Saturday, July 27, 2024
Google search engine
Homeಸಾಹಿತ್ಯ ಸಂವಾದಕವನಕವಿತೆ; ಸಂಕ್ರಾಂತಿ

ಕವಿತೆ; ಸಂಕ್ರಾಂತಿ

ಸಂಕ್ರಾಂತಿಯ ಸಂಭ್ರಮಕ್ಕೂ ಆಧುನಿಕತೆಯ ಸಂಕ್ರಮಣ. ಎಳ್ಳು ಸವಿಯುವವರು ಇಲ್ಲ. ಹದವಾಗಿ ಉರಿದ ಎಳ್ಳಿನ ಗಮ್ಮತ್ತೇ ಬೇರೆ. ಎಂಬ ಅರ್ಥದ ಕವನ ಸಂಕ್ರಾಂತಿಗಾಗಿ ಡಾII ರಜನಿ ಅವರಿಂದ.

ಸಂಕ್ರಾಂತಿ


ಶಂಖಿನಗಾತ್ರ ಚಳಿ ಹೋಗಿ
ಸಾಸಿವೆ ಕಾಳು ಗಾತ್ರ ಸೆಖೆ
ಹುಟ್ಟಿ …

ಒಣಗಿದ ಮೈಗೆ
ತಿಂದ ಎಳ್ಳಿನ
ಎಣ್ಣೆ …

ಕಬ್ಬು ಸೀಳಿ ಹಲ್ಲಿನ
ಸಂದು ಸಂದಿಗೂ
ರಸ…

ಸುಗ್ಗಿ ಮುಗಿದು
ಹುಗ್ಗಿ ತಿಂದ
ಮಗ…

ಕಣದ
ರಾಶಿಗೆ
ಕಾದು …

ಉತ್ತರಕ್ಕೆ
ಸೂರ್ಯನ
ಪಯಣ …

ಉತ್ತರಾಯಣಕ್ಕೆ
ಕಾದ
ಭೀಷ್ಮ…

ಬೆಲ್ಲ ಹಂಚಿ
ಹಾರಿಸಿದ
ಗಾಳಿಪಟ…

ಹಗಲು ಹೆಚ್ಚಾಗಿ
ರಾತ್ರಿ
ಚಿಕ್ಕದಾಗಿ…

ನೆರಿಗೆ ಚಿಮ್ಮಿ
ಹಂಚುತ್ತಿದ್ದ
ಎಳ್ಳು…

ವಾಟ್ಸ್ ಅಪ್ ನಲ್ಲಿ
ಹರಿದಾಡಿದ
ಎಳ್ಳು ಕಬ್ಬು …

ರೆಡಿಮೇಡ್ ಎಳ್ಳಿನಲ್ಲಿ
ಉರಿಯದ
ಕಡ್ಲೆ ಬೀಜ …

ಕೊಬ್ಬರಿಗೆ ಮುಗ್ಗಲು
ಬೆಲ್ಲಕ್ಕೆ
ಸಕ್ಕರೆ ಕಾಯಿಲೆ…


ಡಾII ರಜನಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?