Tuesday, July 23, 2024
Google search engine
Homeತುಮಕೂರು ಲೈವ್ಸಾವಿನ ಅನುಭವಕ್ಕಾಗಿ ವಿಷ ಸೇವಿಸಿದ ಯುವಕ

ಸಾವಿನ ಅನುಭವಕ್ಕಾಗಿ ವಿಷ ಸೇವಿಸಿದ ಯುವಕ

ತುಮಕೂರು

ಯುವಕನೊಬ್ಬ ತನ್ನ ಸಾವಿನ ಬಗ್ಗೆ ಅನುಭವ ಪಡೆಯಬೇಕು ಅದು ಹೇಗಿರತ್ತೆ ಎಂಬ ಹುಚ್ಚು ಹಂಬಲದಿಂದ ಟಿಕ್ ಟ್ಯಾಕ್ ವಿಡಿಯೋ ಮಾಡಿ ಆನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿ ಗ್ರಾಮದ ನಾಗರಾಜಪ್ಪ ಎಂಬುವರ ಮಗ ಧನಂಜಯ್(26) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.

ಸಾವಿಗೂ ಮುನ್ನ ಯುವಕ ತೆಗೆದಿರುವ ಟಿಕ್ ಟ್ಯಾಕ್ ವಿಡಿಯೋ

ಸಾವಿಗೂ ಮುನ್ನ ಧನಂಜಯ್ ಜೀವನದಲ್ಲಿ ಒಂದು ಸಲ ಸಾಯಬೇಕು. ಅದು ಹೇಗಿರುತ್ತದೆ ಅನ್ನೋದ್ನ ಅನುಭವ ಪಡಿಬೇಕು. ನಾನು ಸಾಯುತ್ತಿದ್ದೇನೆ. ಅದನ್ನು ನೀವೆಲ್ಲ ನೋಡಬೇಕು ಎಂದು ಟಿಕ್ ಟ್ಯಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಟ್ಟಿದ್ದಾನೆ.

ಆನಂತರ ಆತ್ಮಹತ್ಯೆ ಮಾಡಿಕೊಳ್ಳಲು ಕ್ರಿಮಿನಾಶಕ ಸೇವಿಸಿದ್ದಾನೆ. ಅಸ್ವಸ್ತಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟಿದ್ದಾನೆ.

ಧನಂಜಯ್ ಗೆ 4 ತಿಂಗಳ ಹಿಂದಷ್ಟೆ ಮದುವೆಯಾಗಿತ್ತು.

ಸ್ಥಳಕ್ಕೆ ಕೊರಟಗೆರೆ ಸಿಪಿಐ ಎಫ್.ಕೆ. ನಧಾಪ್, ಪಿಎಸ್ಐ ಎಚ್.ಮುತ್ತುರಾಜು ಭೇಟಿ ನೀಡಿದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?