Saturday, December 9, 2023
spot_img
Homeತುಮಕೂರು ಲೈವ್ಕದ್ದುಮುಚ್ಚಿ ಮದುವೆ ತಡೆದ ಅಧಿಕಾರಿಗಳ ತಂಡ

ಕದ್ದುಮುಚ್ಚಿ ಮದುವೆ ತಡೆದ ಅಧಿಕಾರಿಗಳ ತಂಡ

ಪಬ್ಲಿಕ್ ಸ್ಟೋರಿ


ತಿಪಟೂರು : ಬಾಲಕಿಯೊಬ್ಬಳಿಗೆ ಯಾರಿಗೂ ಹೇಳದೆ ಗೌಪ್ಯವಾಗಿ ವಿವಾಹ ನಡೆಸಲು ಮುಂದಾಗಿದ್ದ ಪ್ರಕರಣವನ್ನು ಶನಿವಾರ ಬೇಧಿಸುವಲ್ಲಿ ಮಕ್ಕಳ ರಕ್ಷಣಾ ಸಮಿತಿ ಯಶಸ್ವಿಯಾಗಿದೆ.

ಹೊನ್ನವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೇ.20ರಂದು ನಡೆಯಬೇಕಿದ್ದ ಮದುವೆ ನಿಶ್ಚಯವಾಗಿತ್ತು. ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು‌ ನೀಡಲಾಗಿತ್ತು.

ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ತಂಡವೂ ಗ್ರಾಮಕ್ಕೆ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ವಿವಾಹ ಮಾಡುವುದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಎಸ್.ನಂದಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಬಿ.ಎನ್.ಪ್ರೇಮಾ, ಹೊನ್ನವಳ್ಳಿ ಪಿಎಸ್‍ಐ ವೆಂಕಟೇಶ್, ಪಿಡಿಓ ಶಿವಲಿಂಗಯ್ಯ, ಗ್ರಾಮಲಿಕ್ಕಿಗರು ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು