Saturday, July 27, 2024
Google search engine
Homeಕವನಭಾನುವಾರದ ಕವಿತೆಭಾನುವಾರದ ಕವಿತೆ: ದೀಪದ ಶಾಸ್ತ್ರ

ಭಾನುವಾರದ ಕವಿತೆ: ದೀಪದ ಶಾಸ್ತ್ರ

ಸತೀಶ್ ಯಲಚಗೆರೆ


ಇ‌ನ್ನೂ, ಇನ್ನೂ ಕಾಯಲಾಗದು

ಇವರೇಕೆ ಇಷ್ಟು ತಡ

ತಡಬಡ ಸದ್ದು

ಹೂವು, ಹಣ್ಣುಗಳ ಸರಪರ

ನನಗೋ ಕಾತರ!

ದೀಪದ ಶಾಸ್ತ್ರ ಎಂದರೆ ಇದೇಕೋ ಇಷ್ಟು ತಡವೇ?

ಎಲ್ಲ ಪಕ್ಕ ಕೂತು ಹರಟುವವರೇ?

ನಮ್ಮಿಬ್ಬರನ್ನೂ ಬಿಟ್ಟರೆ!

ಅಲ್ಲಿ ಹೊಸ್ತಿಲಿಗೆ ಪೂಜೆ

ಐದೇ ಜನ ಸೇರಿ ಮಾಡಬೇಕಂತೆ

ಆರು ಜನ ಬೇಕಿಲ್ಲ… ಎನ್ನುವವರ ಮಾತು!

ಆರೋ, ಏಳೋ ಬೇಗಾದರೆ ಬೇಡವೇನು?

ದೊಡ್ಡ ಸೊಸೆಯೇ ಆಗಬೇಕಂತೆ ಹಣ್ಣಿನ ತಟ್ಟೆ ಹಿಡಿಯಲು…

ಅಯ್ಯೋ! ಈ ಮಾಸ್ಕ್ ಬೇರೆ ಜಾರುತ್ತದೇ?

ಕೊರೊನಾ ನಡುವೆಯೋ ಮದುವೆ ಕನಸುಗಳು!

ಕೊನೆಗೂ ಸೇರಿದರು, ಹಚ್ಚಿದರು ದೇವರ ದೀಪ

ಇನ್ನೂ ನಾವಿಬ್ಬರೂ ಹಚ್ಚಬೇಕು ಬದುಕಿನ ದೀಪ..

ಹಚ್ಚಿದವು ಕನಸಿನ ದೀಪ

ಬೆಳಗಲಿ, ಬೆರಗು ಮೂಡಿಸಲಿ,

ಕನಸ ದಾರಿಗೆ ಬೆಳಕಿನ ಹಣತೆ….

ಇಬ್ಬರ ಕಣ್ಣಲ್ಲೂ ದೀಪದ ಬಿಂಬ

ಎದೆಯಲ್ಲಿ ಸಾವಿರ ಕುಣಿತ….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?