Thursday, July 25, 2024
Google search engine

ನಿಮ್ಮ ಮಗು

ಮಕ್ಕಳ ಮೇಲೆ ತಮ್ಮ ಆಸೆ ಆಕಾಂಕ್ಷೆ ಗಳನ್ನು
ಹೇರುತ್ತಾ ಒತ್ತಡಕ್ಕೆ ತಳ್ಳುವ ಹೆತ್ತವರಿಗೆ

ಖಲೀಲ್ ಗಿಬ್ರಾನ್ ಅವರ “ಮಕ್ಕಳು”
ಕವನದ ಅನುವಾದ ಮಾಡಿರುವ ಡಾII ರಜನಿ
ಕವಿಯ ಆಶಯವನ್ನು ಸಮರ್ಪಕವಾಗಿ
ವ್ಯಕ್ತಪಡಿಸಿದ್ದಾರೆ. ಮಕ್ಕಳ ಡಾಕ್ಟರ್ ಆದ ಅವರು
ಮಕ್ಕಳ ದಿನಾಚರಣೆಗೆ ಈ ಕವನ ಅನುವಾದಿಸಿದ್ದಾರೆ


ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ…

ಅವು ಈ ಜೀವ ಜೀವದ ಸೆಲೆಯ ಕಾಯುವಿಕೆಯ
ಮಗ ,ಮಗಳು …..
ಅವು ನಿಮ್ಮ ಮೂಲಕ ಬಂದಿವೆ
ನೀವು ಅವರನ್ನು ತಂದಿಲ್ಲ …..

ನೀವು ಅವರಿಗೆ ಪ್ರೀತಿ ಕೊಡಬಲ್ಲಿರಿ ಆದರೆ
ನಿಮ್ಮ ಆಲೋಚನೆಗಳನ್ನಲ್ಲ….
ಏಕೆಂದರೆ ಅವರಿಗೆ ತಮ್ಮದೇ ಆಲೋಚನೆಗಳಿವೆ.

ಅವರು ನಿಮ್ಮ ಮನೆಯಲ್ಲಿರಬಹುದು …
ಆದರೆ ನೀವು ಅವರ ಆತ್ಮಗಳನ್ನು ಸಾಕಲಾರಿರಿ
ಏಕೆಂದರೆ ಅವರ ಆತ್ಮಗಳು ನಾಳೆಯ
ಹುಡುಕಾಟದಲ್ಲಿವೆ.

ಆ ನಾಳೆಗಳನ್ನು ನೀವು ಕನಸಿನಲ್ಲೂ ಕಾಣಲಾರಿರಿ.

ನೀವು ಅವರಂತೆ ಆಗಲು ಇಚ್ಛಿಸಬಹುದು
ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸಬೇಡಿ…
ಏಕೆಂದರೆ ಜೀವನವು ಹಿಂದಕ್ಕೆ ಚಲಿಸುವುದಿಲ್ಲ…
ಮತ್ತು ನಿನ್ನೆಯಲ್ಲಿ ಇರಲಾಗುವುದಿಲ್ಲ.

ನೀವು ಜೀವಂತ ಬಾಣಗಳನ್ನು
ಚಿಮ್ಮಿಸಿರುವ ಬಿಲ್ಲುಗಳು.
ಬಿಲ್ಲುಗಾರ ಅನಂತ ಪಥದ ಗುರಿ ಇಟ್ಟು
ಅಮಿತ ಶಕ್ತಿಯಲಿ ಬಾಗಿಸಬೇಕು ಬಿಲ್ಲನ್ನು…

ಹೇಗೆಂದರೆ …ಬಾಣಗಳು ವೇಗವಾಗಿ ದೂರ
ಹಾರುವಂತೆ.
ಬಾಗಿದುದಕ್ಕೆ ಸಂತಸಪಡುವಂತೆ…

ಚಿಮ್ಮಿದ ಬಾಣವನ್ನು ಪ್ರೀತಿಸಿದಂತೆ
ಬಾಗಿ ನಿಂತ ಬಿಲ್ಲನ್ನೂ ಪ್ರೀತಿಸಿ.

ಡಾII ರಜನಿ

ಕಲೀಲ್ ಗಿಬ್ರಾನ್ ಅವರ”ಮಕ್ಕಳು”
ಕವನ ಅನುವಾದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?