Monday, July 22, 2024
Google search engine
Homeಸಾಹಿತ್ಯ ಸಂವಾದಕವನತಲೆಭುಜವು ಮೇಲಲ್ಲ, ಪಾದ ಪಾವನವಲ್ಲ

ತಲೆಭುಜವು ಮೇಲಲ್ಲ, ಪಾದ ಪಾವನವಲ್ಲ

ಕೆ.ಇ.ಸಿದ್ದಯ್ಯ ಅವರು ಜನಪರ ಪತ್ರಕರ್ತ, ಹೋರಾಟಗಾರ ಹಾಗೂ ಲೇಖಕರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಅವಕಾಶ ಬಳಸಿಕೊಂಡಿದ್ದರೆ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗುತ್ತಿದ್ದರು. ವಸೂಲಿಬಾಜಿಯ ಕೆಲಸ ಬೇಡವೆಂದು ಸುಮ್ಮನಾದವರು.
ತುಮಕೂರಿನ ಪ್ರಜಾಪ್ರಗತಿಯಿಂದ ಪತ್ರಿಕೋದ್ಯಮ ಆರಂಭಿಸಿದ ಅವರು ಈ ಟಿವಿಯಲ್ಲಿ ಹಲವು ವರ್ಷ ಹೈದರಾಬಾದ್, ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದವರು. ಸದ್ಯ, ತುಮಕೂರಿನಲ್ಲಿರುವ ಅವರು ಸಮುದಾಯದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಕವಿದ ಮೋಡದ ಕೆಳಗೆ ನರಳುತಿವೆ ಜೀವ
ಹಗಲಿರುಳು ಹರಿದರೂ ಬೆವರಹೊಳೆ ಭಾರ
ತುಂಬದಿದು ತಂಬೂರಿ ಬರುಡುಯ ಚೀಲ
ಮೀಟುತಿದೆ ಹದವರಿತು ಹೊರಡಿಸುತ ನಾದ.

ಕಡುಕಪ್ಪು ಬಲುಚಂದ ಒಳಗೊಳಗೆ ವಿಷಪೂರ
ಅಲ್ಲಿ ವರ್ಣದ ಕೂಗು, ಇಲ್ಲಿ ಗೋವಿನ ಸೋಗು
ಮಾಯದ ಮಾತೊಳಗೆ ಹೊಳೆಯುತಿವೆ ದೇಶ
ಕುದಿಯುತಿದೆ ಬೇಯುತಿದೆ ತಿನ್ನಲಾಗದ ಅನ್ನ,

ಆಗ ಯಗ್ನದ ಕುಂಡ, ಈಗ ಭಕ್ತಿಯ ಕೆಂಡ
ದಹಿಸುತಿವೆ ಹಸಿದೇಹ ಒಡಲೊಳಗೆ ಕಂದ
ಕಣ್ಣಹೊಳೆ ಹರಿಸಿ ಚೀರಿತಿವೆ ಕರಿ ಇರುವೆ
ರಣಕೇಕೆ ಹಾಕುತಿವೆ ಋಣದ ಹುಳುಗಳ ದಂಡು.

ತಲೆಭುಜವು ಮೇಲಲ್ಲ, ಪಾದ ಪಾವನವಲ್ಲ
ಹಾರವನ ಆಟವಿದು ಕೊನೆ ಮೊದಲೇ ಇಲ್ಲ
ಅರಿಯುತಲಿ ಮರೆಯದಿರುವ ಉರುಹೊಡೆ ಎಲ್ಲ
ಕಲಿಯುತಲಿ ಕತ್ತಲೆಯ ಕೂಪದಿಂ ಹೊರ ಬಾ.

ಸಾಕೇತಪುರವಾಸಿ ದಕ್ಕದದು.ನಿನಗೆ
ಹಿತ್ತಾಳೆ ಕಿವಿಯೂತ ಕೋದಂಡ ಬಲಿತ
ಚೋರರೊಳ ಚೋರನಾಳ್ವಿಕೆಯ ಕಾಲ
ಬೆಳಗು ಕತ್ತಲೆಯತ್ತ ಚಲಿಸುತಿದೆ ‘ಮನು’ಕುಲ

ಬಾ ಬಾರೋ ಬೆಳಕೆ ಕರುಣೆಯ ತಿಳಿಕೊಳವೆ
ಒಳಸುಳಿಯ ಸೂಸಿ ಕೈಹಿಡಿದು ನಡೆಸು
ಬರಿಗಾಲ ನಡಿಗೆಗೆ ಚೈತನ್ಯ ನೀಡು
ಬರಿವೊಡಳ ಬಾಳ್ವೆಯಲಿ ನೆಮ್ಮದಿಯ ತುಂಬು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?