Saturday, July 27, 2024
Google search engine
Homeತುಮಕೂರು ಲೈವ್"ಪ್ರೆಸ್ ಕ್ಲಬ್ ತುಮಕೂರು" ಗೌರವ ಸದಸ್ಯತ್ವ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

“ಪ್ರೆಸ್ ಕ್ಲಬ್ ತುಮಕೂರು” ಗೌರವ ಸದಸ್ಯತ್ವ ಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

Publicstory


ತುಮಕೂರು: ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗೌರವ ಸದಸ್ಯತ್ವ ಪಡೆಯುವ ಮೂಲಕ ಚಾಲನೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪ್ರೆಸ್ ಕ್ಲಬ್ ತುಮಕೂರು ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಸದಸ್ಯತ್ವ ನೋಂದಣಿ ಅರ್ಜಿಗೆ ಸಹಿ ಮಾಡುವ ಮೂಲಕ ಗೃಹ ಸಚಿವರು ಗೌರವ ಸದಸ್ಯತ್ವ ಪಡೆದರು.

ಸಮಾರಂಭದಲ್ಲಿ ಆರಗ ಜ್ಞಾನೇಂದ್ರ ಮಾತನಾಡಿ,
ಜನತಂತ್ರ ವ್ಯವಸ್ಥೆಯಲ್ಲಿ 4ನೇ ಸ್ತಂಭ ಪತ್ರಿಕಾ ರಂಗ, ಸಾರ್ವಜನಿಕರು ಮತ್ತು ಸರ್ಕಾರದ ವ್ಯವಸ್ಥೆಯ ನಡುವಿನ ಕೊಂಡಿಯಾಗಿ ಹಾಗೂ ಧ್ವನಿ ಇಲ್ಲದವರ ಧ್ವನಿಯಾಗಿ ಸದಾ ಕಾಲ ಮಾಧ್ಯಮ ಕೆಲಸ ಮಾಡುತ್ತಿದೆ ಎಂದರು.

ಭಾರತೀಯ ಮಾಧ್ಯಮ ಅತ್ಯಂತ ಪ್ರಬಲವಾಗಿದೆ. ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವವರು ಸಾಮಾನ್ಯ ಜನರಿಗಿಂತ ಮೇಲ್ಪಟ್ಟದಲ್ಲಿರುತ್ತಾರೆ. ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡುವ, ಸಲಹೆ ನೀಡುವ ಸ್ವಾತಂತ್ರ್ಯವನ್ನು ಪತ್ರಕರ್ತರು ಹೊಂದಿದ್ದಾರೆ ಎಂದು ಅವರು ಹೇಳಿದರು.
ಮೊದಲು ಸುದ್ದಿ ಕೊಡುವ ಹಪಹಪಿ ಸದ್ಯದ ಸ್ಪರ್ಧೆಯಾಗಿದೆ. ಸದಾ ಆರೋಗ್ಯಕರ ಸ್ಪರ್ಧೆ ಇರಲಿ. ವಾಸ್ತವತೆಯ ಸುದ್ದಿಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರ ಮನರಂಜನೆ, ಹಿತ ಕಾಯುವ ಸದುದ್ದೇಶದಿಂದ ಆರಂಭವಾಗಿರುವ ಪ್ರೆಸ್ ಕ್ಲಬ್ ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆಯಲಿ, ಮಾದರಿ ಪ್ರೆಸ್ ಕ್ಲಬ್ ಆಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ *ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರದೀಪಕುಮಾರ್ ಅವರಿಗೂ ಕೂಡ ಪ್ರೆಸ್‌ಕ್ಲಬ್‌ನ ಗೌರವ ಸದಸ್ಯತ್ವ ಪಡೆದು*, ಪ್ರೆಸ್ ಕ್ಲಬ್ ತುಮಕೂರು ಉತ್ತಮವಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು (ವಿಜಯಕರ್ನಾಟಕ), ಉಪಾಧ್ಯಕ್ಷರಾದ ಕರುಣಾಕರ್( ಸತ್ಯದರ್ಶಿನಿ), ಮಾರುತಿ ಗಂಗಹನುಮಯ್ಯ( ಅಮೃತವಾಣಿ), ಶ್ರೀನಿವಾಸ ರೆಡ್ಡಿ ( ಅಮೋಘ ವಾಹಿನಿ), ಪ್ರಧಾನ ಕಾರ್ಯದರ್ಶಿ ಯೋಗೇಶ್. ಎಲ್(ಸುವರ್ಣ ನ್ಯೂಸ್), ಸಹ ಕಾರ್ಯದರ್ಶಿ ಸತೀಶ್ (ಸಂಯುಕ್ತ ಕರ್ನಾಟಕ), ಸಂಘಟನಾ ಕಾರ್ಯದರ್ಶಿ ರಂಗನಾಥ ಕೆ ಮರಡಿ (ವಿಶ್ವವಾಣಿ) ಖಜಾಂಚಿ ಸಂಗಮೇಶ್ (ಪ್ರಜಾವಾಣಿ) ಹಾಗೂ ನಿರ್ದೇಶಕರುಗಳು, ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?