Saturday, July 27, 2024
Google search engine
Homeಪೊಲಿಟಿಕಲ್ಹೆಬ್ಬೂರು ಬಿಜೆಪಿ ಕಡೆಗೆ ಜನಸ್ತೋಮ: ತಾಲ್ಲೂಕು ಕೇಂದ್ರದ ಭರವಸೆ

ಹೆಬ್ಬೂರು ಬಿಜೆಪಿ ಕಡೆಗೆ ಜನಸ್ತೋಮ: ತಾಲ್ಲೂಕು ಕೇಂದ್ರದ ಭರವಸೆ

ಮನೆ ಮನೆ ಪ್ರಚಾರದ ವೇಳೆ ಕಂಡುಬಂದ ಜನಸ್ತೋಮ

ಹೆಬ್ಬೂರು: ಅಪಾರ ಜನರ ನಡುವೆ ಮನೆ ಮನೆಗೆ ಪ್ರಚಾರ ನಡೆಸುವ ಜನಾರ್ಶೀವಾದ ಯಾತ್ರೆಗೆ ಮಾಜಿ ಶಾಸಕ ಬಿ.ಸುರೇಶಗೌಡರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ಕಾರ್ಯಕರ್ತರು, ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಬ್ಬೂರು ಹೋಬಳಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಹೆಬ್ಬೂರು ಐತಿಹಾಸಿಕ ಊರು. ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಮಾಡುವ ಸಲುವಾಗಿ ತಾವು ಶಾಸಕರಾಗಿದ್ದಾಗ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಆದರೆ ಈಗಿನ ಶಾಸಕರು ಯಾವುದೇ ಕೆಲಸ ಮಾಡದೇ ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ ಎಂದರು.

ಸುರೇಶಗೌಡರನ್ನು ಹೂವಿ‌ನ ಮಳೆಯಲ್ಲಿ ತೋಯಿಸಿದ ಹೆಬ್ಬೂರು ಜನರು

ಹೆಬ್ಬೂರಿಗೆ ಬಸ್ ನಿಲ್ದಾಣ ಮಾಡಿದೆ. ಪದವಿ ಕಾಲೇಜು ತಂದೆ.‌ ಹೇಮಾವತಿ ಏತ ನೀರಾವರಿ ಯೋಜನೆಯನ್ನು ನೆನಪು ಮಾಡಿಕೊಂಡರು.

ಹೆಬ್ಬೂರು ದೇವಸ್ಥಾನಗಳ ಊರು. ಬ್ಯಾಟರಾಯನ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿದೆ. ಇಲ್ಲಿರುವ ದೇವಸ್ಥಾನಗಳು, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಪ್ರಚಾರದ ವೇಳೆ ನೂರಾರು ಜನರು ಸೇರಿದ್ದರು. ಬಿಜೆಪಿ ಹಲವು ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?