Saturday, July 27, 2024
Google search engine

ಬಂದ ವಸಂತ

ಡಾ. ರಜನಿ


ಚಳಿ ಅಳಿದು
ರಣ ಬಿಸಿಲು

ಹುಲ್ಲು ಚಿಗುರಿ
ಹಸಿರು ಹರಡಿ

ಕೂಗಿ ಕೋಗಿಲೆ
ಮರ ಮರದಲಿ ದುಂಬಿ,ಜೇನು

ಉದುರಿ ಹೂವು ..
ಹಾದಿಯೆಲ್ಲಾ….
ನವಿರು ಮೆತ್ತೆ

ಅನೂಹ್ಯ ಬಣ್ಣಗಳ
ಭೂರಮೆಯ ಚಿತ್ರ ಪಟ

ಯಾವಾವುದೋ ಪುಷ್ಪಗಳ
ಸುವಾಸನೆ
ಅಡರಿ ನಾಸಿಕಕ್ಕೆ

ಹೃದಯದಲಿ ನೆನಪುಗಳ
ಲಗ್ಗೆ…

ನೀ ಅರಳೀ
ನಾ ಮುದುಡಿ….
ಕಾಮನ ಸುಡಲೀ ಹೇಗೆ?

ಹೂಮರಗಳ ಅಡಿಯಲೀ
ಕೈ ಕೈ ಜೋಡಿಸಿ

ಸಂಜೆಗೆಂಪಲೀ
ಹೂಚಾಮರದಡಿಯಲೀ

ಕಲ್ಲು ಬೆಂಚ ಮೇಲೆ
ಕಣ್ಣು ಮುಚ್ಚಿ
ಕದ್ದು ತುಟಿ ಕೆಂಪು ….

ಮತ್ತೆ ನಡೆದು…
ಹಿಡಿದು ನಡು

ನೋಡುವವರಿಲ್ಲ ನಮ್ಮನು..
ವಸಂತನ ಮತ್ತು..

ಭೂರಮೆಯೇ
ತೆಗೆದುಕೊ

ಕಾಮನಬ್ಬಕ್ಕೆ
ಬೇರೇಯದೇ

ಮಾಸ


ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ರಜನಿ ಅವರ ಕವನ ಪರಿಸರದ ನೇಯ್ಗೆಯಾಗಿದೆ. ಅವರದು ಗಾಢ, ನಿಗೂಢಗಳನ್ನು ಒಳಗೊಳ್ಳುವ. ಎರಡು ವಿಭಿನ್ನ ನೆಲೆಗಳನ್ನು, ನೋವು,‌ನಲಿವುಗಳನ್ನು ತುಲನಾತ್ಮಕವಾಗಿ ಒರೆಗೆ ಹಚ್ಚುವ ಅವರ ಕವನಗಳ ಸಶಕ್ತತೆಯಿಂದ ಕೂಡಿರುತ್ತವೆ.


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?