ತುಮಕೂರು:ತಂತಿಗೆ ಸಿಲುಕಿದ್ದ ಗಾಳಿಪಟವನ್ನು ತೆಗೆಯಲು ಹೋದ ವ್ಯಕ್ತಿಯೊಬ್ಬರು ಹೈಟೆಂನ್ಷನ್ ವೈರ್ ತಗುಲಿ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಸದಾಶಿವನಗರದಲ್ಲಿ ಅಬ್ಸಲ್ ಮಗ ಮನೆಯ ಮುಂದೆ ನಿಂತು ಗಾಳಿಪಟ ಹಾರಿಸುತ್ತಿದ್ದು. ಗಾಳಿ ಜೋರಾಗಿ ಬೀಸಿದ್ದರಿಂದ ಆ ಗಾಳಿಪಟ ವಿದ್ಯುತ್ ತಂತಿಗೆ ಸಿಲುಕಿಕೊಂಡಿದೆ. ಆಗ ಅಬ್ಸಲ್ ಬಂದು ಗಾಳಿಪಟ ತೆಗೆದುಕೊಡಲು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಗಾಳಿಪಟ ತೆಗೆಯುವಾಗ ಹೈಟೆಂನ್ಷನ್ ವೈಯರ್ ಅಬ್ಸಲ್ ಗೆ ತಗುಲಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪೌರಕಾರ್ಮಿಕ ನರಸಿಂಹಮೂರ್ತಿ ಕೇಸರಿ ಬಾವುಟ ತೆರವುಗೊಳಿಸಲು ಹೋಗಿ ಮೃತಪಟ್ಟ ವಾರದಲ್ಲೇ 50 ವರ್ಷದ ಅಬ್ಸಲ್ ಕೂಡ ಅದೇ ರೀತಿ ಮೃತಪಟ್ಟಿದ್ದಾರೆ.
ಮೊದಲನೆಯದು ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಡೆದಿದ್ದರೆ, ಮತ್ತೊಂದು ಗಾಳಿಪಟ ತೆಗೆದುಕೊಡುವಾಗ ಸಂಭವಿಸಿದೆ.