Saturday, July 20, 2024
Google search engine
Homeಸಾಹಿತ್ಯ ಸಂವಾದಅಂತರಾಳಶಾಸಕ ಸುರೇಶಗೌಡ ಅವರೆಂದರೆ ನನಗ್ಯಾಕಿಷ್ಟ ಗೊತ್ತಾ?

ಶಾಸಕ ಸುರೇಶಗೌಡ ಅವರೆಂದರೆ ನನಗ್ಯಾಕಿಷ್ಟ ಗೊತ್ತಾ?

ರವಿಗೌಡ, ಹಿರಿಯ ವಕೀಲರು



ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಕಂಡ ಬಲು ಅಪರೂಪದ ರೈತ ನಾಯಕ ರೈತರ ಬವಣೆಗಳಿಗೆ ಮಿಡಿಯುವ ಮನಸ್ಸು, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರೈತ ಸಮೂಹದಲ್ಲಿ ಎಂತದ್ದೇ ಅವಘಡಗಳು ನಡೆದರು ತತ್ ಕ್ಷಣದಲ್ಲಿ ನಾನಿದ್ದೇನೆ ಎಂದು ಹೆಗಲು ಕೊಡುವ ನಾಯಕ ಅದು ನಮ್ಮ ಸುರೇಶ್ ಗೌಡರು.

ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ಬಿ ಸುರೇಶ್ ಗೌಡರಿಗೆ ರೈತ ಸಂಕುಲದ ಮೇಲೆ ಅಪಾರ ಮಮತೆ. ರೈತರ ಅಭಿವೃದ್ಧಿಯ ಬಗ್ಗೆ ತಮ್ಮದೇ ಆದ ಚಿಂತನೆಗಳನ್ನು, ಯೋಚನೆಗಳನ್ನು ಹೊಂದಿರುವವರು. ಮಾಜಿ ಪ್ರಧಾನಿ ದೇವೇಗೌಡರಿಗೆ ಇರುವಷ್ಟೇ ರೈತರ ಅಭಿವೃದ್ಧಿ ಬಗ್ಗೆ ತಮ್ಮದೇ ಆದ ನೀಲನಕ್ಷೆ ಹೊಂದಿರುವ ಕರ್ನಾಟಕದ ಮತ್ತೊಬ್ಬ ನಾಯಕ ಎಂದರೆ ಅತಿಶಯೋಕ್ತಿ ಆಗಲಾರದು.

ಇದು ಇಂದು ನಡೆದ ಘಟನೆ. ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಿಡುವಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆನಹಳ್ಳಿ ಗ್ರಾಮದಲ್ಲಿ ಚಿಕ್ಕಣ್ಣರವರ ಪಶುಗಳ ಶೆಡ್ಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹಸು ,ಎಮ್ಮೆ ಕರು ಹಾಗೂ ಮೇಕೆ ಸೇರಿದಂತೆ ಕೃಷಿ ಉಪಯೋಗಿ ಯಂತ್ರೋಪಕರಣಗಳು, ಅಡಿಕೆ, ಕೊಬ್ಬರಿ ಇನ್ನಿತರ ವಸ್ತುಗಳು ಸುಟ್ಟು ಕರಕಲಾದವು. ಈ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಗೌಡರು ಓಡೋಡಿ ಬಂದರು.

ಬೆಂಕಿಯಿಂದ ಆದಂತ ಅವಘಡಕ್ಕೆ ಆ ಒಂದು ರೈತ ಕುಟುಂಬಕ್ಕೆ ಧೈರ್ಯ ತುಂಬಿದರು. ನಿಮ್ಮ ಜೊತೆ ನಾನಿದ್ದೇನೆ ಎಂದು ಹೇಳಿ ವೈಯಕ್ತಿಕವಾಗಿ ಎರಡು ಲಕ್ಷ ಆರ್ಥಿಕ ಸಹಾಯ ಮಾಡಿದರು. ಸರ್ಕಾರದ ಮಟ್ಟದಲ್ಲಿ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದರು.

ಪಶು ಸಂಗೋಪನೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಕ್ತ ನಿರ್ದೇಶನ ನೀಡಿ ಮುಂದೆ ಎಲ್ಲಿಯೂ ಈ ರೀತಿ ಆಗದಂತೆ ಎಚ್ಚರವಹಿಸಲು ಆದೇಶಿಸಿದರು. ಇಂತಹ ಘಟನೆಗಳು ಜರುಗಿದಾಗಲೆಲ್ಲ ಗೌಡರು ಅಂತಹ ರೈತ ಕುಟುಂಬದ ಸಹಾಯಕ್ಕೆ ಸದಾಕಾಲ ಏನೇ ಆದರೂ ನಾನಿರುವೆನೆಂಬ ಭರವಸೆ ಗ್ರಾಮೀಣ ಭಾಗದ ಜನರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. 🙏

ನನಗಿನ್ನು ನೆನಪಿದೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಂತ ಮೊದಲ ದಿನಗಳಲ್ಲಿ ಗೌಡರು ಗ್ರಾಮೀಣ ಭಾಗದಲ್ಲಿ ಯಾವುದೇ ಸಾವು ನೋವುಗಳ ಆದರೂ ವೈಯಕ್ತಿಕವಾಗಿ ತಮ್ಮಿಂದ ಆಗಬಹುದಾದ ಆರ್ಥಿಕ ಸಹಾಯವನ್ನು ಮಾಡುತ್ತಿದ್ದರು, ಗ್ರಾಮೀಣ ಭಾಗದ ಯಾವುದೇ ರೈತ ಕುಟುಂಬದವರು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಿದ್ದರೆ ಆರ್ಥಿಕ ಸಹಾಯದ ಜೊತೆ ಸಂಬಂಧಪಟ್ಟ ಡಾಕ್ಟರ್ ಗಳ ಜೊತೆ ಮಾತನಾಡಿ ನಿಗಾವಹಿಸುತ್ತಿದ್ದರು.

ದನ ಕರುಗಳು ಕುರಿ ಮೇಕೆಗಳು ಅಕಾಲಿಕ ಮರಣ ಹೊಂದಿದಾಗ ಅವುಗಳಿಗೂ ಸಹ ವೈಯಕ್ತಿಕವಾಗಿ ಆರ್ಥಿಕವಾಗಿ ಸಹಾಯ ನೀಡಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂತಹ ಸಮಯದಲ್ಲಿ ಕೆಲವು ಜನಪ್ರತಿನಿಧಿಗಳು ಏನು ಗೊತ್ತಿಲ್ಲದಂತೆ ಮೌನವಾಗಿರುವುದನ್ನು ಕಂಡಿದ್ದೇನೆ.

ರೈತ ಸಮುದಾಯಕ್ಕೆ ತಾನು ಸಾಕಿದ ಪ್ರಾಣಿಗಳನ್ನು ಕಳೆದುಕೊಂಡಾಗ ಆಗುವ ನೋವು ಆರ್ಥಿಕ ನಷ್ಟವನ್ನು ಸ್ವತಹ ರೈತ ಕುಟುಂಬದಿಂದ ಬಂದಿದ್ದಂತ ಗೌಡರು ಮನಗಂಡಿದ್ದರು.

ಗ್ರಾಮೀಣ ಭಾಗದ ರೈತರ ಯಾವುದಾದರೂ ಸರ್ಕಾರ ಮಟ್ಟದಲ್ಲಿ ವಿಧಾನಸೌಧದಲ್ಲಿ ಕೆಲಸ ಆಗಬೇಕಿದ್ದರೆ ಸ್ವತಹ ಅವರುಗಳನ್ನೇ secretriate ಕಾರ್ಯಾಲಯಗಳಿಗೆ ಕರೆದುಕೊಂಡು ಹೋಗಿ ಮಾಡಿಸಿಕೊಡುತ್ತಿದ್ದಿದ್ದು ಜಕ್ಕೂ ಕೂಡ ಅವರ ಅಂತಾಳದ ಧ್ವನಿ ಎಂತಹದು ಎಂದು ಎಂತಹವರು ಸಹ ಅರ್ಥಮಾಡಿಕೊಳ್ಳಬಹುದು 🙏ಗ್ರಾಮೀಣ ಭಾಗದ ರೈತರ ಬದುಕು ಅಸನಾಗಬೇಕೆಂದು ಪ್ರತಿ ಕ್ಷಣವೂ ಮಿಡಿಯುವ ಅವರ ಹೃದಯಂತರಾಳ ಅವರನ್ನು ಅರ್ಥ ಮಾಡಿಕೊಂಡವರಿಗಷ್ಟೇ ಗೊತ್ತು,

ಪ್ರತಿಯೊಬ್ಬ ರೈತನು ಸ್ವಾವಲಂಬೆಯಾಗಿ ಬದುಕಬೇಕೆಂದು ಬಯಸುವ ಗೌಡರು ರೈತರ ಮಕ್ಕಳು ವಿದ್ಯಾವಂತರಾಗಬೇಕೆಂದು ಗ್ರಾಮಾಂತರ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಶಾಲೆಗಳನ್ನು ಮೇಲ್ದರ್ಜೆಗೇರಿಸಿದ್ದು, ತಮ್ಮ ಕ್ಷೇತ್ರದುದ್ದಕ್ಕೂ ಪ್ರತಿಯೊಬ್ಬರಿಗೂ ಅವರ ತೋಟಗಳಿಗೆ ಒಂದು ಟ್ರಾನ್ಸ್ಫಾರ್ಮರ್ನಂತೆ ಪೈಲೆಟ್ ಪ್ರಾಜೆಕ್ಟ್ ನ ತಂದದ್ದು. ಮತ ಕ್ಷೇತ್ರದಲ್ಲಿ ಅತಿ ಮುಖ್ಯವಾಗಿ ಉತ್ತಮ ಗುಣಮಟ್ಟದ ರಸ್ತೆಗಳ ಸಂಪರ್ಕವನ್ನು ಕಲ್ಪಿಸಿದ್ದು. ಸರ್ಕಾರ ರೈತರಿಗಾಗಿ ಮೀಸಲಿಟ್ಟಿರುವ ಪ್ರತಿಯೊಂದು ಕಾರ್ಯಕ್ರಮಗಳನ್ನು ಜಾತಿ ಬೇಧ ಧರ್ಮ ಪಕ್ಷ ಬೇದಗಳನ್ನು ಮರೆತು ಪ್ರತಿಯೊಬ್ಬರಿಗೂ ನ್ಯಾಯವನ್ನು ಒದಗಿಸುವ ಗೌಡರು ಅವರಿಗೆ ಅವರೇ ಸಾಟಿ 🙏. ರಾಜ್ಯಕ್ಕೆ ಮಾದರಿಯಾದ ಇಂಥ ಶಾಸಕರಿಂದಲೇ ರಾಜ್ಯದ ಅಭಿವೃದ್ಧಿ ಭವಿಷ್ಯದ ಬಗ್ಗೆ ಕನಸು ಕಾಣಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?