Tuesday, April 16, 2024
Google search engine
Homeಸಾಹಿತ್ಯ ಸಂವಾದಚಿಟ್ಟೆ ಮತ್ತು ಜೇನು

ಚಿಟ್ಟೆ ಮತ್ತು ಜೇನು

ದೇವರಹೊಸಹಳ್ಳಿ ಧನಂಜಯ


ಬಣ್ಣದ ಚಿಟ್ಟೆ
ಕೋಟಿ ಹೂ ಮುಟ್ಟಿದರು
ಜೇನ್ ಆಗಲಿಲ್ಲ

ದುಂಬಿಯ ಶ್ರಮ
ಜೇನು ಹುಟ್ಟಿ ಸೇರಿತು
ಸದ್ದು ಮಾಡದೆ

ಭ್ರಮೆ ಬಿತ್ತಿದ
ಪಾತರಗಿತ್ತಿ ಪಾತ್ರೆ
ತುಂಬಲೇ ಇಲ್ಲ


ನಿಮ್ಮೂರಿನ ಸುದ್ದಿ, ಲೇಖನ, ನಿಮ್ಮ ಬರಹಗಳನ್ನು ವಾಟ್ಸಾಪ್ ಮಾಡಿ: 9844817737


ಹಿತ್ಲವ್ರೆ ಹೂವು
ದುಂಬಿ ವರಿಸಿ ಜೇನು
ಕತ್ತಲೆ ನಿಧಿ

ಲೋಕದ ತುಂಬಾ
ಸಂಚಾರಿ ಚಿಟ್ಟೆ, ಮಟ್ಟೆ
ಮಣ್ಣು ಸೇರಿತ್ತು

ಜೇನ ಕೊಳ್ಳೆಯು
ಜೀವ ಪಲ್ಲವಯಾನ
ಪರಾಗ ರಾಗ

ತನ್ನ ಶ್ರಮವ
ತಾನೆ ಉಣ್ಣದ ಜೇನು
ಜಗದ ಗುರು.


ಈ ಕವಿತೆಯ ಪ್ರತೀ ಪ್ಯಾರವೂ ಒಂದೊಂದು ಹಾಯ್ಕುಗಳಾಗಿವೆ.
ಒಟ್ಟಾಗಿ ನೋಡಿದಾಗ ಸಮಗ್ರ ಕವಿತೆಯೂ ಆಗಿದೆ.
ಹಾಯ್ಕು ಎಂಬುದು ಜಪಾನಿನ ವಿಶಿಷ್ಟ ಕವಿತೆ ಕಟ್ಟುವ ಕ್ರಮ.
3 ಸಾಲುಗಳುಳ್ಳ 17 ಅಕ್ಷರದ ಕವಿತೆಗಳು ಮೊದಲ ಸಾಲಿನಲ್ಲಿ 5 ಎರಡನೇ ಸಾಲಿನಲ್ಲಿ 7 ಹಾಗೂ ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರುತ್ತವೆ ಒತ್ತಕ್ಷರಗಳು ಮತ್ತು ಅರ್ಕಾವತ್ತು ಗಳನ್ನು ಒಂದೇ ಅಕ್ಷರ ಎಂದು ಪರಿಗಣಿಸಲಾಗುತ್ತದೆ ಅರ್ಧ ಅಕ್ಷರಗಳನ್ನು ಪರಿಗಣಿಸಲಾಗುವುದಿಲ್ಲ-ಕವಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?