Saturday, July 20, 2024
Google search engine
HomeUncategorizedಅತ್ತಿಕುಳ್ಳೆಪಾಳ್ಯ ಶನೈಶ್ಚರ ಜಯಂತಿ ಸಂಭ್ರಮ

ಅತ್ತಿಕುಳ್ಳೆಪಾಳ್ಯ ಶನೈಶ್ಚರ ಜಯಂತಿ ಸಂಭ್ರಮ

ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಅತ್ತಿಕುಳ್ಳೆಪಾಳ್ಯದ ಶನಿದೇವರ ದೇವಾಲಯದ ಶನೈಶ್ಚರ ರಿಲಿಜಿಯಸ್ ಟ್ರಸ್ಟ್ ಹಾಗು ಗ್ರಾಮಸ್ಥರ ವತಿಯಿಂದ ಶನೈಶ್ಚರ ಜಯಂತಿ ಮಹೋತ್ಸವವು ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಜರುಗಿತು.

ಶನೈಶ್ಚರ ಜಯಂತಿ ಮಹೋತ್ಸವದ ಅಂಗವಾಗಿ ಮಹಾಗಣಪತಿ, ಶನೈಶ್ಚರ ಸ್ವಾಮಿ ಹಾಗೂ ಎಲ್ಲ ನವಗ್ರಹ ದೇವತೆಗಳಿಗೂ ಫಲ ಪಂಚಾಮೃತ ಸಹಿತ ಮಹಾಭಿಷೇಕ, ವಿಶೇಷ ಪೂಜೆ ಹಾಗು ಅಲಂಕಾರ ಮಾಡಲಾಗಿತ್ತು.

ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಪೂಜೆಜರುಗಿತು. ನಂತರ 1 ಗಂಟೆಯ ಸಮಯದಲ್ಲಿ ಗೋಪೂಜೆ, ಗೋಗ್ರಾಸ ಪೂಜೆ ಮಾಡಿ ಗೋವಿಗೆ ಪ್ರಸಾದ ನೀಡಲಾಯಿತು. ಅತ್ತಿಕುಳ್ಳೆ ಪಾಳ್ಯ, ಗೊಟ್ಟಿಕೆರೆ, ಗೊಟ್ಟಿಕೆರೆ ಪಾಳ್ಯ, ಆನಂದನ ಪಾಳ್ಯ, ಮುನಿಯೂರು, ವಿವೇಕಾನಂದ ನಗರ, ತಾವರೆಕೆರೆ, ತುರುವೇಕೆರೆ ಪಟ್ಟಣಿಗರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಹಣ್ಣು ಕಾಯಿ ಪೂಜೆ ಸಲ್ಲಿಸಿ ಪುನೀತರಾದರು.


ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದು ಕಂಡು ಬಂದಿತು. ಬಂದಂತ ಸಾರ್ವಜನಿಕರು ಮತ್ತು ಭಕ್ತಾಧಿಗಳಿಗೆ ಅನ್ನದಾನ ಏರ್ಪಡಿಸಿದ್ದರು. ಸಂಜೆ 4 ಗಂಟೆಗೆ ಶನೈಶ್ಚರ ಸ್ವಾಮಿಯನ್ನು ರಾಜಮರ್ಯಾದೆಯೊಂದಿಗೆ ಅತ್ತಿಕುಳ್ಳೆ ಪಾಳ್ಯದಲ್ಲಿ ಉತ್ಸವ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ಎನ್.ಆರ್.ಜಯರಾ, ಅಧ್ಯಕ್ಷ ಅಮಾನಿಕೆರೆ ಮಂಜಣ್ಣ, ಕಾರ್ಯದಶರ್ಿ ಕುಮಾರ್, ಖಜಾಂಚಿ ಬಿ.ಕೃಷ್ಣಮೂರ್ತಿ, ಗಂಗಾಧರಯ್ಯ, ಟ್ರಸ್ಟಿಗಳಾದ ನಂಜೇಗೌಡ, ಕರೇಗೌಡ, ಗೋಪಾಲಕೃಷ್ಣೇಗೌಡ, ಎಚ್.ತಿಮ್ಮಪ್ಪ, ಅರ್ಚಕ ತಿಮ್ಮಣ್ಣ, ದೊಡ್ಡಮನೆ ಶಂಕರಣ್ಣ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?