Sunday, July 21, 2024
Google search engine
Homeಜಸ್ಟ್ ನ್ಯೂಸ್ಶಾಸಕ MTK ಗೆ ಹೂಮಳೆಯ ಸ್ವಾಗತ

ಶಾಸಕ MTK ಗೆ ಹೂಮಳೆಯ ಸ್ವಾಗತ

ನೂತನ ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಅದ್ದೂರಿ ಹೂ ಮಳೆಗರೆದ ಜೆಡಿಎಸ್ ಕಾರ್ಯಕರ್ತರು

ತುರುವೇಕೆರೆ: ಈ ಬಾರಿ ತಾಲ್ಲೂಕಿನ ಜೆಡಿಎಸ್ಕಾರ್ಯಕರ್ತರ ಪರಿಶ್ರಮದಿಂದ ನಾನು ಶಾಸಕನಾಗಿದ್ದೇನೆ ನನ್ನ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.


ಪಟ್ಟಣದಲ್ಲಿ ತಾಲ್ಲೂಕು ಎಂ.ಟಿ.ಕೃಷ್ಣಪ್ಪ ಅಭಿಮಾನಿ ಬಳಗ ಹಾಗು ಜೆಡಿಎಸ್ ಕಾರ್ಯಕರ್ತರ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನೂತನ ಶಾಸಕರ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು
ಕ್ಷೇತ್ರದ ಜನರು ನನ್ನ ಮೇಲೆ ಹೆಚ್ಚಿನ ಭರವಸೆ ಇಟ್ಟು ಗೆಲ್ಲಿಸಿದ್ದು ಈ ಕ್ಷೇತ್ರವನ್ನು ಹೆಚ್ಚಿನ ಅಭಿವೃದ್ದಿ ಮಾಡುತ್ತೇನೆ. ಕ್ಷೇತ್ರದ ಜನತೆ ಹಣ, ಆಮಿಷಗಳಿಗೆ ಬೆಲೆ ಕೊಡದೆ ಯಾರು ಕೆಲಸ ಮಾಡುತ್ತಾರೆ ಅಂತಹವರಿಗೆ ಗೆಲುವು ನೀಡುತ್ತಾರೆ ಎಂಬುದು ನನ್ನ ಗೆಲುವಿನಿಂದ ಸಾಭೀತಾಗಿದೆ ಎಂದರು.


2018ರ ಚುನಾವಣೆಯಲ್ಲಿ 1 ಸಾವಿರ ಅಂತರದಲ್ಲಿ ಸೋಲಿಸಿದ್ದ ಕ್ಷೇತ್ರದ ಜನರು 2023ರ ಚುನಾವಣೆಯಲ್ಲಿ 10 ಸಾವಿರ ಅಂತರದಲ್ಲಿ ಗೆಲ್ಲಿಸಿದ್ದೀರಾ. ಮತದಾರ ಪ್ರಭುವಿನ ತೀರ್ಪಿಗೆ ತಲೆಬಾಗಲೇಬೇಕು. ಈ ಚುನಾವಣೆಯಲ್ಲಿ ಹಣ ಉಳ್ಳವರು ನನ್ನ ಸಹಕಾರಕ್ಕೆ ನಿಲ್ಲದೆ ಕದ್ದು ಹೋದರು, ಬಡವರು, ಮುಖಂಡರು, ನಿಷ್ಟವಂತಾ ಕಾರ್ಯಕರ್ತರು ನನ್ನ ಪರವಾಗಿ ನಿಂತು ಚುನಾವಣೆ ನಡೆಸಿ ಹೋರಾಟ ಮಾಡಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಾನು ನಿಮ್ಮ ಸಹಕಾರಕ್ಕೆ ಸದಾ ಚಿರಋಣಿಯಾಗಿದ್ದು ರೈತರ, ಬಡ ಜನರ ಕೆಲಸವನ್ನು ಮಾಡುವುದರ ಜೊತೆಗೆ ಸಂಪೂರ್ಣ ಅಭಿವೃದ್ದಿ ಮಾಡುತ್ತೇನೆ ಎಂದರು.


ಇದಕ್ಕೂ ಮುನ್ನಾ ಪಟ್ಟಣದ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಶಾಸಕ ಎಂ.ಟಿ,ಕೃಷ್ಣಪ್ಪ ಅವರು ಮೆರವಣಿಗೆಯ ಮೂಲಕ ಉಡಸಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮುಸ್ಲಿಂ ದರ್ಗಾ ಬೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಪಟ್ಟಣದಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಾಣಸಂದ್ರ ವೃತ್ತದಲ್ಲಿ ಜೆಸಿಬಿಗಳ ಮೂಲಕ ಹೂ ಮಳೆಗೈದರು.


ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮುಖಂಡರು ಹಾಗೂ ಕಾರ್ಯಕರ್ತರು ಹಾರ, ಶಾಲು ಹಾಕಿ ಸನ್ಮಾನಿಸಿದರು. ಅಪಾರ ಕಾರ್ಯಕರ್ತರು ವಿಜಯೋತ್ಸವ ಮೆರವಣಿಗೆಯಲ್ಲಿ ಡಿ.ಜೆ.ಸೌಂಡಿಗೆ ಕುಣಿದು ಕುಪ್ಪಳಿಸಿ ಜೆಡಿಎಸ್ ನಾಯಕರಿಗೆ ಹಾಗೂ ನೂತನ ಶಾಸಕರಿಗೆ ಜಯ ಘೋಷ ಹಾಕಿದರು. ಪಟಾಕಿ ಸಿಡಿಸಿ ಎಲ್ಲರಿಗೂ ಸಹಿ ಹಂಚಿ ಸಂಭ್ರಮಿಸಿದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾವಾಳರಾಮೇಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಎನ್.ಆರ್.ಸುರೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ್ ಗೌಡ, ಮುಖಂಡರಾದ ಯಡಿಗಿಹಳ್ಳಿವಿಶ್ವನಾಥ್, ದಿವಾಕರ್, ರೇಣುಕೇಶ್, ರಾಘು ಸೇರಿದಂತೆ ಅಪಾರ ಮುಖಂಡರು ಕಾರ್ಯಕರ್ತರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?