Publicstory. in
ತುರುವೇಕೆರೆ: ತಾಲ್ಲೂಕಿನ ಕಸಬಾದ ತಾವರೆಕೆರೆ ಬಡಾವಣೆಯಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ಕಾರಣ ರಸ್ತೆಗೆ ಬಿದ್ದಿದೆ ಬೇಲಿ.
ಜನರ ಸಂಚಾರಕ್ಕೆ ರಸ್ತೆ ಬಿಡಿಸಿಕೊಡುವಂತೆ ತಾಲ್ಲೂಕು ಆಡಳಿತವನ್ನು ಬಡಾವಣೆಯ ಗ್ರಾಮಸ್ಥರು ಸೋಮವಾರ ಒತ್ತಾಯಿಸಿದರು.
ಕಳೆದ 50 ವರ್ಷಗಳ ಹಿಂದೆ ಸರ್ಕಾರದಿಂದ ಮನೆಕಟ್ಟಿಕೊಳ್ಳಲು ಇಲ್ಲಿ ಸೈಟ್ ಸಹ ನೀಡಿತ್ತು. ಹಾಗಾಗಿ 45 ಕುಟುಂಬಗಳು ಇಂದಿಗೂ ವಾಸಮಾಡುತ್ತಿದ್ದಾರೆ.
ಜನ ಸಂಚಾರಕ್ಕೆಂದು ರಸ್ತೆ ಕರಾಬನ್ನು ಸಹ ಬಿಟ್ಟಿದ್ದು ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಹಾಗು ಸರ್ಕಾದರಿಂದ ರಸ್ತೆ ಮಾಡಲು ಅನುದಾನವೂ ಸಹ ನಿಗದಿಯಾಗಿತ್ತು.
ಆದರೆ ಈಚಿನ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಸೋತ ವ್ಯಕ್ತಿಯೊಬ್ಬರು ಈ ಜಾಗ ನಮ್ಮ ಕಂದಾಯ ಜಮೀನಾಗಿದೆಂದು ರಸ್ತೆಗೆ ಬೇಲಿ ಹಾಕಿಕೊಂಡಿದ್ದರು. ಇದರಿಂದ ಬಡಾವಣೆಯ ಜನರ ಓಡಾಟಕ್ಕೆ ಇದೊಂದೇ ದಾರಿ ಇದ್ದುದರಿಂದ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಶಾಶ್ವತ ರಸ್ತೆ ಮಾಡಿಕೊಡುವಂತೆ ತಾವರೆಕೆರೆ ಬಡಾವಣೆಯ ಗ್ರಾಮಸ್ಥರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ನೇತೃತ್ವದಲ್ಲಿ ತಹಶೀಲ್ದಾರ್ ಆರ್.ನಯಿಂಉನ್ನೀಸಾ ಹಾಗು ಲೋಕಮ್ಮನಹಳ್ಳಿ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಕೆಂಪೇಗೌಡ, ವೆಂಕಟೇಶ್, ಗುತ್ತಿಗೆದಾರ ಮಂಜಣ್ಣ, ಬಸವರಾಜು ಮತ್ತು ಗ್ರಾಮಸ್ಥರುಗಳು ಇದ್ದರು.