Saturday, July 20, 2024
Google search engine
Homeತುಮಕೂರು ಲೈವ್ಕೊರೊನಾ: 1 ಕೋಟಿ‌ ಜನರು ತಟ್ಟೆ, ಲೋಟ ಬಡಿದರು ಏಕೆ?

ಕೊರೊನಾ: 1 ಕೋಟಿ‌ ಜನರು ತಟ್ಟೆ, ಲೋಟ ಬಡಿದರು ಏಕೆ?

Publicstory. in


Tumkuru: ಕೊರೊನಾ ವಿರುದ್ಧ‌‌ ಸೆಣಸಾಡುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿಗೆ ಬೇಧಭಾವ ಇಲ್ಲದೇ ಎಲ್ಲರೂ ಚಪ್ಪಾಳೆ ತಟ್ಟಿದ್ದು ಎಲ್ಲರಿಗೂ ಗೊತ್ತು.

ಈಗ ರಾಜ್ಯದಲ್ಲಿ ಸದ್ದಿಲ್ಲದೇ ತಟ್ಟೆ, ಲೋಟ ಬಡಿಯುವ ಚಳವಳಿ ರಾಜ್ಯದ ಎಲ್ಲ ಕೊಳೆಗೇರಿಗಳಲ್ಲಿ ನಡೆದಿದೆ.

ಕೊರೊನಾ ಪ್ಯಾಕೆಜ್ ನಲ್ಲಿ ರಾಜ್ಯ ಸರ್ಕಾರ ಸ್ಲಂ ಜನರನ್ನು ಕಡೆಗಣಿಸಿರುವುದೇ ಇದಕ್ಕೆ ಕಾರಣ. ಸರ್ಕಾರದ ತಾರತಮ್ಯದ ವಿರುದ್ಧ ಕೆಂಡ ಕಾರುತ್ತಿರುವ ಕೊಳೆಗೇರಿ ಜನರು ರಾಜ್ಯ ಕೊಳೆಗೇರಿ ಹಿತಾ ರಕ್ಷಣಾ ಸಮಿತಿ ನೇತೃತ್ವದ ಲ್ಲಿ ಮಂಗಳವಾರ ತಟ್ಟೆ, ಲೋಟ ಬಡಿಯುವ ಚಳವಳಿಗೆ ಚಾಲನೆ ನೀಡಿದ್ದಾರೆ.

ರಾಜ್ಯದಲ್ಲಿ ಘೋಷಿತ, ಘೋಷಿತವಲ್ಲದ ಕೊಳೆಗೇರಿಗಳಲ್ಲಿ 1 ಕೋಟಿ ಜನರು ವಾಸವಿದ್ದಾರೆ. ರಾಜ್ಯ ಸರ್ಕಾರ ಎಲ್ಲ ಜನರಿಗೂ ಕೋವಿಡ್ ಪರಿಹಾರ ನೀಡಿ, ಕೊಳೆಗೇರಿ ಜನರನ್ನು ಉದಾಸೀನ ಮಾಡಿದೆ ಎಂದು ಸಮಿತಿ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.

ಅಟೊ ಚಾಲಕರು,‌ನೇಕಾರರು, ಕೃಷಿಕರು‌ ಹೀಗೆ ನಾನಾ ರಂಗದ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಪರಿಹಾರ ನೀಡಿದೆ.‌ ನಮಗೂ ಕೂಲಿ ನಷ್ಟ ಪರಿಹಾರ ಭತ್ಯೆಯಾಗಿ 9600 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.

ತುಮಕೂರಿನ ದೇವರಾಜ ಅರಸ್ ಬಡಾವಣೆಯಲ್ಲಿ ತಟ್ಟೆ, ಲೋಟ ಬಡಿಯುವ ಮೂಲಕ ಸ್ಲಂ‌ ನಿವಾಸಿಗಳು ಪ್ರತಿಭಟಿಸಿದರು.

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಎ.ನರಸಿಂಹಮೂರ್ತಿ ಮನವಿ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?