Wednesday, July 24, 2024
Google search engine
Homeಸಾಹಿತ್ಯ ಸಂವಾದಕವನಕವನ: ಬಿಡದ ಹೊರತು

ಕವನ: ಬಿಡದ ಹೊರತು

ಈ ಬಾರಿ ಬುದ್ಧ ಪೂರ್ಣಿಮಾವನ್ನು ಮೇ 5 ರಂದು ಶುಕ್ರವಾರ ಆಚರಿಸಲಾಗಿದೆ. ಗೌತಮ ಬುದ್ಧನು ತನ್ನ ಪ್ರವಚನಗಳಲ್ಲಿ ಮನುಷ್ಯ ತನ್ನ ಜೀವನವನ್ನು ಹೇಗೆ ಸಂತೋಷ ಮತ್ತು ಯಶಸ್ವಿಗೊಳಿಸಬಹುದು ಎಂದು ಹೇಳಿದ್ದಾನೆ. ಬುದ್ಧ ಹೇಳಿದ ವಿಷಯಗಳನ್ನು ನಾವು ಅಳವಡಿಸಿಕೊಳ್ಳುವುದರಿಂದ ಜೀವನದ ಅನೇಕ ತೊಂದರೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು. ಗೌತಮ ಬುದ್ಧ ಬೌದ್ಧ ಧರ್ಮದ ಸ್ಥಾಪಕ ಮತ್ತು ಹಿಂದೂ ಧರ್ಮದಲ್ಲಿ ಅವನನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ

ಕವನ: ಬಿಡದ ಹೊರತು


ಬಿಟ್ಟಿದ್ದೇ ಬರುವುದು
ಇದ್ದದ್ದು ಇದ್ದಲ್ಲೇ ಇರುವುದು.

ಬಿಟ್ಟಿದ್ದು
ಹೆಚ್ಚಾದಷ್ಟೂ
..ಇರುವುದೇ ಹೊರೆ ಎನಿಸುವುದು.

ಬಿಡುವದು
ಬಲವಂತವಾಗಬರದು..

ಬಿಡದೆ ಹೋದಲ್ಲಿ
ಸಾವು ನೋವಾಗುವುದು..

ಮಧ್ಯ ವಯಸ್ಸಿಗೂ
ಮುಕ್ತಿ ..ಬೇಡದೆ ಹೋದಲ್ಲಿ
ಮತ್ತೆ ಆಟದ ಸಾಮಾನಿಗೆ
ಅತ್ತ ಮಗುವಂತೆ…

ಬಿಡಲು ಗಟ್ಟಿ ಮನಸು ಬೇಕು
ಪಡೆಯಲು ಅಲ್ಲ.

ಬಿಡಲು ಏನೂ ಇಲ್ಲ
ಕೊಡಲು ಬೇಕಾದಷ್ಟು ಇದೆ.

ಬಿಟ್ಟದ್ದು ನಿನ್ನ ಅಹಂಕಾರ
ಬೇರೆ ಏನೂ ಅಲ್ಲ.

ಬಿಟ್ಟದ್ದು ನೀನೇ
ನಿನಗೆ ಹಾಕಿಕೊಂಡ ಉರುಳು..

ಬಿಡುವುದು
ಬವಣೆಯನ್ನು
ಬದುಕನ್ನಲ್ಲ.

ಎಲ್ಲರಿಗೂ
ಬದ್ಧನಾದರೆ
ಬುದ್ಧ ಆಗೆ ಆಗುವೆ

ಯಾರನ್ನೂ ನೋಯಿಸದೆ.

ಡಾ. ರಜನಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?