Saturday, July 27, 2024
Google search engine
Homeಜಸ್ಟ್ ನ್ಯೂಸ್ವಿದೇಶಿಯರನ್ನು ಕಂಡು ಕಂಗಾಲಾದ ಜನತೆ

ವಿದೇಶಿಯರನ್ನು ಕಂಡು ಕಂಗಾಲಾದ ಜನತೆ

ವಿದೇಶಿಯರನ್ನು ಕಂಡರೆ ಸಾಕು ಸೆಲ್ಫೀ ತೆಗೆದುಕೊಂಡು ಅವರಿಂದ ವಸ್ತುಗಳನ್ನು ಖರೀದಿಸುವಂತೆ ಹಿಂದೆ ಬೀಳುತ್ತಿದ್ದವರು ಶನಿವಾರ ದೂರ ಓಡಿದರು.

ತುಮಕೂರು ಜಿಲ್ಲೆ ಪಾವಗಡದ ಶನೈಶ್ಚರ ದೇಗುಲಕ್ಕೆ 4 ಮಂದಿ ವಿದೇಶಿಯರು ಆಗಮಿಸಿದ್ದನ್ನು ಕಂಡು ಪಟ್ಟಣದ ಜನತೆ ಆತಂಕದಿಂದ   ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು.

ವಿದೇಶಿಯರು ದೇಗುಲಕ್ಕೆ ಬಂದಿರುವ ವಿಚಾರ ತಿಳಿದ ಕೂಡಲೆ ವಿವಿಧ ಇಲಾಖೆಗಳ ಸಿಬ್ಬಂದಿ ಶ ನೈಶ್ಚರ ದೇಗುಲದ ಬಳಿ ದೌಡಾಯಿಸಿದರು. ಆಂಧ್ರದ ಪುಟ್ಟಪರ್ತಿಗೆ ಕೆಲ ತಿಂಗಳ ಹಿಂದೆ  ಬಂದಿದ್ದು, ಶನಿವಾರವಾದ್ದರಿಂದ ದೇಗುಲಕ್ಕೆ ಆಗಮಿಸಿರುವುದಾಗಿ ಅಧಿಕಾರಿಗಳಿಗೆ ವಿದೇಶಿಯರು ಮಾಹಿತಿ ನೀಡಿದರು.

4 ಮಂದಿಯ ಆರೋಗ್ಯ ತಪಾಸಣೆ ನಡೆಸಿ ಕೂಡಲೇ ತಮ್ಮ ಸ್ಥಳಗಳಿಗೆ ಹಿಂದಿರುಗುವಂತೆ ವೈದ್ಯರು ಸೂಚಿಸಿದರು.  ಶನೈಶ್ಚರ ದೇಗುಲ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ದೇಗುಲದ ಬಾಗಿಲನ್ನು ಮುಚ್ಚಿಸಲಾಯಿತು.

ಕೆಲವರು   ಅವರ ಸಮೀಪ ಹೋಗದೆ ದೂರದಿಂದಲೇ ಮಾಹಿತಿ ಪಡೆದರು. ದೂರದಿಂದಲೇ ಫೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?