Publicstory
ತುರುವೇಕೆರೆ: ತಾಲ್ಲೂಕಿನ ಗುಡ್ಡೇನಹಳ್ಳಿ ಸಾಗುವಳಿ ಭೂಮಿಗೆ ಸಂಬಂಧಿಸಿದ ಸಣ್ಣ ಸಮಸ್ಯೆಯನ್ನು ಇಂಡಿಯಾ ಪಾಕಿಸ್ತಾನ, ಅಥವಾ ಇಂಡಿಯಾ-ಚೈನಾದ ಗಡಿ ಯುದ್ದ ತರಹ ಬಿಂಬಿಸಿ ತುರುವೇಕೆರೆ ತಾಲ್ಲೂಕಿನಲ್ಲಿ 144 ಸೆಕ್ಷನ್ ನಿಷೇದಾಜ್ಞೆ ಹೇರಿ ಜನರು, ರೈತರಲ್ಲಿ ಆಂತಕ ಸೃಷ್ಟಿಸಿದ್ದೀರಿ ಹೀಗೆ ನಡೆಸಲು ಯಾರು ನಿಮಗೆ ನಿರ್ದೇಶನ ನೀಡಿದವರೆಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಜೆಡಿಎಸ್ ಮುಖಂಡ ಎಂ.ಟಿ.ಕೃಷ್ಣಪ್ಪ ಹಮ್ಮಿಕೊಂಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಾತನಾಡಿದರು.
ಗುಡ್ಡೇನಹಳ್ಳಿ ರೈತರ ತೆಂಗಿನ ಸಸಿಗಳನ್ನು ಅಧಿಕಾರಿಗಳು ಕಿತ್ತಾಗ ರೈತರ ಸಮಸ್ಯೆಯನ್ನು ತಾಳ್ಮೆಯಿಂದ ಹಾಲಿ ಶಾಸಕರು ಕೇಳಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಫ್ಲೆಕ್ಸ್ ಹರಿದ ವಿಚಾರವಾಗಿ ಜೆಡಿಎಸ್,ಬಿಜೆಪಿ ಪಕ್ಷಗಳ ನಡುವೆ ಘರ್ಷಣೆಯ ವೇಳೆ ಎರಡೂ ಗುಂಪುಗಳ ನಡುವೆ ಆರೋಗ್ಯಕರ ಚರ್ಚೆ ನಡೆಸಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ಎಂದರು.
ಅಧಿಕಾರಿಗಳು ಯಾವುದೋ ಪಕ್ಷದ ಮುಖಂಡ ಅಣತಿಯಂತೆ ನಡೆಯದೆ ಕಾನೂನಿ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ತಾಲ್ಲೂಕಿನಲ್ಲಿ ವಿನಾಕಾರಣ 144 ಸೆಕ್ಷನ್ ಕಾಯಿದೆ ಜಾರಿಗೆ ತರಲು ಕಾರಣಕರ್ತರಾದ ಅಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸಲು ಗೃಹ ಸಚಿವರು ಮತ್ತು ಸಿಎಂ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನ ಡಿ.ಜೆಹಳ್ಳಯಲ್ಲಿ ನಡೆದ ಗಲಬೆಯ ತರಹ ಬೆಂಕಿ ಹಚ್ಚಲು ಪೆಟ್ರೋಲ್ ಬಾಂಬ್ ತಂದಿಟ್ಟುಕೊಂಡಿಲ್ಲ ತುರುವೇಕೆರೆ ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೆಂದು ಅಸಮಧಾನ ವ್ಯಕ್ತಪಡಿಸಿದರು.
ಮೈತ್ರಿ ಸರ್ಕಾರದಲ್ಲಿ ನಾನು 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ ಹಣವನ್ನು ಅಧಿಕಾರಕ್ಕೆ ಬಂದು ಬಿಜೆಪಿ ಸಕರ್ಾರ ಬೇರೆ ಬೇರೆ ಕಾಣರಗಳಿಗೆ ಬಳಿಸಿಕೊಂಡು ಅರ್ಹ ರೈತರಿಗೆ ಅದರ ಲಾಭ ಸಿಗದಂತೆ ಮಾಡಿದರು.
ಬಿಜೆಪಿ ಪಕ್ಷ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ವ್ಯಕ್ತಿಗಳಿಂದ ಪಡೆದ ಹಣದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ನನ್ನ ಸಕರ್ಾರ ಬೀಳಿಸಲು ಹುನ್ನಾರ ನಡೆಸಿತು ಎಂದು ಡ್ರಗ್ಮಾಫಿಯಾ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿ.ಎಂ. ಬಿ.ಎಸ್.ವೈ ಯಡಿಯೂರಪ್ಪವರ ಮಗ ವಿಜಯೇಂದ್ರ ಅವರ ಮೇಲೆ 500 ಕೋಟಿ ಹಗರಣವಿದೆಂಬ ಮಾತಿಗೆ ಉತ್ತರಿಸುತ್ತಾ ಬಿಜೆಪಿ ಸಕರ್ಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಅದರ ಬಗ್ಗೆ ಚಚರ್ೆ ಮಾಡುವುದೇ ನಿರರ್ಥಕವೆಂದು ಬೇಸರ ವ್ಯಕ್ತಪಡಿಸದರು. ಹಾಗು ಈಚೆಗೆ ನಡೆದ ಅತೀವೃಷ್ಟಿ ಪರಿಹಾರವನ್ನು ನಿರ್ವಹಿಸುವಲ್ಲಿ ಈ ಸರ್ಕಾರಕ್ಕೆ ಬದ್ಧತೆಯಿಲ್ಲವಾಗಿದೆ ಎಂದರು.
ಲಾಭದಲ್ಲಿ ನಡೆಯುತ್ತಿದ್ದ ದೇಶದ 6 ವಿಮಾನ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಅದಾನಿಗೆ ಕೊಟ್ಟಿದೆ ಅವರು 16 ಸಾವಿರ ಕೋಟಿಗೆ ವಿದೇಶ ಕಂಪನಿಗಳಿಗೆ ಮಾರಿಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯ ಎಚ್ಎಎಲ್ ಸಂಸ್ಥೆಯನ್ನು ಖಾಸಗಿಯವರಿಗೆ 15 ಪರಿಸೆಂಟ್ ಷೇರಿಗೆ ಮಾರಿದೆ ಇದು ದೇಶದ ಸ್ಥಿತಿಯಾಗಿದೆ ಎಂದು ಅಸಮಾಧಾನ ಸೂಚಿಸಿದರು.
‘ತಾಲ್ಲೂಕಿನ ರೈತರ, ಜನಪರ ಹೋರಾಟಗಳಿಗೆ ಹಾಗು ಕಾರ್ಯಕರ್ತರುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮತ್ತೆ ಯಾರನ್ನೂ ನಿಲ್ಲಿಸುವುದಿಲ್ಲವೆಂದು ಹೇಳುವ ಮೂಲಕ ತಾಲ್ಲೂಕಿನ ಟಿಕೀಟಿನ ಗೊಂದಲಕ್ಕೆ ತೆರೆ ಎಳೆದರು’.