Saturday, July 20, 2024
Google search engine
Homeಸಾಹಿತ್ಯ ಸಂವಾದಅಂತರಾಳನಾಗಸಾಕಿಯ ಮೇಲೆ ತಲ್ಲಣದ ಮಳೆ ಸುರಿದ ದಿನ ಇಂದು.

ನಾಗಸಾಕಿಯ ಮೇಲೆ ತಲ್ಲಣದ ಮಳೆ ಸುರಿದ ದಿನ ಇಂದು.

ಜಿ.ಎನ್.ಮೋಹನ್


ನಾನು ೧೯೮೬ರಲ್ಲಿ ಬರೆದಿದ್ದ ಈ ಪುಟ್ಟ ಬರಹ ಮತ್ತೆ ಕಲಕಿತು.
——

3+1=0

ಎಂದು ಬರೆದರೆ ಬಹುಶಃ ನಿಮಗೆ ಸಿಗುವ ಅಂಕಿ ಕೂಡ ಸೊನ್ನೆಯೇ ಆಗಬಹುದು.

ಆದರೆ ಯುದ್ಧ ದೇಶಗಳಲ್ಲಿ ಅಪಾರ ಸಹಾನುಭೂತಿ ಸಿಗುತ್ತದೆ.

ನಿಮ್ಮ ದೇಶದಲ್ಲಿ ಮೂರಕ್ಕೆ ಒಂದು ಕೂಡಿದರೆ ನಾಲ್ಕಾಗುತ್ತದೆ.

ಆದರೆ ಯುದ್ಧ ದೇಶಗಳಲ್ಲಿ ಹಾಗಲ್ಲ.

ಮೂರಕ್ಕೆ ಒಂದು ಕೂಡಿದರೆ ಸೊನ್ನೆಯಾಗುತ್ತದೆ.

ಗಣಿತ ಜಾಗತಿಕ ಸತ್ಯ. ಯಾವಾಗಲೂ ಸುಳ್ಳು ಹೇಳುವುದಿಲ್ಲ ಎಂದು ಸಾಬೀತಾಗಿರುವಾಗ ನೀವು ಒಂದು ಕ್ಷಣ ಬೆರಗಾಗಬಹುದು.

ಆದರೆ ಇದು ವಿಚಿತ್ರ ಆದರೂ ಸತ್ಯ, ಕ್ರೂರವಾಸ್ತವ.

ತನ್ನ ತಂದೆ, ತಾಯಿ, ತಮ್ಮ ಮೂವರನ್ನೂ ಕೇವಲ ಒಂದು ಯುದ್ಧ ಬಾಂಬಿನಿಂದ ಕಳೆದುಕೊಂಡ ಈ ಏಕಾಂಗಿ ಬಾಲಕ ತಾನೇ ಕಂಡು ಹಿಡಿದ ಹೊಸ ಅಂಕಗಣಿತ ಇದು.

3+1=0

ಹೌದು! ಯುದ್ಧ ಒಮ್ಮೆ ನಿಮ್ಮ ಮನೆ ಬಾಗಿಲಿಗೆ ಬಂದರೆ ಸಾಕು ಅದು ಜಗತ್ತಿನ ಅನೇಕ ಸತ್ಯಗಳನ್ನು ಬದಲು ಮಾಡುತ್ತದೆ.

3+1=0 ಈ 3 ರ ಸ್ಥಾನದಲ್ಲಿ ನೀವು ನೂರು ಇಟ್ಟರೂ ಅಷ್ಟೆ. ಲಕ್ಷ ಇಟ್ಟರೂ ಅಷ್ಟೆ. ಅದರ ಬದಿಗೆ ಒಂದೇ ಒಂದು ಬಾಂಬು ಇಡಿ. ನಿಮ್ಮ ಅಂಕಗಣಿತವೆಲ್ಲಾ ತಲೆಕೆಳಗಾಗುತ್ತದೆ.

ಹಾಗೇ ನಿಮ್ಮ ಜೀವಗಳು ಕೂಡಾ…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?