ತುಮಕೂರು ಲೈವ್

80 ಲಕ್ಷ ಬಾಡಿಗೆ ವಸೂಲಿ ಮಾಡಿದ ಪಾಲಿಕೆ ಆಯುಕ್ತ !

Tumukuru: ಬಾಡಿಗೆ ಬಾಕಿ ಉಳಿಸಿಕೊಂಡಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿರುವ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ 80 ಲಕ್ಷ ರೂಪಾಯಿ ಬಾಡಿಗೆ ಮತ್ತು ತೆರಿಗೆ ಹಣವನ್ನು ಸಂಗ್ರಹಿಸಿದ್ದಾರೆ.

ಇಂದು ಬೆಳಗ್ಗೆ ತುಮಕೂರು ಖಾಸಗಿ ಬಸ್ ನಿಲ್ದಾಣದ ಅಂಗಡಿಗಳ ಮೇಲೆ ದಾಳಿ ಮಾಡಿದ ಆಯುಕ್ತರು ಬಾಕಿ ಉಳಿಸಿಕೊಂಡಿದ್ದವರಿಂದ ಬಾಡಿಗೆ ವಸೂಲಿ ಮಾಡಿದರು.

ಇದೇ ವೇಳೆ ಕಂದಾಯ ಮತ್ತು ನೀರಿನ ತೆರಿಗೆಯನ್ನೂ ಕೂಡ ವಸೂಲಿ ಮಾಡಿದ್ದಾರೆ.

Comment here