Sunday, July 21, 2024
Google search engine
Homeತುಮಕೂರ್ ಲೈವ್ಅಂಬೇಡ್ಕರ್ ರಿಂದಾಗಿ ನನಗೆ ಈ ಸ್ಥಾ‌ನ ಸಿಕ್ಕಿದೆ: ಕುಮಾರ್ ಗೌಡ

ಅಂಬೇಡ್ಕರ್ ರಿಂದಾಗಿ ನನಗೆ ಈ ಸ್ಥಾ‌ನ ಸಿಕ್ಕಿದೆ: ಕುಮಾರ್ ಗೌಡ

ಮಂಜುನಾಥ ಹೆತ್ತೇನಹಳ್ಳಿ


ತುಮಕೂರು: ದೇಶದಲ್ಲಿ ಪ್ರಪ್ರಥಮ ಬಾರಿಗೆ “ಮಹಾನಾಯಕ
ಡಾ. ಬಿ . ಆರ್. ಅಂಬೇಡ್ಕರ್” ಜಿ. ವಾಹಿನಿ ಧಾರವಾಹಿಯ ಮೊದಲ ಸಂಚಿಕೆಯನ್ನು ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಬೃಹತ್ LED ಪರದೆಯ ಮೂಲಕ ನೇರ ಪ್ರಸಾರಕ್ಕೆ ತುಮಕೂರಿನ ಎಲ್ಲಾ ಅನುಯಾಯಿಗಳು ಸಾಕ್ಷಿಯಾದರು.

ಈ ಸಂಧರ್ಭದಲ್ಲಿ ಮಾತನಾಡಿದ ಹಿರೇ ಮಠದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಿವನಂದ ಶಿವಚಾರ್ಯರು ಇಂದು ನನ್ನ ದೇಶದಲ್ಲಿ ಸಂವಿಧಾನ ವಿಲ್ಲದಿದ್ದರೆ ಇಡೀ ಶೂದ್ರ ಸಮುದಾಯ, ಧ್ವನಿ ಇಲ್ಲದ ಸಮುದಾಯ ಭೂ ಒಡೆತನವಿಲ್ಲದೇ, ರಾಜ್ಯಾಧಿಕಾರವಿಲ್ಲದೇ, ಶಿಕ್ಷಣವಿಲ್ಲದೇ ಗುಲಾಮಗಿರಿ & ಶೋಷಣೆಯಿಂದ ಬದುಕಬೇಕಿತ್ತು. ಇಂತಹ ಅದಮ್ಯ ಚೇತನದ ಆದರ್ಶಯುತ ಜೀವನ, ಸಂಘರ್ಷದ ಜೀವನ & ಹೋರಾಟದ ಜೀವನವನ್ನು ಧಾರವಾಹಿಯ ಮೂಲಕ ಪರಿಚಯವಾಗುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದರು.

ನಿಮ್ಮಲ್ಲಿ ನನ್ನ ಮನವಿ ಎಂದರೇ ಬಾಬಾ ಸಾಹೇಬರು ಬರೀ ದಲಿತ ಸಮುದಾಯಕ್ಕಲ್ಲಾ ಈದೇಶದ ಪ್ರತಿಯೊಬ್ಬ ಭಾರತೀಯನ ಘನತೆಯ ಜೀವನವನ್ನು ಕಟ್ಟಿಕೊಟ್ಟದ್ದು ಡಾ ಬಾಬಾ ಸಾಹೇಬರೇ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ಜೆ ಕುಮಾರ್ ಗೌಡ ಮಾತನಾಡಿ, ಜಿ ಟಿವಿ ಕನ್ನಡದ ಮಹಾನಾಯಕ ದಾರವಾಹಿ ಮೊದಲ ಸಂಚಿಕೆಯನ್ನು ತುಮಕೂರಿನ ಸಮಾನಮನಸ್ಕರರು ಎಲ್ಲರೂ ಸೇರಿ ಆಚರಿಸುತ್ತಿರುವುದು ಹಾಗೂ ನೇರಪ್ರಸಾರವನ್ನು ಅದು ಅದ್ಭುತವಾದ LED ಪರದೆಯ ಮೂಲಕ ಪ್ರದರ್ಶನಗೊಳಿಸುತ್ತಿರುವುದು ಸಂತೋಷದ ವಿಷಯವಾಗಿದೆ ಹಾಗೂ ಜೀ ಕನ್ನಡ ವಾಹಿನಿಯ ಇಂತಹ ಪ್ರಯತ್ನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಭಾರತೀಯರೆಲ್ಲರಾದ ನಾವು ಮೊದಲನೆಯದಾಗಿ ನಾವು ಇಂದಿನ ಪರಿಸ್ಥಿತಿಯಲ್ಲಿ ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಸಂವಿಧಾನಾತ್ಮಕ ವಿಷಯಗಳನ್ನು ಚೆನ್ನಾಗಿ ತಿಳಿಯಲು ಅದರ ನಿರ್ಮಾತೃವಾದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವ ಹಾಗೂ ಅವರನ್ನು ಅಧ್ಯಯನ ಮಾಡುವ ತುರ್ತು ಪರಿಸ್ಥಿತಿ ಇಂದು ನಮ್ಮ ಮುಂದಿದೆ ಎಂದರು.

ಯಾಕೆಂದರೆ ಸಂವಿಧಾನ ಸಮರ್ಪಣೆಯಾಗಿ 70 ವರ್ಷ ಕಳೆಯುತ್ತಾ ಬಂದಿದೆ ಆದರೂ ಕೂಡ ಇಂದಿನ ಜಗತ್ತಿನ ಯಾವುದೇ ಪರಿಸ್ಥಿತಿ ಯಾವುದೇ ಸಮಸ್ಯೆಗಳಿಗೆ ಉತ್ತರ ನಮಗೆ ಸಿಗುತ್ತದೆ ಎಂದಾದರೆ ಅದು ನಮ್ಮ ಸಂವಿಧಾನದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ನಾವು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವರ ಜ್ಞಾನದ ದೃಷ್ಟಿಯಿಂದ ತಿಳಿಯಬೇಕೆ ವಿನಃ ಅವರನ್ನು ಜಾತಿಯ ದೃಷ್ಟಿಯಿಂದ ತಿಳಿದರೇ ನಮಗೆಂದಿಗೂ ಅರ್ಥವಾಗುವುದಿಲ್ಲ ಎಂದು ತಿಳಿಸಿದರು.

ಬಾಬಾಸಾಹೇಬರ 125ನೇ ಜನ್ಮದಿನಾಚರಣೆ ಅಂಗವಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯ ನಡೆಸಿದ ವಿಶ್ವದ ಅತ್ಯಂತ ಶ್ರೇಷ್ಠ ಜ್ಞಾನಿ ಯಾರೆಂದು ನಡೆಸಿದ ಸರ್ವೆಯಲ್ಲಿ ಪ್ರಪ್ರಥಮ ಹೆಸರು ಇಡೀ ವಿಶ್ವದಲ್ಲೇ ಎಲ್ಲಾ ಕ್ಷೇತ್ರಗಳಲ್ಲೂ ಹೆಸರನ್ನು ತೆಗೆದುಕೊಂಡರೂ ಕೂಡಾ ಬಾಬಾಸಾಹೇಬರ ಹೆಸರು ಮೊದಲನೆಯದಾಯಿತು..

ಇಂತಹ ಕಾರಣದಿಂದ ವಿಶ್ವ ಸಂಸ್ಥೆಯೇ ಬಾಬಾ ಸಾಹೇಬರ ಜನ್ಮದಿನಾಚರಣೆಯನ್ನು “ವಿಶ್ವ ಜ್ಞಾನಿ” ಯ ದಿನಾಚರಣೆ ಎಂದು ಆಚರಿಸುವಂತೆ ಎಲ್ಲಾ ದೇಶಗಳಿಗೂ ಆದೇಶಿಸಿತು.

ಇಂತಹ ಶ್ರೇಷ್ಠ ವ್ಯಕ್ತಿ ಜನಿಸಿದ ಈ ಭಾರತ ಭೂಮಿಯಲ್ಲಿ ನಾನು ಹುಟ್ಟಿದ್ದೇನೆಂಬ ಹೆಮ್ಮೆ ನನಗಿದೆ. ಹಾಗೆ ನಾನು ಈ ದಿನದ ನನ್ನೆಲ್ಲಾ ಅಧಿಕಾರ ಸಂತೋಷ ಸುಖ ನೆಮ್ಮದಿಗೆ ಮುಖ್ಯ ಕಾರಣ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಎಂದು ಎದೆಯುಬ್ಬಿಸಿ ಹೇಳಲು ಅಭಿಮಾನವಿದೆ ಎಂದರು.

ನಾನು ಯಾವಾಗಲೂ ಕೂಡ ನನ್ನ ತಂದೆ-ತಾಯಿಗೆ ಎಷ್ಟು ಗೌರವಿಸುತ್ತೇನೋ ಅದಕ್ಕಿಂತ ಹೆಚ್ಚಿನ ಗೌರವವನ್ನು ನನ್ನ ಹೃದಯ ಪೂರ್ತಿಯಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ನೀಡಿ ಗೌರವಿಸುತ್ತೇನೆ ಎಂದು ತಿಳಿಸಿದರು.

ಇಂತಹ ಗೌರವಯುತವಾದ ಜೀವನ ನಡೆಸಿದ ಅವರು ನಡೆದು ಬಂದ ಹಾದಿಯನ್ನು ಅವರು ಹಾಕಿಕೊಟ್ಟ ಮಾರ್ಗವನ್ನು ಯಥಾವತ್ತಾಗಿ ಪಾಲಿಸುವುದರೊಂದಿಗೆ ನಮ್ಮ ಜೀವನವನ್ನು ಅತ್ಯಂತ ಶ್ರೇಷ್ಟವಾಗಿ ನಿರ್ವಹಿಸುತ್ತೇವೆ ಎಂದು ಪ್ರಮಾಣಿಕರಿಸೋಣಾ ಎಂದು ಮಹಾಪೌರರಾದ ಫರೀದ ಬೇಗಂ ಅಭಿಪ್ರಾಯ ಪಟ್ಟರು.

ನಾವೆಲ್ಲರೂ ಜಾತಿ ಮುಖವಾಡವನ್ನು ತೆಗೆದು ನೈಜವಾದ ವಿಶ್ವದ ಜ್ಞಾನಿ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳನ್ನು ನಿರಂತರ ಅಧ್ಯಯನ ಮಾಡಿ, ಬಲಿಷ್ಠವಾದ ಭಾರತವನ್ನು ಕಟ್ಟಲಿಕ್ಕೆ ನಾವೆಲ್ಲರೂ ಹೆಜ್ಜೆ ಹಾಕಬೇಕೆಂದು ಹೇಳಿದರು.

ಎಲ್ಲರೂ ಅತಿ ಹೆಚ್ಚು ಅಧ್ಯಯನ ಮಾಡಿ ಅಧ್ಯಯನದಿಂದ ಅಷ್ಟೇ ನಮ್ಮೆಲ್ಲರ ಸಮಸ್ಯೆ ಪರಿಹಾರ ಎಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತನ್ನು ನಾವೆಲ್ಲರೂ ಹೆಚ್ಚು ಹೆಚ್ಚು ಓದಿ ಭವ್ಯ ಭಾರತವನ್ನು ನಿರ್ಮಿಸಿ ಸಂವಿಧಾನಶಿಲ್ಪಿ ಕಂಡ ಭವ್ಯ ಭಾರತದ, ಸಮಸಮಾಜದ ಕನಸನ್ನು ನನಸಾಗಿ ಮಾಡೋಣ ಎಂದು ವೈ. ಹೆಚ್ ಹುಚ್ಚಯ್ಯ ಹೇಳಿದರು.

ಇಂದಿಗೂ ಈ ಸಮಾಜದಲ್ಲಿ ಅಸ್ಪ್ರುಶ್ಯತೆ & ಅಸಮಾನತೆ ತಾಂಡವವಾಡುತ್ತಿದೆ ಇದಕ್ಕೆ ನಾವು ಹೊರತಲ್ಲಾ ಆ ನೋವನ್ನು ನಾವು ಅನುಭವಿಸಿದ್ದೇವೆ ಎಂದು ವಾಲೆ ಚಂದ್ರಯ್ಯ ಅಭಿಪ್ರಾಯ ಪಟ್ಟರು.

ಇಷ್ಟೆಲ್ಲಾ ಸಾಧನೆ ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಹಾಕಿಕೊಟ್ಟ ಹಾದಿ ಯಾವುದು..? ಆ ಹಾದಿ ಎಂದರೆ ಬಹುತೇಕರು ತಿಳಿದಿರುವಂತೆ “ಶಿಕ್ಷಣ, ಸಂಘಟನೆ, ಹೋರಾಟವಲ್ಲ” ಅದರಲ್ಲೂ ಕೂಡ ಕಸರತ್ತುಗಳು ನಡೆದುಹೋಗಿದೆ. ನಿಜವಾದ ಅರ್ಥದಲ್ಲಿ “ಶಿಕ್ಷಣ, ಹೋರಾಟ, ಸಂಘಟನೆ”. ಯಾವಾಗ ನಾವು ಶಿಕ್ಷಿತರಾಗುತ್ತೇವೊ ನಮ್ಮಲ್ಲಿ ವೈಚಾರಿಕವಾದಂತಹ, ವೈಜ್ಞಾನಿಕವಾದಂತಹ, ಹೋರಾಟದ ಮನೋಭಾವ ಬರುತ್ತದೆ ಎಂದರು.

ಹೋರಾಟದ ಮನೋಭಾವ ಸರಿಯಾಗಿದ್ದರೆ ಜನಗಳೇ ಸಂಘಟಿತರಾಗುತ್ತಾರೆ ಎಂದು ಬಾಬಾಸಾಹೇಬ್ ಹೇಳಿದ್ದು. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕಿದೆ ಎಂದು ಕಾರ್ಯಕ್ರಮವನ್ನು ಆಯೋಜಿಸಿದ್ದ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ಸಂಸ್ಥಾಪಕರಾಜ್ಯಾಧ್ಯಕ್ಷರಾದ ಕೆ ಹೆಚ್ ಶಿವಕುಮಾರ್ ( ಬಂಡೆ ಕುಮಾರ್ ) ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ಷಫಿ ಅಹಮದ್, ಲೋಕ ಜನಶಕ್ತಿ ಪಕ್ಷದ ರಾಜ್ಯಾಧ್ಯಕ್ಷರಾದ ಜಗನ್ನಾಥ್, ಉಪ ಮಹಾಪೌರರಾದ ಶಶಿಕಲಾ ಗಂಗಹನುಮಯ್ಯ, ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪುಗೌಡ, ಜಯಕರ್ನಾಟಕ ಸೋಮಶೇಖರ್, LJP ಜಿಲ್ಲಾಧ್ಯಕ್ಷ ಶಿವಪ್ರಸಾದ್, DSS ಪಿ ಎನ್ ರಾಮಯ್ಯ, DSS ಕೇಬಲ್ ರಘು, ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟಾ ಶಂಕರ್, ಕೊಡಿಯಾಲ ಮಹಾದೇವ್, ರಾಮಯ್ಯ, ದಲಿತಸೇನೆ ಗೂಳೂರು ಸಿದ್ದರಾಜು, ಪ್ರಸನ್ನ ಕುಮಾರ್, ವೆಂಕಟೇಶ್, ರಾಮಾಂಜಿ, ಗೂಳರವೆ ನಾಗರಾಜ್, ದರ್ಶನ್, ಚೇತನ್ & ಹೆಚ್.ಎನ್ &ಮಂಜುನಾಥ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?