ತುರುವೇಕೆರೆ:
ತಾಲ್ಲೂಕನ್ನು ಬರಪೀಡತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬೆಳೆಪರಿಹಾರ ಹಣವನ್ನು ರೈತರ ಖಾತೆಗೆ ನೇರವಾಗಿ ಸಂದಾಯ ಮಾಡುವ ಉದ್ದೇಶದಿಂದ ಪ್ರತಿಯೊಬ್ಬ ರೈತರೂ ಸಹ ಎಫ್.ಐ.ಡಿ ನಂಬರ್ ಅನ್ನು ಸೃಜಿಸಿ; ಫ್ರೂಟ್ ಗೆ ಲಿಂಕ್ ಮಾಡಿಸಬೇಕೆಂದು ತಾಲ್ಲೂಕು ದಂಡಾಧಿಕಾರಿ ವೈ.ಎಂ.ರೇಣುಕುಮಾರ್ ರೈತರಲ್ಲಿ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿಯೊಬ್ಬ ರೈತರೂ ಕೂಡ ತಮ್ಮ ವಿವಿಧ ಜಮೀನುಗಳ ಸವರ್ೇ ನಂಬರ್ರನ್ನೊಳಗೊಂಡ ಎಫ್.ಐ.ಡಿ ನಂಬರ್ ಮಾಡಿಸಿ ಅದನ್ನು ಸರ್ಕಾರ ನಿಗಧಿಪಡಿಸಿದ ಫ್ರೂಟ್ ತಂತ್ರಾಂಶಕ್ಕೆ ಜೊಡಣೆ ಮಾಡಬೇಕಿದೆ.
ಅದಕ್ಕಾ ಪ್ರತಿ ಗ್ರಾಮಗಳಿಗೆ ಗ್ರಾಮಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಕೃಷಿ ಇಲಾಖಾ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಪಶುಪಾಲಾ ಇಲಾಖೆಯವರು ಕೂಡಿ ಸಾರ್ವಜನಿಕರು, ರೈತರ ಮನೆಬಾಗಿಲಿಗೆ ಬರಲಿದ್ದು ಅವರಿಗೆ ರೈತರು ತಮ್ಮ ಜಮೀನುಗಳಿಗೆ ಸಂಬಂಧಪಟ್ಟ, ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳನ್ನು ನೀಡಬೇಕು.
ಹಾಗಾಗಿ ನನ್ನನ್ನೂ ಒಳಗೊಂಡಂತೆ ಪ್ರತಿದಿನ 6 ಗಂಟೆಗೇ ರೈತರ ಮನೆಬಾಗಿಲಿಗೆ ಬರುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದು ಎಲ್ಲ ಅಧಿಕಾರಿಗಳು ಶ್ರವಹಿಸಿ, ಬದ್ಧತೆಯಿಂದ ಕೆಲಸ ಮಾಡೋಣ.
1.1.2024ಕ್ಕೆ 18 ವರ್ಷ ತುಂಬಿದ ಯುವಕರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದ್ದು ಅರ್ಹತೆ ಇರುವ ಯುವಕ, ಯುವತಿಯರು ತಮ್ಮ ಮತಗಟ್ಟೆ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಬಳಿ ಸೂಕ್ತ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಿ ನಂತರ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ, ಇಲ್ಲವೋ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚುನಾವಣಾ ಶಾಖೆಯ ಅಧಿಕಾರಿ ಪಿ.ಕಾಂತರಾಜು, ಪ್ರಥಮ ದಜರ್ೆ ಸಹಾಯಕಿ ಎ.ಆರ್.ವತ್ಸಲಾ, ಶಿರಸ್ಥೆದಾರ್ ಡಿ.ಆರ್,ಸುನಿಲ್ ಕುಮಾರ್ ಇದ್ದರು.
ತುರುವೇಕೆರೆ ಈಗ ಬರಪೀಡಿತ: ಏನ್ನೆಲ್ಲ ಸೌಲಭ್ಯ ಸಿಗಲಿವೆ ಗೊತ್ತಾ
Recent Comments
on ಗುರು
on ಕೊಳಲ ಕರೆ
on ಕೊಳಲ ಕರೆ
on ಕೋರೋಣ
on ಸರಗಳವು
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…

