Thursday, March 28, 2024
Google search engine
HomeUncategorizedಹೆತ್ತೇನಹಳ್ಳಿ ಮಾರಮ್ಮನಿಗೆ ಬೆಳ್ಳಿ ಖಡ್ಗ ನೀಡಿದ ಸುರೇಶಗೌಡ

ಹೆತ್ತೇನಹಳ್ಳಿ ಮಾರಮ್ಮನಿಗೆ ಬೆಳ್ಳಿ ಖಡ್ಗ ನೀಡಿದ ಸುರೇಶಗೌಡ

Publicstory


ತುಮಕೂರು ಗ್ರಾಮಾಂತರ: ಹೆತ್ತೇನಹಳ್ಳಿ ಮಾರಮ್ಮನಿಗೆ ಮಾಜಿ ಶಾಸಕರಾದ ಸುರೇಶ್ ಗೌಡ ಅವರು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಆಶಯದಂತೆ ಮಂಗಳವಾರ ಬೆಳ್ಳಿ ಖಡ್ಗವನ್ನು ಸಮರ್ಪಿಸಿದರು.


ಡಿಸೆಂಬರ್-7 ರಂದು ಭಾರತೀಯ ಜನತಾ ಪಕ್ಷದ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಕಛೇರಿ “ ಶಕ್ತಿ ಸೌಧ” ಉದ್ಘಾಟಿಸಲು ಆಗಮಿಸಿದ್ದ ನಾಡಿನ ಜನಪ್ರಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುರೇಶ್ ಗೌಡರವರು ಬೆಳ್ಳಿ ಖಡ್ಗವನ್ನು ನೀಡಿದ್ದರು.


ಮುಖ್ಯಮಂತ್ರಿಗಳು ಬೆಳ್ಳಿ ಖಡ್ಗವನ್ನು ಈ ಭಾಗದ ಶಕ್ತಿ ದೇವತೆಗೆ ಸಮರ್ಪಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಮಾನ್ಯ ಮಾಜಿ ಶಾಸಕರಾದ ಸುರೇಶ್ ಗೌಡರವರು ಮಾರಮ್ಮ ದೇಗುಲಕ್ಕೆ ಬೆಳ್ಳಿಖಡ್ಗ ನೀಡಿದರು.


ಮಾಜಿ ಶಾಸಕ ಸುರೇಶ್ ಗೌಡ ಅವರು ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಬೆಳ್ಳಿ ಖಡ್ಗವನ್ನು ಶಕ್ತಿದೇವತೆಗೆ ಸಮರ್ಪಿಸಲಾಗಿದೆ. ಈ ಭಾಗದ ದುಷ್ಟ ಶಕ್ತಿಗಳು ನಿರ್ಮೂಲನೆಯಾಗಿ, ಒಳ್ಳೆಯ ಕೆಲಸಗಳಾಗಲಿ. ಈ ಭಾಗದ ಜನತೆಗೆ ತಾಯಿ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.


ಉಪವಿಭಾಗಾಧಿಕಾರಿ ಅಜಯ್ ಕುಮಾರ್, ತಹಶೀಲ್ದಾರ್ ಸಿದ್ದೇಶ್ , ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವಕುಮಾರ್,ಉದ್ಯಮಿ ನೀಲೇಶ್, ಸಿದ್ದೇಗೌಡ್ರು,ರವೀಂದ್ರ,ರಾಜಣ್ಣ ನರಸಿಂಹಮೂರ್ತಿ,ಸಿದ್ದರಾಜು, ಎಪಿಎಂಸಿ ಸದಸ್ಯ ಚಂದ್ರಣ್ಣ, ಎ ಪಿ ಎಂಸಿ ಉಪಾಧ್ಯಕ್ಷ ಶಿವರಾಜು, ಬಿಜೆಪಿ ಉಪಾಧ್ಯಕ್ಷ ರಾಜಶೇಖರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು, ಎಸ್ ಸಿ ಮೋರ್ಚ ಅಧ್ಯಕ್ಷರಾದ ರಮೇಶ್, ಕಾರ್ಯಕರ್ತರು, ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು,ಅಧ್ಯಕ್ಷರು ಗ್ರಾಮಸ್ಥರು ಇದ್ದರು.



RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?