Saturday, July 20, 2024
Google search engine
Homeತುಮಕೂರು ಲೈವ್ಎಸ್.ಆರ್ ಹಿರೇಮಠ್ ಅವರಿಂದ ನಾಯಕತ್ವ ತರಬೇತಿ ಶಿಬಿರ

ಎಸ್.ಆರ್ ಹಿರೇಮಠ್ ಅವರಿಂದ ನಾಯಕತ್ವ ತರಬೇತಿ ಶಿಬಿರ

ತುಮಕೂರು: “ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್ ಅವರಿಂದ ರಾಜ್ಯಮಟ್ಟದ 2ದಿನದ ನಾಯಕತ್ವ ತರಬೇತಿ ಶಿಬಿರ ತುಮಕೂರಿನ ಸಿದ್ಧರಬೆಟ್ಟದಲ್ಲಿ” ನಡೆಯಲಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮಲ್ಲಿಕಾರ್ಜುನ ಭಟ್ಟರಹಳ್ಳಿ ತಿಳಿಸಿದ್ದಾರೆ.

ಪ್ರಸ್ತುತ ದೇಶ ಮತ್ತು ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರ, ಅಪ್ರಾಮಾಣಿಕ ನಾಯಕರಿಂದ ಕೂಡಿದ್ದು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಎಲ್ಲೆಲ್ಲೂ ಜಾತೀಯತೆ ,ಅಸಮಾನತೆ, ತಿದ್ದುಪಡಿಯಾಗುತ್ತಿರುವ ಕಾಯ್ದೆಯನ್ನು ವಿರೋಧಿಸಿ ಪ್ರಜೆಗಳ ಹೋರಾಟಗಳನ್ನು ಮತ್ತು ಜನಾಭಿಪ್ರಾಯಗಳಿಗೆ ಮನ್ನಣೆಕೊಡದ ಸರ್ಕಾರಗಳನ್ನು ನೋಡಿದರೆ ಒಂದು ಒಂದು ರೀತಿ ಅಧಿಕಾರಶಾಹಿ ಪದ್ಧತಿಯನ್ನು ಅಳವಡಿಸಿಕೊಂಡಂತೆ ಕಾಣುತ್ತಿದೆ ಎಂದಿದ್ದಾರೆ.

ಇನ್ನು ಸ್ಥಳೀಯ ಸರ್ಕಾರಗಳಲ್ಲಂತೂ ಜನರಿಗೆ ಸ್ಪಂಧಿಸುವ ಜನನಾಯಕರನ್ನು ಕಾಣಲು ಸಾಧ್ಶವೇ ಇಲ್ಲ ಹೀಗಾಗಿ ಸ್ಥಳೀಯ ಸಂಸ್ಥೆಗಳು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುತ್ತಿವೆ. ಹೀಗೆ ಸ್ಥಳೀಯ ಸಂಸ್ಥೆಗಳಲ್ಲಿನ ಕಾರ್ಯವಿಧಾನ ಹಾಗೂ ಅವುಗಳಿಗೆ ಬರುವ ಅನುದಾನವನ್ನು ಯಾವ ರೀತಿ ಬಳಸಿಕೊಂಡು ಜನಸೇವೆಗೆ ಮುಂದಾಗಬೇಕು ಎಂಬುದನ್ನು ಸದರಿ ತರಬೇತಿ ಶಿಬಿರದಲ್ಲಿ ತಿಳಿಸಲಾಗುವುದು.

ಸ್ವಚ್ಚ, ಪ್ರಾಮಾಣಿಕ, ಜನಪರ ಜನಸೇವಕರನ್ನು ರಾಜಕೀಯ ನಾಯಕರನ್ನಾಗಿ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಸಲುವಾಗಿ ಜಿಲ್ಲಾಪಂಚಾಯ್ತಿ,ತಾಲೂಕುಪಂಚಾಯ್ತಿ, ಗ್ರಾಮಪಂಚಾಯ್ತಿ, ಪಟ್ಟಣಪಂಚಾಯ್ತಿ, ಪುರಸಭೆ, ನಗರಸಭೆ, ಹಾಗೂ ಮಹಾನಗರಪಾಲಿಕೆಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜನಸೇವೆ ಮಾಡ ಬಯಸುವರಿಗೆ ಯಾವುದೇ ಹಣ ,ಹೆಂಡ, ಜಾತಿಧರ್ಮವನ್ನು ಹೊರತು ಪಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಪಣತೊಟ್ಟ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತುಮಕೂರಿನ ಸಿದ್ದರಬೆಟ್ಟದಲ್ಲಿ ಜನವರಿ 11 ಮತ್ತು 12ರಂದು ಎರಡು ದಿನದ ನಾಯಕತ್ವ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಇಂಥದ್ದೊಂದು ತರಬೇತಿ ಶಿಬಿರ ಮಾಡುವ ಮುಖಾಂತರ ರಾಜ್ಶದಲ್ಲಿ ಹೊಸತನದ ನಾಯಕತ್ವದ ಜೀವಪರ ಮನಸ್ಥಿತಿಗಳ ಪಾಂಚಜನ್ಶ ಮೊಳಗಿಸಲು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಜ್ಜಾಗಿದೆ.

ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜನಜಾಗೃತಿ ಮೂಡಿಸಿದೆ ಮತ್ತು ಹಲವಾರು ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಿದೆ ಎಂದು ಹೇಳಿದ್ದಾರೆ.

ದೇಶದ ಪ್ರಗತಿ ರಾಜಕಾರಣದ ಮೇಲೆ ನಿಂತಿದೆ ಆದಕಾರಣ ನಿಷ್ಪಕ್ಷಪಾತ ಜನಪರ ನಾಯಕರನ್ನು ತಯಾರು ಮಾಡುವತ್ತ ಹೆಜ್ಜೆಹಾಕಿದೆ ಪ್ರಸ್ತುತ ತರಬೇತಿ ತುಮಕೂರಿನಲ್ಲಿ ನಡೆಯಲಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇಂಥ ತರಬೇತಿ ಶಿಬಿರಗಳು ನಡೆಯಲಿವೆ.

ಎರಡು ದಿನವೂ ಶಿಬಿರದಲ್ಲಿ ಜನಪರ ಚಿಂತಕರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಆರ್. ಹೀರೆಮಠ್ ರವರುˌಉಡುಪಿಯ ಅಂತರಾಷ್ರ್ಟೀಯ ತರಬೇತುದಾರರಾದ ಜಯಶ್ರೀ ಭಟ್ˌ ಪಂಚಾಯತ್ ರಾಜ್ ಪರಿಷತ್ ಅಧ್ಶಕ್ಷರಾದ ಕಾಡಶೆಟ್ಟೀಹಳ್ಳಿ ಸತೀಶ್ ರವರು ಸಂಪೂರ್ಣ ಚಟುವಟಿಕೆ ಆಧಾರಿತವಾಗಿ ವಿಭಿನ್ನ ರೀತಿಯ ತರಬೇತಿ ನೀಡಿ ಪ್ರತೀ ವ್ಶಕ್ತಿಯಲ್ಲಿರುವ ನಾಯಕನನ್ನು ಜಾಗ್ರುತಗೊಳಿಸಿ ಶಿಬಿರಾರ್ಥಿಗಳಿಗೆ ಮಾರ್ಗ ದರ್ಶನ ಮಾಡುತ್ತಾರೆ.

ತುಮಕೂರು ಶಿಬಿರದಲ್ಲಿ ಸಾಮಾಜಿಕ ಹೋರಾಟಗಾರ ಶ್ರೀ.ರವಿಕೃಷ್ಣಾ ರೆಡ್ಡಿ , ಪರಿಸರ ಹೋರಾಟಗಾರ ಜ್ಞಾನಸಿಂಧೂಸ್ವಾಮಿ,ಮಂಗಳೂರಿನ ಅಮ್ರುತ್ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿರುತ್ತಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಊಟˌವಸತಿ ಸಹಿತ ಟ್ರೆಕ್ಕಿಂಗ್ ಆಧಾರಿತ ವಿಶಿಷ್ಠ ತರಬೇತಿಗೆ 100ಜನರಿಗೆ ಮಾತ್ರ ಅವಕಾಶವಿದ್ದು ಹೆಸರು ನೊಂದಣಿಗಾಗಿ ಮೊ. 9880665397, 9066133377 ಸಂಪರ್ಕಿಸುವಂತೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?