![](https://publicstory.in/wp-content/uploads/2023/04/img-20230421-wa00251121821694408548610-1024x682.jpg)
ಹೆಬ್ಬೂರು: ಅಪಾರ ಜನರ ನಡುವೆ ಮನೆ ಮನೆಗೆ ಪ್ರಚಾರ ನಡೆಸುವ ಜನಾರ್ಶೀವಾದ ಯಾತ್ರೆಗೆ ಮಾಜಿ ಶಾಸಕ ಬಿ.ಸುರೇಶಗೌಡರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು.
ಕಾರ್ಯಕರ್ತರು, ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಬ್ಬೂರು ಹೋಬಳಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.
ಹೆಬ್ಬೂರು ಐತಿಹಾಸಿಕ ಊರು. ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಮಾಡುವ ಸಲುವಾಗಿ ತಾವು ಶಾಸಕರಾಗಿದ್ದಾಗ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಆದರೆ ಈಗಿನ ಶಾಸಕರು ಯಾವುದೇ ಕೆಲಸ ಮಾಡದೇ ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ ಎಂದರು.
![](https://publicstory.in/wp-content/uploads/2023/04/img-20230421-wa00246453627950325435720-1024x682.jpg)
ಹೆಬ್ಬೂರಿಗೆ ಬಸ್ ನಿಲ್ದಾಣ ಮಾಡಿದೆ. ಪದವಿ ಕಾಲೇಜು ತಂದೆ. ಹೇಮಾವತಿ ಏತ ನೀರಾವರಿ ಯೋಜನೆಯನ್ನು ನೆನಪು ಮಾಡಿಕೊಂಡರು.
ಹೆಬ್ಬೂರು ದೇವಸ್ಥಾನಗಳ ಊರು. ಬ್ಯಾಟರಾಯನ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿದೆ. ಇಲ್ಲಿರುವ ದೇವಸ್ಥಾನಗಳು, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಪ್ರಚಾರದ ವೇಳೆ ನೂರಾರು ಜನರು ಸೇರಿದ್ದರು. ಬಿಜೆಪಿ ಹಲವು ಮುಖಂಡರು ಇದ್ದರು.