ಭರತ್ ಎಂ.ಎನ್
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನ ಪಾಸಿಟಿವ್ ಹೆಚ್ಚಾಗುತ್ತಿದ್ದು ಇನ್ನೂ ದ್ವಿಶತಕ ದಷ್ಟು ಕೊರೊನ ಪರೀಕ್ಷೆ ವರದಿ ಬರಬೇಕಿದೆ. ಸಾಮಾಜಿಕ ಅಂತರ ,ಮಾಸ್ ಬಳಕೆಯಾಗದಿದ್ದರೆ ಕೊರೊನ ಸ್ಫೋಟ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಜೂನ್ 1 ರವರೆಗೆ ತಾಲ್ಲೂಕಿನಲ್ಲಿ 1096 ಕೊರೊನ ಪರೀಕ್ಷೆ ನಡೆಸಲಾಗಿದ್ದು 835 ಪರೀಕ್ಷೆ ವರದಿ ಪ್ರಕಟವಾಗಿದೆ ಇದರಲ್ಲಿ 30 ರಲ್ಲಿ ಪಾಸಿಟಿವ್ ಬಂದಿದ್ದು ಇನ್ನೂ 261 ವರದಿ ಫಲಿತಾಂಶ ಬರಬೇಕಾಗಿದೆ.
ತಾಲ್ಲೂಕಿಗೆ ನೂರಾರು ಜನ ಬೆಂಗಳೂರು ಸೇರಿದಂತೆ ವಿವಿಧ ಪಟ್ಟಣಗಳಿಂದ ಹಳ್ಳಿಗಳಿಗೆ ಬಂದಿದ್ದು ತಾಲೂಕಿನಲ್ಲಿ ಆತಂಕ ಹೆಚ್ಚಾಗಿದೆ.
ಪಟ್ಟಣದಲ್ಲಿ ನಿರ್ಲಕ್ಷ್ಯ ತೋರಿಸುವುದೇ ಇದಕ್ಕೆ ಕಾರಣವಾಗಿದೆ .
ಇಲ್ಲಿನ ಅಂಗಡಿ ಮುಗ್ಗಟ್ಟು ವ್ಯಾಪಾರ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಮರೆತಂತೆ ಕಾಣುತ್ತಿದೆ .ಪುರಸಭೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ನಾಮಕಾವಸ್ತೆ ಎಂಬಂತೆ ದಂಡ ಹಾಕುತ್ತಿದ್ದು ಯಾವುದೇ ಪ್ರಯೋಜನವಾಗುತ್ತಿಲ್ಲ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ರಸ್ತೆಗಿಳಿದು ಸಾರ್ವಜನಿಕರ ಅರಿವು ಮೂಡಿಸುವ ಜೊತೆಗೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ.