ಚಿಕ್ಕನಾಯಕನಹಳ್ಳಿ: ಪುರಸಭಾ ವ್ಯಾಪ್ತಿಯ ದೇವಾಂಗರ ಬೀದಿ ಸೀಲ್ ಡೌನ್ ಆಗಿದ್ದು ಅಲ್ಲಿನ ಕೊರೋನಾ ಪೀಡಿತ ಪ್ರದೇಶದ ಕುಟುಂಬಗಳಿಗೆ ಆತ್ಮವಿಶ್ವಾಸ ತುಂಬಿ ಅವರಿಗೆ ದಿನನಿತ್ಯದ ವಸ್ತುಗಳಾದ ದಿನಸಿ, ತರಕಾರಿ, ಅಗತ್ಯ ಔಷಧಿಗಳನ್ನು ನೀಡಿ ಧೈರ್ಯ ತುಂಬಲಾಹಿತು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರು, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚೇತನ್ ಗಂಗಾಧರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಲೇಶ್ ರವರು ಮತ್ತು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಮಚಂದ್ರಯ್ಯ ನವರು ಪಾಲ್ಗೊಂಡಿದ್ದರು.