Saturday, July 27, 2024
Google search engine
Homeತುಮಕೂರು ಲೈವ್ಮರಕಡಿದು ಸರ್ಕಾರಿ ಭೂಮಿ ಒತ್ತುವರಿಯ ಹುನ್ನಾರ

ಮರಕಡಿದು ಸರ್ಕಾರಿ ಭೂಮಿ ಒತ್ತುವರಿಯ ಹುನ್ನಾರ

ಪಬ್ಲಿಕ್ ಸ್ಟೋರಿ:

ಮಧುಗರಿ:  ತಾಲ್ಲೂಕಿನ ಕಸಬಾ ಹೋಬಳಿ ಗಂಜಲ ಕುಂಟೆ ಗ್ರಾಮದ ಸರ್ಕಾರಿ ಸ್ಥಳದಲ್ಲಿರುವ ಸರ್ವೆ ನಂ 53 ರಲ್ಲಿರುವ ಮರಗಳನ್ನು ಕ್ರಮವಾಗಿ ಕಡಿಯುವವರನ್ನು ಗ್ರಾಮಸ್ಥರು ಹಾಗೂ ಕಂದಾಯ ಿಲಾಖೆ ಸಿಬ್ಬಂದಿ ತಡೆದಿದ್ದಾರೆ.

ಈ ಪ್ರದೇಶದಲ್ಲಿ ನೆರಳು, ಉತ್ತಮ ಪರಿಸರಕ್ಕಾಗಿ ನಿವೃತ್ತ ಮುಖ್ಯ ಶಿಕ್ಷಕ ಚಿಕ್ಕವೀರಪ್ಪ ಸುಮಾರು 50 ನೇರಳೆ, ಸಿಲ್ವರ್ ಇತ್ಯಾದಿ ಮರಗಳನ್ನು  ಬೆಳೆಸಿದ್ದರು. ಇವುಗಳಲ್ಲಿ ಕೇವಲ 5 ಮರಗಳು ಮಾತ್ರ ಇವೆ.

ಕೆಲ ಕಿಡಿಗೇಡಿಗಳು ಈ ಸರ್ಕಾರಿ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳುವ ಸಲುವಾಗಿ ಇಲ್ಲಿರುವ ಮರಗಳ ಬುಡಕ್ಕೆ ಬೆಂಕಿ ಇಟ್ಟು ನಂತರ ಒಣಗಿದ ಮರಗಳನ್ನು ಕ್ರಮೇಣ ಕಡಿಯುತ್ತಿದ್ದಾರೆ. ಈಗಾಗಲೆ ಸಾಕಷ್ಟು ಮರಗಳನ್ನು ಕಡಿದು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ಬಗ್ಗೆ  ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ೀ ಪ್ರದೇಶವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅರ್ಜಿ ನೀಡಲಾಗಿದೆ. ಸ್ಮಶಾನಕ್ಕೆ ಮೀಸಲಿರುಸುವಂತೆಯೂ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗ್ರಾಮದ ಮುಖಂಡರು ದೂರಿದರು.

ಮರ ಕಡಿಯುವ ಬಗ್ಗೆ ಗ್ರಾಮಸ್ಥರು ಈಗಾಗಲೆ ಕಂದಾಯ, ಅರಣ್ಯ ಇಲಾಖೆಯವರಿಗೆ ದೂರು ನಿಡಿದ್ದಾರೆ. ಶೀಘ್ರ ಸರ್ಕಾರಿ ಪ್ರದೇಶ ಒತ್ತುವರಿ ತೆರವುಗೊಳಿಸಿ ಈ ಪ್ರದೇಶ ಸಂರಕ್ಷಿಸದಿದ್ದಲ್ಲಿ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?