Friday, July 26, 2024
Google search engine
Homeತುಮಕೂರ್ ಲೈವ್ಮನೆ ಮಾರದ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗಂಡ

ಮನೆ ಮಾರದ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗಂಡ

ಗುಬ್ಬಿ: ಮನೆ ಮತ್ತು ಆಸ್ತಿ ಯನ್ನು ಕಬಳಿಸುವ ಹುನ್ನಾರದಿಂದ ಗಂಡನೇ ತನ್ನ ಹೆಂಡತಿ ಮತ್ತು ಅತ್ತೆಯನ್ನು ಹತ್ಯೆ ಮಾಡಲು ಮುಂದಾದ ಘಟನೆ ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಕಡಬ ಹೋಬಳಿ ಜನ್ನೇನಹಳ್ಳಿ ಗ್ರಾಮದ ಮಮತಾ ಪತಿ ಯಿಂದ ದೈಹಿಕ ಹಲ್ಲೆ ಗೆ ಒಳಗಾಗಿ ಅಪಾಯದಿಂದ ಪಾರಾದ ಮಹಿಳೆ ಎಂದು ತಿಳಿದುಬಂದಿದೆ.

ಮೂಲತಃ ಕೆ.ಕಲ್ಲಹಳ್ಳಿ ಗ್ರಾಮದ ವಾಸಿಯಾಗಿದ್ದ ಮಮತಾ ಎಂಬುವ ಮಹಿಳೆ ಯನ್ನು ಸ್ಥಳೀಯ ಜನ್ನೇನಹಳ್ಳಿ ಗ್ರಾಮದ ವೈರಮುಡಿ ಎಂಬುವ ನೊಂದಿಗೆ 15 ವರ್ಷಗಳ ಹಿಂದೆ ವಿವಾಹ ಮಾಡಿಕೊಟ್ಟಿದ್ದರು. ಇವರ ಕುಟುಂಬ ಬೆಂಗಳೂರಿನ ಕಡಬಗೆರೆಯಲ್ಲಿ ವಾಸವಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಆಸ್ತಿ ವಿಚಾರವಾಗಿ ಹಲ್ಲೆ ಒಳಗಾಗಿರುವ ಮಮತಾ ಮತ್ತು ಈಕೆಯ ಪತಿ ವೈರಮುಡಿ ಗೆ ಹಲವು ಬಾರಿ ಸಂಘರ್ಷ ಗಳು ನೆಡೆದಿದೆ ಎನ್ನಲಾಗಿದೆ.

ಇನ್ನು ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಮಮತಾ ತಾಯಿ ಮಹದೇವಮ್ಮ ನನ್ನ ಅಳಿಯ ಕಡಬಗೆರೆ ಮನೆ ಮಾರಾಟ ಮಾಡುವಂತೆ ಕಳೆದ ಆರು ತಿಂಗಳಿಂದ ನನ್ನ ಮಗಳೊಂದಿಗೆ ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಈ ವಿಚಾರವಾಗಿ ಹಲವು ಬಾರಿ ನಾವುಗಳು ಬುದ್ಧಿ ಹೇಳಿದರು ಯಾರು ಮಾತು ಕೇಳುತ್ತಿರಲಿಲ್ಲ ಕಳೆದ ಎರಡು ದಿವಸಗಳ ಹಿಂದೆ ಗ್ರಾಮದಲ್ಲಿ ನ್ಯಾಯ ಮಾಡುವುದಾಗಿ ಕರೆಸಿಕೊಂಡು ಸೋಮವಾರ ಮದ್ಯಾಹ್ನದ ವೇಳೆಯಲ್ಲಿ ಜನ್ನೇನಹಳ್ಳಿ ಗ್ರಾಮದ ಸಮೀಪದ ನಿರ್ಜನ ತೋಪಿನಲ್ಲಿ ನನ್ನ ಮಗಳಿಗೆ ಮನಸೋ ಇಚ್ಚೆಥಳಿಸಿ ಮಾರಾಣಾಂತಿಕವಾಗಿ ದೈಹಿಕ ಹಲ್ಲೆ ನೆಡೆಸಿ ಇದು ಸಾಲವೆಂಬತೆ ನನ್ನ ಅಳಿಯ ವೈರಮುಡಿ ಹಾಗೂ ಈತನ ಜೊತೆಯಲ್ಲಿ ನನ್ನ ಸಂಬಂಧಿಗಳಾದ ಸುರೇಶ್, ಚಲುವರಾಜು,ನಾರಾಯಣಿ ಎಂಬುವರು ಗುಂಪಾಗಿ ಸೇರಿ ದ್ವಿ ಚಕ್ರ ವಾಹನವನ್ನು ಕಾಲಿನ ಮೇಲೆ ಹತ್ತಿಸುವ ಜೊತೆಗೆ ದೇಹದ ಎಲ್ಲಾ ಭಾಗಗಳಿಗೂ ಕೈಗೆ ಸಿಕ್ಕ ಆಯುಧಗಳಿಂದ ದೈಹಿಕ ಹಲ್ಲೆ ಮಾಡಿದ್ದಾರೆ ಇದರ ಜೊತೆಗೆ ನನಗೂ ಸಹ ಸಾಕಷ್ಟು ಹಲ್ಲೆ ನೆಡೆಸಿ ನಮ್ಮ ಕೊಲೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದಾರೆ.

ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿದ ಗಾಯಾಳು ಮಮತಾ ನನಗೆ ನನ್ನ ಪತಿ ಮನೆಮಾರಾಟ ಮಾಡಿ ಹಣ ಕೊಡುವಂತೆ ಕಿರುಕುಳ ನೀಡುತ್ತಿದ್ದ. ಕುಟುಂಬದ ಕಲಹದ ಹಿನ್ನಲೆಯಲ್ಲಿ ನನ್ನ ಮಕ್ಕಳು ನನ್ನ ಗಂಡನಮನೆಯಲ್ಲಿ ವಾಸವಿದ್ದರಿಂದ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸೋಣ ಎಂದು ಹೇಳಿ ಯಾವುದೇ ನ್ಯಾಯ ಮಾಡದೇ ನನ್ನ ನಡು ರಸ್ತೆಯಲ್ಲಿ ಮಾನವೀಯತೆ ಇಲ್ಲದಂತೆ ಹಾಕಿರುವ ಬಟ್ಟೆ ಹರಿಯುಂತೆ ಮನಬಂದಂತೆ ಹೊಡೆದು ಎದ್ದು ಹೋಗದಂತೆ ಕಾಲುಗಳ ಮೇಲೆ ಬೈಕ್ ಗಳನ್ನೂ ಹತ್ತಿಸಿದ್ದಾರೆ‌.

ಈ ವಿಚಾರದಲ್ಲಿ ನನ್ನ ಸಂಬಂಧಿಗಳು ‌ಸಹ ನನ್ನ ಗಂಡನೊಂದಿಗೆ ಸೇರಿ ನನ್ನ ಮತ್ತು ನನ್ನ ತಾಯಿಯ ಕೊಲೆಗೆ ಸಂಚುರೂಪಿಸಿದ್ದಾರೆ .ನನ್ನ ಮತ್ತು ನನ್ನ ತಾಯಿ ಇಬ್ಬರನ್ನು ಕೊಲೆ ಮಾಡಿದರೆ ಇರುವ ಎಲ್ಲಾ ಆಸ್ತಿ ನಮಗೆ ಸಿಗುತ್ತದೆ ಎಂಬ ದುರಾಸೆ ಇಂದ ಈ ಹಲ್ಲೆ ಮಾಡಿದ್ದು ಇವರಿಗೆ ಕಾನೂನು ರೀತ್ಯಾ ಶಿಕ್ಷೆ ಆಗಬೇಕು ನನಗಾಗಿರುವ ಅನ್ಯಾಯ ಬೇರೆ ಯಾವುದೇ ಹೆಣ್ಣಿಗೆ ಆಗಬಾರದು ಸಂಬಂಧ ಪಟ್ಟ ಪೊಲೀಸ್ ಇಲಾಖೆ ಇಂತಹ ವ್ಯಕ್ತಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಮನವಿಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?