Sunday, July 21, 2024
Google search engine
Homeತುಮಕೂರು ಲೈವ್ರೋಗಿ ಕಡೆಯವರೇ ಪೊರಕೆ‌ ಹಿಡಿದು ಸ್ವಚ್ಛ ಮಾಡಿದರು...!

ರೋಗಿ ಕಡೆಯವರೇ ಪೊರಕೆ‌ ಹಿಡಿದು ಸ್ವಚ್ಛ ಮಾಡಿದರು…!

ಚಿಕ್ಕನಾಯಕನಹಳ್ಳಿ: ರೋಗಿಯನ್ನು ಕರೆದೊಯ್ಯಲು ಬಂದಿದ್ದ 108 ತೀರಾ ಧೂಳಿನಿಂದ ಕೂಡಿದ್ದು ಅನಿವಾರ್ಯವಾಗಿ ಕುಟುಂಬದವರೇ ಸ್ವಚ್ಛಮಾಡಿ ರೋಗಿಯನ್ನು ಕರೆದೊಯ್ದ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ಶಿಡ್ಲಕಟ್ಟೆ ಗ್ರಾಮದಲ್ಲಿ ಜರುಗಿದೆ.

ತುರ್ತು ಅಗತ್ಯದ ಮೇರೆಗೆ ಆಂಬುಲೆನ್ಸ್ 12 ಗಂಟೆಗೆ ಆಗಮಿಸಿದ್ದು ಆಂಬುಲೆನ್ಸ್ ಸ್ಥಿತಿ ನೋಡಿದರೆ ಅದರಲ್ಲಿ ಹತ್ತಿ ಕುಳಿತುಕೊಳ್ಳುವುದೇ ರೋಗಕ್ಕೆ ಆಹ್ವಾನ ನೀಡಿದಂತೆ ಎನ್ನುವ ಸ್ಥಿತಿಯಲ್ಲಿತ್ತು ಎನ್ನಲಾಗಿದ್ದು ಸ್ವಚ್ಛತೆ ಇಲ್ಲದ ಅಂಬುಲೆನ್ಸ್ ನೋಡಿ ಆರೋಗ್ಯ ಇಲಾಖೆಯ ಬೇಜವಾಬ್ದಾರಿತನಕ್ಕೆ ಹಿಡಿಶಾಪ ಹಾಕಿದ ಕುಟುಂಬದವರು ತಾವೇ ಮುಂದೆ ನಿಂತು ಹಿಡಿದು ಸ್ವಚ್ಛ ಮಾಡಿ ನಂತರ ರೋಗಿಯನ್ನು ಕರೆದೊಯ್ದರು.

ಕರೊನಾ ವೈರಾಣು ಹರಡದಂತೆ ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವ ಸಮಯದಲ್ಲಿ ರೋಗಿಯನ್ನು ಕರೆದೊಯ್ಯುವ ಆಂಬುಲೆನ್ಸ್ ನಲ್ಲಿ ಕನಿಷ್ಠ ಸ್ವಚ್ಛವಾಗಿಡಲು ನಿಗಾವಹಿಸದೆ ಬೇಜವಾಬ್ದಾರಿತನ ಪ್ರದರ್ಶಿಸಿರುವ ಅಂಬುಲೆನ್ಸ್ ವಾಹನದವರ ಬಗ್ಗೆ ಅಲ್ಲಿನ ಗ್ರಾಮಸ್ಥರು ಹಿಡಿಶಾಪ ಹಾಕಿದ್ದು ಇದೇನು ಜನಗಳನ್ನು ಕರೆದೊಯ್ಯುವ ವಾಹನವೋ ಅಥವಾ ದನಗಳನ್ನು ಕರೆದೊಯ್ಯುವ ವಾಹನವೋ ಎಂದು ಪ್ರತಿಕ್ರಿಯಿಸಿದ್ದು ಈ ಬಗ್ಗೆ ಸಂಬಂಧಪಟ್ಟವರು ತುರ್ತಾಗಿ ಗಮನ ಹರಿಸುವಂತೆ ಅಲ್ಲಿನ ಗ್ರಾಮಸ್ಥ ಕುಮಾರ್ ಮನವಿ ಮಾಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?