Saturday, December 9, 2023
spot_img
HomeUncategorizedಕೆರೆಗೋಡಿ ರಂಗಾಪುರ ಮಠ: ಮಾಜಿ ಆಡಳಿತಾಧಿಕಾರಿ ನಿಧನ

ಕೆರೆಗೋಡಿ ರಂಗಾಪುರ ಮಠ: ಮಾಜಿ ಆಡಳಿತಾಧಿಕಾರಿ ನಿಧನ

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹುಲ್ಲೇಕೆರೆ ಗ್ರಾಮದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್‍.ಎನ್‍. ಭದ್ರಪ್ಪ(80)ನವರು ಹೃದಯಾಘಾತದಿಂದ ಶನಿವಾರ ತಡ ರಾತ್ರಿ ಸಾವನ್ನಪ್ಪಿದ್ದಾರೆ.

ಮೃತ ಎಸ್‍.ಎನ್‍. ಭದ್ರಪ್ಪನವರು ಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಇವರು ಹುಲ್ಲೇಕೆರೆಯ ಶ್ರೀ ಬಸವೇಶ್ವರ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ತದ ನಂತರ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಹುಲ್ಲೇಕೆರೆಯ ಬಸವೇಶ್ವರ ಪ್ರೌಢ ಶಾಲೆಯ ಕಟ್ಟಡ ಕಟ್ಟಲು ಹಾಗು ಶ್ರೀ ಸೋಮೇಶ್ವರ ಪ್ರೌಢ ಶಾಲೆ ತೆರೆಯಲು ಸಾಕಷ್ಟು ಶ್ರಮಿಸಿದವರಾಗಿದ್ದರು.

ಇವರು ತನ್ನ ನಿವೃತ್ತಿಯ ನಂತರ ತಿಪಟೂರು ತಾಲ್ಲೂಕಿನ ಕೆರೆಗೋಡಿ ರಂಗಾಪುರ ಮಠದ ಶಾಲೆಗಳ ಆಡಳಿತಾಧಿಕಾರಿಯಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಇವರು ದಂಡಿನಶಿವರ ಹೋಬಳಿ ವ್ಯಾಪ್ತಿ ಸಾಕಷ್ಟು ವಿದ್ಯಾರ್ಥಿ ಶಿಷ್ಯಂದಿರನ್ನು ಹೊಂದಿದ್ದು ಮಕ್ಕಳು, ಜನ ಸಾಮಾನ್ಯರ ಅಪಾರ ಪ್ರೀತಿಗಳಿಸಿ ಜನಮಾನಸದಲ್ಲಿ ಉಳಿದವರಾಗಿದ್ದರು.

ಮೃತರ ಅಂತ್ಯಕ್ರಿಯೆ ಕೆ.ಆರ್‍.ಪೇಟೆ ತಾಲ್ಲೂಕಿನ ಸಂತೆಬಾಚಿಹಳ‍್ಳಿಯಲ್ಲಿ ಭಾನುವಾರ ಮಧ್ಯಾಹ್ನ ನೆರೆವೇರಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು