ಬಿಡದಿ: ವಿಧಾನಸಭೆಯ ಚುನಾವಣೆಯಲ್ಲಿ ದ್ವಿಗ್ವಿಜಯ ಸಾಧಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾಗದ ಮೊರೆ ಹೋಗಿದ್ದರು.
ಕೇತಗಾನಹಳ್ಳಿಯಲ್ಲಿ ತಮ್ಮ ತೋಟದ ಮನೆಯಲ್ಲಿ ಈ ಮಹಾಯಾಗ ಹಮ್ಮಿಕೊಂಡಿದ್ದಾರೆ. 9 ದಿನಗಳ ಕಾಲ ಮಹಾಯಾಗ ನಡೆಯಲಿದೆ.
ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಯಾಗಕ್ಕೆ ಚಾಲನೆ ನೀಡಲಾಯಿತು. ಅನಿತಾ ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಹಾಗೂ ಕುಟುಂಬದ ಕೆಲವರಷ್ಟೇ ಪಾಲ್ಗೊಂಡಿದ್ದಾರೆ.
ಆಯತ ಚಂಡಿಕಾಯಾಗವನ್ನು ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸಹ ಮಾಡಿದ್ದರು. ಈ ಯಾಗ ಮಾಡುವುದರಿಂದ ಅಧಿಕಾರ ಸಿಗಲಿದೆ ಎಂಬ ನಂಬಿಕೆಯಲ್ಲಿ ಯಾಗ ನಡೆಸಲಾಗುತ್ತಿದೆ ಎಂದರು.
ದೇವೇಗೌಡರ ಆರೋಗ್ಯ ವೃದ್ಧಿಯಾಗಲಿ, ಪಂಚರತ್ನ ಯಾತ್ರೆ ಯಶಸ್ವಿಯಾಗಲಿ ಎಂಬ ಉದ್ದೇಶದಿಂದ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ಎಚ್ ಡಿಕೆ ತಿಳಿಸಿದರು.
ಸುಮಾರು ಮುನ್ನೂರಕ್ಕೂ ಹೆಚ್ಚು ಪುರೋಹಿತರು ಯಾಗದಲ್ಲಿ ಪಾಲ್ಗೊಂಡಿದ್ದಾರೆ.