೇರಿಗೆ ಹೋಗುವವರಿಗೆ ತೀವ್ರ ತೊಂದರೆ ಉಂಟಾಗಿದೆ.
ಎಸ್.ಐ.ಟಿ ಮತ್ತು ಎಸ್.ಎಸ್.ಪುರಂ ತಗ್ಗಿನ ಮನೆಗಳಿಗೆ ನೀರು ನುಗ್ಗಿ ಪರದಾಡುವಂತಾಗಿದೆ.
![](https://publicstory.in/wp-content/uploads/2023/04/photo_15949187113083666459519309314769.png)
ತುಮಕೂರಿನ ಆರ್.ಟಿ ನಗರ(ಸರ್ವೋದಯ ಕಾಲೇಜು ಹಿಂಭಾಗ)ದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ.